ಮುರ್ಡೇಶ್ವರ ಲಯನ್ಸ್ ಗೆ ಎಕ್ಸಲೆಂಟ್ ಕ್ಲಬ್ ಅವಾರ್ಡ ಪುರಸ್ಕಾರ

ಭಟ್ಕಳ, ಜು. 17: ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಗೋವಾ ರಾಜ್ಯಗಳನ್ನೊಳಗೊಂಡ ಲಯನ್ಸ್ ಜಿಲ್ಲೆಯ 110ಕ್ಲಬ್ಗಳ ನಡುವೆ ಭಟ್ಕಳ ತಾಲೂಕಿನ ಮುರುಡೇಶ್ವರದ ಲಾಯನ್ಸ್ ಕ್ಲಬ್ ಎಕ್ಸಲೆಂಟ್ ಕ್ಲಬ್ಪುರಸ್ಕಾರಕ್ಕೆ ಭಾಜನವಾಗಿದೆ.
ಗೋವಾದ ಗ್ರೀನ್ ಪಾರ್ಕ್ ಹೊಟೇಲ್ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಆದ ಎಮ್.ಜೆ.ಎಫ್ ಲಯನ್ ಸಾಯೀಶ್ ಲಾವಂಡೆ, ರೀನಾ ಲಾವಂಡೆ, ಆಗ್ನೇಲ್ ಅಲ್ಕಾಸೋಸ್, ಶಶಿಂದರ್ ನಾಯರ್, ಗಿರೀಶ ಕುಚಿನಾಡ್ರವರು ಪ್ರಶಸ್ತಿ ಪ್ರಧಾನ ಮಾಡಿದರು.
ಯಾವುದೇ ಒತ್ತಡ, ಅರ್ಜಿಗಳಿಲ್ಲದೇ ಒಟ್ಟೂ ಐದು ಪ್ರಶಸ್ತಿಗಳನ್ನು ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಕಳೆದ ವರ್ಷದ ಕಾರ್ಯಚಟುವಟಿಕೆಗಳಿಗೆ ಪಡೆದು ಕೊಂಡಿದೆ. ಎಕ್ಸಲೆಂಟ್ ಲಯನ್ಸ್ ಕ್ಲಬ್ ಅವಾರ್ಡ ಪಿಲಿಫ್ ಅಲ್ಮೇಡಾರವರಿಗೆ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ ಎಮ್.ವಿ ಹೆಗಡೆಯವರಿಗೆ ಅತ್ಯುತ್ತಮ ಕ್ವಿಜ್ ಮಾಸ್ಟರ್ ಅವಾರ್ಡ ಸೇವೆಯಲ್ಲಿರುವ ಸೈನಿಕರಿಗೆ ಸನ್ಮಾನಿಸಿದ್ದಕ್ಕೆ ಬೆಸ್ಟ್ ಸಿಗ್ನೇಚರ್ ಎಕ್ಟಿವಿಟಿ ಅವಾರ್ಡ ಹಾಗೂ ಅತಿ ಹೆಚ್ಚು ಸದಸ್ಯರನ್ನು ಸೇರ್ಪಡೆಗೊ ಳಿಸಿದ್ದಕ್ಕೆ ಹಾಯೆಸ್ಟ್ ಮೆಂಬರ್ಶಿಪ್ ಗ್ರೋಥ ಅವಾರ್ಡ ಗಳನ್ನು ತನ್ನ 2017-18ನೇ ಸಾಲಿನ ಕಾರ್ಯಚಟುವಟಿಕೆಗಳಿಗೆ ಮುರ್ಡೇಶ್ವರ ಲಯನ್ಸ್ ಕ್ಲಬ್ ತನ್ನ ಮುಡಿಗೇರಿಸಿಕೊಂಡಿದೆ. ತನ್ನ ಹತ್ತು ವರ್ಷಗಳ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಕ್ಲಬ್ ಅತಿ ಹೆಚ್ಚು ಪ್ರಶಸ್ತಿ ಪಡೆದು ಕೊಂಡಿರುವುದು ಕ್ಲಬ್ಗೆ ಸಂದ ಗೌರವವಾಗಿದೆ.
ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ನಾಯ್ಕ, ನೂತನ ಅಧ್ಯಕ್ಷ ನಾಗರಾಜ ಭಟ್, ಕಾರ್ಯದರ್ಶಿ ನಾಗೇಶ ಮಡಿವಾಳ, ಎಮ್.ವಿ ಹೆಗಡೆ, ಪಿಲಿಫ್ ಅಲ್ಮೇಡಾ, ಡಾ.ಮಂಜುನಾಥ ಶೆಟ್ಟಿ, ಮಂಜುನಾಥ ದೇವಾಡಿಗ, ಸುಬ್ರಾಯ ನಾಯ್ಕ, ಜಯಪ್ರಕಾಶ ಕರ್ಕಿಕರ್ ಹಾಜರಿದ್ದು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ವರ್ಷವೂ ಕೂಡ ಹೆಚ್ಚಿನ ರಚನಾತ್ಮಕ ಸಮಾಜ ಸೇವೆಗಳ ಮೂಲಕ ಇನ್ನೂ ಹೆಚ್ಚಿನ ಪ್ರಶಸ್ತಿಯನ್ನು ಪಡೆಯುವ ವಿಶ್ವಾಸವನ್ನು ನೂತನ ಅಧ್ಯಕ್ಷರಾದ ನಾಗರಾಜ ಭಟ್ ವ್ಯಕ್ತಪಡಿಸಿದ್ದಾರೆ.







