ಬ್ರಹ್ಮಾವರ: ‘ಶಿಕ್ಷಣ- ಶಾಂತಿ’ ಕುರಿತು ಇಸ್ಲಾಮಿ ಸಮ್ಮೇಳನ

ಬ್ರಹ್ಮಾವರ, ಜು.15: ಉಡುಪಿ ದಾರುಲ್ ಹುದಾ ಗೈಡೆನ್ಸ್ ಸೆಂಟರ್ ವತಿಯಿಂದ ಶಿಕ್ಷಣ ಮತ್ತು ಶಾಂತಿ ಶೀರ್ಷಿಕೆ ಅಡಿಯಲ್ಲಿ ಇಸ್ಲಾಮಿ ಸಮ್ಮೇಳನವು ಶನಿವಾರ ಬ್ರಹ್ಮಾವರದ ಮದರ್ ಪ್ಯಾಲೇಸ್ ಅಡಿಟೋರಿಯಂನಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿದ್ದ ಇಸ್ಲಾಮಿ ವಿದ್ವಾಂಸ ಶೇಕ್ ಡಾ.ಆರ್.ಕೆ.ನೂರ್ ಮುಹಮ್ಮದ್ ಮದನಿ ಮಾತನಾಡಿ, ಶಾಂತಿಯುತ ಸಮಾಜವನ್ನು ಸ್ಥಾಪಿಸಲು ಪ್ರವಾದಿ ಮುಹಮ್ಮದ್(ಸ)ರವರ ಜೀವನ ನಮಗೆ ಅತ್ಯುತ್ತಮ ಮಾದರಿ ಯಾಗಿದೆ. ಒಳಿತಿನ ಕಾರ್ಯಗಳಲ್ಲಿ ದೇಶ ಭಾಂದವರೊಂದಿಗೆ ಪರಸ್ಪರ ಸಹಕರಿ ಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮದೀನಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಅಬ್ದುರ್ರಝಾಕ್ ಹುಮಾಮಿ, ಮುಖ್ಯ ಪ್ರವಚನಕಾರ ಶೇಕ್ ಹಾಫೀಝ್ ಅಬ್ದುಲ್ ಅಝೀಮ್ ಮದನಿ ಮಾತನಾಡಿದರು.
ಶೇಕ್ ಹಾಫೀಝ್ ಅಬ್ದುಲ್ ಹಸೀಬ್ ಮದನಿ ಇಸ್ಲಾಮಿನಲ್ಲಿ ಶಿಕ್ಷಣದ ಪ್ರಾಮುಖ್ಯತೆ, ಪೂನಾದ ವಿದ್ವಾಂಸ ಶೇಕ್ ಅಬೂ ಝೈದ್ ಝಮೀರ್ ಮಾಧ್ಯಮ ಮತ್ತು ನಮ್ಮ ಸಮಾಜ, ಶೇಕ್ ಡಾ.ಅಬ್ದುಲ್ ಮುಕೀತ್ ಮದನಿ ಶಿಕ್ಷಣ ಸಂಸ್ಥೆಗಳಿಗೆ ಎದುರಾಗುವ ಸಮಸ್ಯೆ ಮತ್ತು ಅದರ ಪರಿಹಾರ ಹಾಗೂ ಶೇಕ್ ಅಬ್ದುಲ್ ಲತೀಫ್ ಮದನಿ ಭಾರತದ ಪ್ರಸಕ್ತ ಪರಿಸ್ಥಿತಿಯಲ್ಲಿ ಮುಸ್ಲಿಮ್ ಮಹಿಳೆಯರ ಹೊಣೆಗಾರಿಕೆ ಎಂಬ ವಿಯದ ಮೇಲೆ ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ವತಿಯಿಂದ ಮಸೀದಿ, ಮದ್ರಸಾ, ಗ್ರಂಥಾಲಯ ಹಾಗೂ ಸಾರ್ವಜನಿಕರಿಗೆ ಉಚಿತ ಕುರಾನ್ ಪ್ರತಿಯನ್ನು ವಿತರಿಸಲಾಯಿತು. ಮಣಿಪಾಲ ಕೆಎಂಸಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಯುನಾನಿ ವೈದ್ಯ ಡಾ. ಯಾಸರ್ ಅರಫಾತ್, ಬಾಬಾ ನಝರ್ ಮುಹಮ್ಮದ್ ಖಾನ್, ಕನ್ನಡ ತರಬೇತುದಾರ ಮುಹಮ್ಮದ್ ಉಮರ್ ಶರೀಫ್ ಹರಿಹರ, ಇಂಗ್ಲಿಷ್ ತರಬೇತುದಾರ ಅಬ್ದುರ್ರಾಝೀಕ್ ಸೌದಾಗರ್ ಉಪಸ್ಥಿತರಿ ದ್ದರು. ಶೇಕ್ ಅಬ್ದುಲ್ ಅಝೀಝ್ ಉಮರಿ ಕುರಾನ್ ಪಠಿಸಿದರು. ದಾರುಲ್ ಹುದಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೇಕ್ ಪರ್ವೆಝ್ ನಾಕ್ವಾ ಮದನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.