ಹನೂರು: ಶ್ರೀಗಂಧದ ಮರ ಕಳವು

ಹನೂರು,ಜು.09 : ಮಲೈಮಹದೇಶ್ವರ ಬೆಟ್ಟದ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ವಸತಿ ಗೃಹದ ಕಾಂಪೌಡ್ ಒಳಗಿದ್ದ ಶ್ರೀಗಂಧ ಮರ ಕಳವು ಆದ ಕಾರಣ ಸ್ಥಳಕ್ಕೆ ಡಿಆರ್ಎಫ್ಒ ಶ್ರೀದರ್ ಮೂರ್ತಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ಶ್ರೀಗಂಧ ಮರ ಕಳವು ಘಟನೆ ಸಂಬಂಧ ಈಗಾಗಲೇ ತನಿಖೆ ಕೈಗೂಂಡಿದ್ದು, ಅತೀ ಶೀಘ್ರದಲ್ಲಿ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಲೈಮಹದೇಶ್ವರ ಬೆಟ್ಟದ ಆರ್.ಎಫ್.ಒ ಗುರುರಾಜ್ ಬಿ ಸಂಕಶ್ವರ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳಾದ ಪುಟ್ಟಸ್ವಾಮಿ, ದರ್ಮಸ್ವಾಮಿ, ಹಾಗೂ ಇನ್ನಿತರರು ಹಾಜರಿದ್ದರು.
Next Story





