ಅರಸ್ತಾನ: ಮದ್ರಸ ಮಕ್ಕಳಿಗೆ ಪುಸ್ತಕ ವಿತರಣೆ

ಮಂಗಳೂರು, ಜು.11: ಯಾದ್ ಫೌಂಡೇಶನ್ ಮಲಾರ್ ವತಿಯಿಂದ ಅರಸ್ತಾನದ ಹಯಾತುಲ್ ಇಸ್ಲಾಮ್ ಮದ್ರಸದ ವಿದ್ಯಾರ್ಥಿಗಳಿಗೆ ಉಚಿತ ಕುರ್ಆನ್ ಹಾಗೂ ಪುಸ್ತಕ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಮದ್ರಸದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ರಿಯಾಝ್ ಅಹ್ಮದ್ ಪಾವೂರು ಅಧ್ಯಕ್ಷತೆ ವಹಿಸಿದ್ದರು. ಅರಸ್ತಾನ ಅಲ್ ಮುಬಾರಕ್ ಜುಮ್ಮಾ ಮಸ್ಜಿದ್ನ ಖತೀಬ್ ಸಲಾಂ ಪೈಝಿ ಕಾರ್ಯಕ್ರಮ ಉದ್ಘಾಟಿಸಿದರು.ಪಾವೂರು ಗ್ರಾಪಂ ಅಧ್ಯಕ್ಷ ಫಿರೋಝ್ ಮಲಾರ್, ಮಸೀದಿಯ ಉಪಾಧ್ಯಕ್ಷ ಡಿ.ಮುಹಮ್ಮದ್, ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಅಹ್ಮದ್, ಕೋಶಾಧಿಕಾರಿ ಎನ್.ಕರೀಂ, ಮಲಾರ್ ಆಸರೆ ಫೌಂಡೇಶನ್ ಅಧ್ಯಕ್ಷ ಬಶೀರ್ ಅಕ್ಷರ ನಗರ, ಮದ್ರಸದ ಸದರ್ ಮುಅಲ್ಲಿಂ ಮುಸ್ತಫಾ ಝಹರಿ ಮತ್ತಿತರರು ಉಪಸ್ಥಿತರಿದ್ದರು.
Next Story