Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ9 July 2018 12:02 AM IST
share
ಓ ಮೆಣಸೇ...

ಪ್ರಾಮಾಣಿಕವಾಗಿ ದುಡಿಯುವ ಕಾರ್ಯಕರ್ತರಿದ್ದರೆ ಸಾಕು, ಹಿಂದಿನಿಂದ ಚೂರಿ ಹಾಕುವವರು ಬೇಡ

- ಶಕುಂತಳಾ ಶೆಟ್ಟಿ, ಮಾಜಿ ಶಾಸಕಿ

ಪ್ರಾಮಾಣಿಕವಾಗಿ ಮುಂದಿನಿಂದ ಚೂರಿ ಹಾಕಲು ಕಾರ್ಯಕರ್ತರಿಗೆ ಕರೆ ಕೊಡುತ್ತಿರುವಂತಿದೆ.

---------------------

ಎಲ್ಲಿ ಶ್ರಮವಿರುತ್ತದೋ ಅಲ್ಲಿ ಫಲವಿರುತ್ತದೆ

- ಡಿ.ಕೆ.ಶಿವಕುಮಾರ್, ಸಚಿವ

ಅದರ ಫಲವನ್ನು ಸಚಿವರಾಗಿ ಅನುಭವಿಸುತ್ತಿದ್ದೀರಿ.

---------------------

ರಾಜಕಾರಣದಿಂದ ಸರಕಾರ ನಡೆಸಲು ಸಾಧ್ಯವಿಲ್ಲ

- ಡಿ.ಸಿ. ತಮ್ಮಣ್ಣ , ಸಚಿವ

ಹಣದಿಂದ ಸರಕಾರ ರಚಿಸಲು ಸಾಧ್ಯವಿದೆ.

---------------------

ಕಾನೂನಿನಿಂದ ಯಾವುದೇ ಭ್ರಷ್ಟಾಚಾರ, ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ

- ಯು.ಟಿ.ಖಾದರ್, ಸಚಿವ

ಕಾನೂನನ್ನು ತೆಗೆದುಹಾಕಬೇಕು ಎಂದು ಹೇಳುತ್ತಿದ್ದೀರಿ.

---------------------

ಜಿಎಸ್‌ಟಿ ಆರೆಸ್ಸೆಸ್ ತೆರಿಗೆಯಾಗಿದೆ

-ಪಿ.ಚಿದಂಬರಂ, ಮಾಜಿ ಸಚಿವ

ಕಾಂಗ್ರೆಸ್ ಮುಖಂಡ ಪ್ರಣವ್ ಮುಖರ್ಜಿ ಆ ತೆರಿಗೆಯನ್ನು ಉದ್ಘಾಟಿಸಲು ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸಿರಬೇಕು.

---------------------

ಹಾಲಿಗೂ, ಬೆಂಝ್ ಕಾರಿಗೂ ಒಂದೇ ರೀತಿಯ ತೆರಿಗೆ ಹಾಕಲು ಸಾಧ್ಯವಿಲ್ಲ

- ನರೇಂದ್ರ ಮೋದಿ, ಪ್ರಧಾನಿ

ಅಂದರೆ ಬೆಂಝ್ ಕಾರಿಗಿಂತ ಹಾಲಿಗೆ ಹೆಚ್ಚು ತೆರಿಗೆ ಹಾಕುವ ಉದ್ದೇಶವೇ?
---------------------

ಮಂಗಗಳು ನಮ್ಮ ಪೂರ್ವಜರಲ್ಲ

- ಸತ್ಯಪಾಲ್ ಸಿಂಗ್, ಕೇಂದ್ರ ಸಚಿವ

ನೀವು ಮಾಡುತ್ತಿರುವ ಅನಾಹುತ ನೋಡಿದರೆ ಮಂಗಗಳೇ ‘ನಾವು ಅವರ ಪೂರ್ವಜರಲ್ಲ’ ಎಂದು ಹೇಳುವಂತಿದೆ.

---------------------
 
ಸಮಾಜವನ್ನು ಒಗ್ಗೂಡಿಸುವ ಜವಾಬ್ದಾರಿ ಮಾಧ್ಯಮದ ಮೇಲಿದೆ

- ನಳಿನ್ ಕುಮಾರ್ ಕಟೀಲು, ಸಂಸದ ಮತ್ತು ಬೆಂಕಿ ಹಚ್ಚುವ ಜವಾಬ್ದಾರಿ ನಿಮ್ಮದೇ?
---------------------

ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದಬಾರದು

- ವಿನಯ ಕುಮಾರ್ ಸೊರಕೆ, ಮಾಜಿ ಸಚಿವ

ಅವರ ಆತಂಕವೆಲ್ಲ ತಮ್ಮ ನಾಯಕರ ಕುರಿತಂತೆ.

---------------------

ಇನ್ನೊಂದು ಧರ್ಮವನ್ನು ಪ್ರೀತಿಸುತ್ತೇನೆ ಎನ್ನುವುದು ಬಿಟ್ಟರೆ ನನ್ನ ಮೇಲೆ ಯಾವ ಆರೋಪಗಳೂ ಇಲ್ಲ

- ರಮಾನಾಥರೈ, ಮಾಜಿ ಸಚಿವ

ಈಗ ಚುನಾವಣೆಯಲ್ಲಿ ‘ದ್ವೇಷ’ಕ್ಕಷ್ಟೇ ಬೆಲೆ.
---------------------

ರಾಜಕೀಯದಲ್ಲಿ ಹೆಣ್ಣು ಅಳಿವಿನಂಚಿನ ಜೀವಿ ಇದ್ದಂತೆ

- ತೇಜಸ್ವಿನಿ ಗೌಡ, ಬಿಜೆಪಿ ನಾಯಕಿ
ಅಳಿವಿನಂಚಿನಲ್ಲಿರುವ ಜೀವಿಯ ಅಳಲು.

---------------------

ಸಿದ್ದರಾಮಯ್ಯ ರೈಟ್ ಹೇಳದೆ ಎಚ್ಡಿಕೆ ಸರಕಾರ ಚಲಿಸದು

- ಆಯನೂರು ಮಂಜುನಾಥ್, ವಿ.ಪ. ಸದಸ್ಯ

ಅಂತೂ ಅವರನ್ನು ಬಸ್‌ ಕಂಡಕ್ಟರ್ ಸ್ಥಾನಕ್ಕೆ ಇಳಿಸಿದಿರಿ.

---------------------

ಚುನಾವಣಾ ಪೂರ್ವ ಮಹಾಮೈತ್ರಿ ಸಂಭವಿಸುವ ಸಾಧ್ಯತೆಯಿಲ್ಲ

- ಸೀತಾರಾಂ ಯೆಚೂರಿ, ಸಿಪಿಎಂ ನಾಯಕ

ಚುನಾವಣೆಯನಂತರದ ಸೋಲಿನ ಬಳಿಕ ಆ ಬಗ್ಗೆ ಚಿಂತಿಸಬಹುದು.

---------------------

ಇತ್ತೀಚಿನ ದಿನಗಳಲ್ಲಿ ಜಾತಿ ರಾಜಕಾರಣ ತುಂಬಾ ಹೊಲಸಾಗಿ ಬಿಟ್ಟಿದೆ

- ಅನಂತ ಕುಮಾರ್ ಹೆಗಡೆ, ಕೇಂದ್ರ ಸಚಿವ

ಆ ಹೊಲಸಿನಲ್ಲೇ ತಾನೇ ತಾವು ಸಚಿವರಾಗಿ ಅರಳಿದ್ದು.

---------------------

ಸಮಯ ಬಂದಾಗ ವೌನ ಮುರಿಯುವೆ

- ಎಚ್. ಡಿ. ದೇವೇಗೌಡ, ಮಾಜಿ ಪ್ರಧಾನಿ
ಮೈತ್ರಿ ಮುರಿಯುವ ಸಮಯ ಬಂದಾಗಲೇ?

---------------------

ಪಿಡಿಪಿ-ಕಾಂಗ್ರೆಸ್ ಎರಡೂ ಉಗ್ರರ ಪರವಿರುವ ಪಕ್ಷಗಳು

- ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ

ಪಿಡಿಪಿಯ ಜೊತೆಗೆ ಬಿಜೆಪಿ ಮೈತ್ರಿ ಮಾಡಿದ್ದು, ಇಷ್ಟು ಬೇಗ ಜನರು ಮರೆಯಲಾರರು.

---------------------

ರಾಮಮಂದಿರ ನಿರ್ಮಾಣಕ್ಕಾಗಿ ಸಂಗ್ರಹಿಸಿದ್ದ ಇಟ್ಟಿಗೆಗಳನ್ನು ಬಿಜೆಪಿಯವರು ತಿಪ್ಪೆಗುಂಡಿಗೆ ಎಸೆದಿದ್ದಾರೆ

- ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಮಮಂದಿರ ಕಟ್ಟುವುದರ ಬಗ್ಗೆ ನಿಮಗೇಕೆ ಇಷ್ಟು ಆಸಕ್ತಿ?

---------------------

ತಾಳಿ ಕಟ್ಟಿಯಾಗಿದೆ. ಸಂಸಾರ ಶುರುವಾಗಿದೆ. ಸಂಸಾರವನ್ನು ಹಾಳು ಮಾಡಬೇಡಿ

- ಸಿಎಂ ಇಬ್ರಾಹೀಂ, ಕಾಂಗ್ರೆಸ್ ನಾಯಕ

ಪ್ರಸ್ಥ ಇನ್ನೂ ನಡೆದೇ ಇಲ್ಲ ಎನ್ನುವುದೇ ಎಲ್ಲಕ್ಕೂ ಕಾರಣ.

---------------------

ಮುಖ್ಯಮಂತ್ರಿ ಕುಮಾರಸ್ವಾಮಿ ಸಾಕಷ್ಟು ಸರ್ಕಸ್ ಮಾಡಿ ಬಜೆಟ್ ಮಂಡಿಸಿದ್ದಾರೆ

- ಎಚ್. ವಿಶ್ವನಾಥ್, ಶಾಸಕ

ಅವರು ಮಂಡಿಸಿದ್ದು ಹಾಸನ ರಾಜ್ಯದ ಬಜೆಟ್.

---------------------

ಬಜೆಟ್ ಮಂಡಿಸುವ ಮೂಲಕ ಸಿಎಂ ಕುಮಾರಸ್ವಾಮಿ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನ ನಡೆಸಿದ್ದಾರೆ

- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವ
ನಿಮ್ಮದು ಏಣಿ ಬೀಳಿಸುವ ಪ್ರಯತ್ನವೇ?

share
ಪಿ.ಎ.ರೈ
ಪಿ.ಎ.ರೈ
Next Story
X