Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಊರಮುಂದೆ ಹಾಲಹಳ್ಳ

ಊರಮುಂದೆ ಹಾಲಹಳ್ಳ

ರಂಜಾನ್ ದರ್ಗಾರಂಜಾನ್ ದರ್ಗಾ17 July 2018 12:32 AM IST
share
ಊರಮುಂದೆ ಹಾಲಹಳ್ಳ

ಊರಮುಂದೆ ಹಾಲಹಳ್ಳ ಹರಿಯುತ್ತಿರಲು

ಓರೆಯಾವಿನ ಬೆನ್ನಲಿ ಹರಿಯಲದೇಕಯ್ಯ.
ಲಜ್ಜೆಗೆಡಲೇಕೆ? ನಾಣುಗೆಡಲೇಕೆ?
ಕೂಡಲಸಂಗಮದೇವರುಳ್ಳನ್ನಕ್ಕ
ಬಿಜ್ಜಳನ ಭಂಡಾರವೆನಗೇಕಯ್ಯ.
                         -ಬಸವಣ್ಣ

‘‘ಊರ ಮುಂದೆ ಹಾಲಹಳ್ಳ ಹರಿಯುವಾಗ ಮೊಂಡಹಸುವಿನ ಹಿಂದೆ ನಾನೇಕೆ ಓಡಲಿ? ನಾನೇಕೆ ನಾಚಿಕೆಗೆಡಬೇಕು? ನಾನೇಕೆ ಅಪಮಾನಕ್ಕೊಳಗಾಗಬೇಕು? ಕೂಡಲಸಂಗಮದೇವರು ಸಮಾಜದ ಪ್ರತೀಕವಾಗಿ ನನ್ನ ಜೊತೆ ಇರುವಾಗ ನನಗೆ ಬಿಜ್ಜಳನ ಭಂಡಾರವೇಕೆ ಬೇಕು’’ ಎಂದು ಕಲ್ಯಾಣದ ಪ್ರಧಾನಿ ಬಸವಣ್ಣನವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳಲ್ಲಿ ರಾಜ್ಯಶಕ್ತಿಯ ಜನವಿರೋಧಿ ಗುಣಲಕ್ಷಣಗಳ ಸೂಚನೆಗಳಿವೆ. ಜನಶಕ್ತಿಯ ಮಹತ್ವವನ್ನು ಸಾರುವ ಮಾತುಗಳಿವೆ. ದೃಢನಿರ್ಧಾರವಿದೆ. ತರ್ಕಬದ್ಧವಾದ ಉತ್ತರಗಳೂ ಇವೆ. ನಿಜದ ನೆಲೆಯಲ್ಲಿ ಮಾತನಾಡುವವರಿಗೆ ಇರುವ ಗಾಂಭೀರ್ಯ, ಧೈರ್ಯ, ತಿಳಿಹೇಳುವ ಸಾಮರ್ಥ್ಯ, ಸಮಾಧಾನ ಮತ್ತು ಅರ್ಥಹೀನ ಆರೋಪಗಳನ್ನು ಸಹಜವಾಗಿ ಬಯಲಿಗೆಳೆಯುವ ಕ್ರಮ, ಹೀಗೆ ಇವೆಲ್ಲವನ್ನೂ ಒಳಗೊಂಡ ಈ ವಚನ ಬಸವಣ್ಣನವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ.

ಬಸವಣ್ಣನವರು ರಾಜ್ಯಶಕ್ತಿಗೆ ಮೊಂಡಹಸು ಎಂದು ಕರೆದಿದ್ದಾರೆ. ಹಾಲು ಹಿಂಡಲು ಹೋದಾಗ ಇದು ಒದೆಯುತ್ತದೆ. ಇರಿಯಲು ಬರುತ್ತದೆ. ಇಂಥ ರಾಜ್ಯಶಕ್ತಿಯ ಭಂಡಾರದ ಬೆನ್ನನ್ನು ನಾನೇಕೆ ಹತ್ತಲಿ? ರಾಜ್ಯಭಂಡಾರದ ಹಣದಿಂದ ನಾನೇಕೆ ದಾಸೋಹ ನಡೆಸಲಿ ಎಂದು ಅವರು ಪ್ರಶ್ನಿಸುತ್ತಾರೆ. ಬಸವಣ್ಣನವರು ಬಿಜ್ಜಳನ ಭಂಡಾರವನ್ನು ಸೂರೆಗೈದು ಶರಣಸಂಕುಲ ಬೆಳೆಸುತ್ತಿದ್ದಾರೆ ಎಂದು ಶರಣಧರ್ಮ ವಿರೋಧಿ ಪಟ್ಟಭದ್ರ ಹಿತಾಸಕ್ತಿಗಳು ಗುಲ್ಲೆಬ್ಬಿಸಿದ್ದವು. ವಿರೋಧಿಗಳ ಈ ಆರೋಪಕ್ಕೆ ಶುದ್ಧಹಸ್ತರಾದ ಬಸವಣ್ಣನವರು ಸಮರ್ಪಕವಾದ ಉತ್ತರವನ್ನು ಈ ವಚನದಲ್ಲಿ ನೀಡಿದ್ದಾರೆ.

ಜಗತ್ತಿನ ವಿವಿಧ ಧರ್ಮಗ್ರಂಥಗಳಲ್ಲಿ ‘ಸ್ವರ್ಗದಲ್ಲಿ ಹಾಲಹಳ್ಳಗಳಿವೆ’ ಎನ್ನಲಾಗಿದೆ. ಆದರೆ ಕಾಯಕಜೀವಿಗಳು ತುಂಬಿಕೊಂಡಿರುವ ಬಸವಣ್ಣನವರ ಊರ ಮುಂದೆ ಹಾಲಹಳ್ಳ ಹರಿದಿದೆ. ಏಕೆಂದರೆ ಕಾಯಕಜೀವಿಗಳಿಂದಲೇ ಎಲ್ಲ ಉತ್ಪಾದನೆಯಾಗುತ್ತದೆ. ಅವರಿಂದಲೇ ಈ ಬದುಕು ಸಹನೀಯವಾಗುತ್ತದೆ. ಅವರ ಉತ್ಪಾದನೆಯ ಒಂದು ಭಾಗ ಮಾತ್ರ ರಾಜನ ಬೊಕ್ಕಸಕ್ಕೆ ಸೇರುತ್ತದೆ. ರಾಜನ ಬೊಕ್ಕಸದಿಂದ ಹಣವನ್ನು ಪಡೆಯುವುದೆಂದರೆ ಮೊಂಡಹಸುವಿನ ಹಾಲು ಕರೆದಂತೆ ಎಂದು ಬಸವಣ್ಣನವರು ಮನೋಜ್ಞವಾಗಿ ತಿಳಿಸಿದ್ದಾರೆ. ಊರ ಮುಂದೆ ಹಾಲಹಳ್ಳ ಹರಿಯುವುದು ಎಂದರೆ ಜನಸಮುದಾಯ ಪ್ರಾಮಾಣಿಕವಾಗಿ ತಮ್ಮ ಕಾಯಕ ಮಾಡುವುದರ ಮೂಲಕ ಸ್ವಸ್ಥ ಮತ್ತು ಸುಭಿಕ್ಷದಿಂದ ಕೂಡಿದ ನೆಮ್ಮದಿಯ ಸಮಾಜದ ನಿರ್ಮಾಣ ಮಾಡುವುದು. ಅಂಥ ಸಾಮಾಜಿಕ ಉತ್ಪಾದನಾ ಶಕ್ತಿಯ ಒಂದು ಭಾಗದಿಂದಲೇ ರಾಜರು ತಮ್ಮ ಭಂಡಾರವನ್ನು ತುಂಬಿಕೊಂಡು ಅರಮನೆಗಳನ್ನು ಕಟ್ಟುತ್ತಾರೆ. ದರ್ಪದಿಂದ ಕೂಡಿದ ಐಷಾರಾಮಿ ಜೀವನ ಸಾಗಿಸುತ್ತಾರೆ. ಇಂಥವರ ಸಹವಾಸ ನನಗೆ ಬೇಡ; ನನ್ನ ಜೊತೆ ನನ್ನ ಕಾಯಕಜೀವಿಗಳಿದ್ದಾರೆ ಎಂಬ ಬಸವಣ್ಣನವರ ನಿರ್ಧಾರ, ಜನಸಮುದಾಯದ ಮೇಲೆ ಅವರಿಗಿದ್ದ ಭರವಸೆಯ ದ್ಯೋತಕವಾಗಿದೆ.

share
ರಂಜಾನ್ ದರ್ಗಾ
ರಂಜಾನ್ ದರ್ಗಾ
Next Story
X