Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಭೂಸ್ಪರ್ಶ ಮಾಡಿದ ಮೇಲೆ ರೈಲಾಗಿ ಬದಲಾಗುವ...

ಭೂಸ್ಪರ್ಶ ಮಾಡಿದ ಮೇಲೆ ರೈಲಾಗಿ ಬದಲಾಗುವ ವಿಮಾನವಿದು!

ನೀವೆಣಿಸದ ರೀತಿಯಲ್ಲಿದೆ ಭವಿಷ್ಯದ ತಂತ್ರಜ್ಞಾನ

ವಾರ್ತಾಭಾರತಿವಾರ್ತಾಭಾರತಿ12 July 2018 10:15 PM IST
share
ಭೂಸ್ಪರ್ಶ ಮಾಡಿದ ಮೇಲೆ ರೈಲಾಗಿ ಬದಲಾಗುವ ವಿಮಾನವಿದು!

ವಾಶಿಂಗ್ಟನ್, ಜು. 12: ಅದು ಆಧುನಿಕ ವಿನ್ಯಾಸದ ವಿಮಾನ. ರನ್‌ವೇಯಲ್ಲಿ ಭೂಸ್ಪರ್ಶ ಮಾಡುತ್ತದೆ, ತನ್ನ ರೆಕ್ಕೆಗಳನ್ನು ಒಳಗೆ ಎಳೆದುಕೊಳ್ಳುತ್ತದೆ. ನಂತರ ಅದು ರೈಲಿನ ರೂಪಕ್ಕೆ ಪರಿವರ್ತನೆಗೊಳ್ಳುತ್ತದೆ ಹಾಗೂ ರೈಲು ಹಳಿಗಳತ್ತ ಚಲಿಸುತ್ತದೆ. ಅಂತಿಮವಾಗಿ ನಿಮ್ಮ ಸಮೀಪದ ರೈಲು ನಿಲ್ದಾಣದಲ್ಲಿ ನಿಮ್ಮನ್ನು ಇಳಿಸುತ್ತದೆ...

ಹಾಲಿವುಡ್‌ನ ಸೈ-ಫೈ (ವೈಜ್ಞಾನಿಕ ಚಿತ್ರ) ಚಿತ್ರವೊಂದರ ಕಲ್ಪನೆಯನ್ನು ಇದು ಹೋಲುತ್ತದೆಯಲ್ಲವೇ?

ಆದರೆ, ಇದು ವೈಜ್ಞಾನಿಕ ಚಿತ್ರದ ಕಲ್ಪನೆಯಲ್ಲ. ಶೀಘ್ರದಲ್ಲೇ ಅವತರಿಸಲಿರುವ ವಾಸ್ತವಿಕ ತಂತ್ರಜ್ಞಾನ!

ಫ್ರಾನ್ಸ್ ಉದ್ಯಮಿ ವೌರಿಸ್ ರಿಕ್ಕಿ ಈ ವಿನೂತನ ಕಲ್ಪನೆಯನ್ನು ಬೋಯಿಂಗ್ ಕೊ. ಮತ್ತು ಇತರ ವಿಮಾನ ನಿರ್ಮಾಣ ಕಂಪೆನಿಗಳ ಮುಂದಿಟ್ಟಿದ್ದಾರೆ.

‘ಲಿಂಕ್ ಆ್ಯಂಡ್ ಫ್ಲೈ’ ಎನ್ನುವುದು ‘ಅಕ್ಕಾ ಟೆಕ್ನಾಲಜಿ’ಯ ನೂತನ ವಿಮಾನ ವಿನ್ಯಾಸವಾಗಿದೆ. ಈ ಮಾದರಿಯ ವಿಮಾನಗಳು ವಿಮಾನ ನಿಲ್ದಾಣಗಳಲ್ಲಿ ರೈಲುಗಳಾಗಿ ಮತ್ತು ವಿಮಾನಗಳಾಗಿ ಪರಿವರ್ತನೆಗೊಳ್ಳುತ್ತವೆ. ಇದೇ ವಿಮಾನಗಳು ರೈಲುಗಳಾಗಿ ಪ್ರಯಾಣಿಕರ ಸಮೀಪದ ರೈಲು ನಿಲ್ದಾಣಗಳಿಂದ ಕರೆತರುತ್ತವೆ ಹಾಗೂ ಅಲ್ಲಿಗೆ ಕರೆದುಕೊಂಡು ಹೋಗಿ ಬಿಡುತ್ತವೆ.

‘‘ಕಾರುಗಳು ಇಲೆಕ್ಟ್ರಿಕ್ ಮತ್ತು ಸ್ವಯಂಚಾಲಿತಗೊಂಡ ಬಳಿಕ, ಮುಂದಿನ ದೊಡ್ಡ ಪರಿವರ್ತನೆಯ ಸರದಿ ವಿಮಾನಗಳದ್ದು’’ ಎಂದು ಅಕ್ಕಾ ಟೆಕ್ನಾಲಜಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೌರಿಸ್ ರಿಕ್ಕಿ ಹೇಳುತ್ತಾರೆ.

ಈ ಕಲ್ಪನೆಯ 3ಡಿ ವೀಡಿಯೊವೊಂದನ್ನು ಕಂಪೆನಿಯು ಬಿಡುಗಡೆ ಮಾಡಿದೆ.

ಭವಿಷ್ಯದ ವಿಮಾನದ ವಿನ್ಯಾಸ

‘ಅಕ್ಕಾ’ ಕಂಪೆನಿಯ ಭವಿಷ್ಯದ ವಿಮಾನದ ಕಲ್ಪನೆ ಹೀಗಿದೆ.

ಪ್ರಯಾಣಿಕರು ತಮ್ಮ ಸಮೀಪದ ರೈಲು ನಿಲ್ದಾಣಗಳಲ್ಲಿ ರೈಲಿನಂಥ ಟ್ಯೂಬ್‌ಗೆ ಹತ್ತುತ್ತಾರೆ. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ವೇಳೆ ಭದ್ರತಾ ತಪಾಸಣೆಯಾಗಿ ಅವರ ಕಣ್ಣಿನ ರೆಟಿನಾಗಳನ್ನು ಸ್ಕಾನ್ ಮಾಡಲಾಗುತ್ತದೆ.

ವಿಮಾನ ನಿಲ್ದಾಣದಲ್ಲಿ ಹಾರುವುದಕ್ಕಾಗಿ ಅದಕ್ಕೆ ರೆಕ್ಕೆಗಳನ್ನು ಜೋಡಿಸಲಾಗುತ್ತದೆ ಹಾಗೂ ವಿಮಾನ ಮೇಲೆ ಹಾರುತ್ತದೆ. ಇನ್ನೊಂದು ವಿಮಾನ ನಿಲ್ದಾಣದಲ್ಲಿ ಇಳಿಯುವ ವಿಮಾನ ರೈಲಾಗಿ ಪರಿವರ್ತನೆಗೊಂಡು ರೈಲು ಹಳಿಗಳಿಗೆ ಇಳಿದು ಪ್ರಯಾಣಿಕರನ್ನು ಅವರ ಸಮೀಪದ ರೈಲು ನಿಲ್ದಾಣಗಳಿಗೆ ತಲುಪಿಸುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X