ಜು.14: ಎಸ್ಸೆಸ್ಸೆಫ್ ಮಹಬ್ಬ, ಸ್ನೇಹೊಪದೇಶ
ಉಳ್ಳಾಲ, ಜು. 13: ಕ್ಯಾಂಪಸ್ ಎಸ್ಸೆಸ್ಸೆಫ್ ಉಳ್ಳಾಲ ಇದರ ವತಿಯಿಂದ ಜು. 14ರಂದು ಮಗ್ರಿಬ್ ನಮಾಝ್ ಬಳಿಕ ಮೇಲಂಗಡಿ ತಾಜುಲ್ ಉಲಮಾ ಸುನ್ನೀ ಸೆಂಟರ್, ಮೇಲಂಗಡಿಯಲ್ಲಿ ‘ಮಹಬ್ಬ, ಗೆಳೆತನ ಮತ್ತು ಸ್ನೇಹದ ಕುರಿತು ಆತ್ಮೀಯ ಉಪದೇಶ’ ವಿಷಯದಲ್ಲಿ ಸೆಮಿನಾರ್ ನಡೆಯಲಿದೆ.
ಮಳ್ಹರ್ ದಅವಾ ಕಾಲೇಜ್ ಪ್ರಾಂಶುಪಾಲರಾದ ಅನಸ್ ಅಲ್ ಕಾಮಿಲ್ ಸಖಾಫಿ, ಶಿರಿಯ ಮತ್ತು ತೋಟ ಮಸೀದಿ ಇಮಾಮ್ ಬಿ.ಕೆ. ಯೂನುಸ್ ಇಮ್ದಾದಿ ಮಂಗಳಪದವು ಉಪದೇಶ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





