Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ದಾವಣಗೆರೆ: ಬೊಂದಾಡೆ ಇಂಡಸ್ಟ್ರೀಸ್...

ದಾವಣಗೆರೆ: ಬೊಂದಾಡೆ ಇಂಡಸ್ಟ್ರೀಸ್ ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿ ರಮೇಶ್ ಸೂಚನೆ

ವಾರ್ತಾಭಾರತಿವಾರ್ತಾಭಾರತಿ17 July 2018 8:39 PM IST
share
ದಾವಣಗೆರೆ: ಬೊಂದಾಡೆ ಇಂಡಸ್ಟ್ರೀಸ್ ಪರವಾನಗಿ ರದ್ದುಪಡಿಸಲು ಜಿಲ್ಲಾಧಿಕಾರಿ ರಮೇಶ್ ಸೂಚನೆ

ದಾವಣಗೆರೆ,ಜು.17: ಕೈಗಾರಿಕಾ ಉದ್ದೇಶಿತ ಚಟುವಟಿಕೆಗೆ ಬಳಸದೇ ಬಯೋ ಡೀಸೆಲ್ ಚಟುವಟಿಕೆಗೆ ಯೋಜನೆ ಬದಲಾವಣೆ ಕೋರಿ ಅರ್ಜಿ ನೀಡಿದ ಮೆ|| ಬೊಂದಾಡೆ ಇಂಡಸ್ಟ್ರೀಸ್ ಅವರ ಪರವಾನಗಿ ರದ್ದುಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚಿಸಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 89ನೇ ಏಕಗವಾಕ್ಷಿ ಸಭೆಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೆ|| ಬೊಂದಾಡೆ ಇಂಡಸ್ಟ್ರೀಸ್ ಇವರು ಹರಿಹರದ ಹನಗವಾಡಿಯಲ್ಲಿ ಹಿಂದೆ ಪಡೆದಿದ್ದ ಘಟಕ ಮೊದಲು ಮಂಜೂರಾತಿ ಪಡೆದ ಘಟಕದಲ್ಲಿ ಉದ್ದೇಶಿತ ಚಟುವಟಿಕೆಯನ್ನು ನಿಗದಿತ ಎರಡು ವರ್ಷದಲ್ಲಿ ಆರಂಭಿಸದೆ, ಇದೀಗ ಬಯೋ ಡೀಸೆಲ್ ಚಟುವಟಿಕೆಗೆ ಯೋಜನೆ ಬದಲಾವಣೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ನಿಯಮನುಸಾರ ಪುರಸ್ಕರಿಸಲು ಬರುವುದಿಲ್ಲವಾದ್ದರಿಂದ ಅದನ್ನು ರದ್ದುಪಡಿಸಲು ಕೆಐಎಡಿಬಿ ಅಧಿಕಾರಿಗೆ ಸೂಚಿಸಿದರು.

ಮಾಲೀಕರು ತಮ್ಮ ಹೊಸ ಯೋಜನೆ ನಾವೀನ್ಯತೆಯಿಂದ ಕೂಡಿದ್ದು, ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದಾಗ ಜಿಲ್ಲಾಧಿಕಾರಿ, ನಿಯಮಗಳು ಎಲ್ಲರಿಗೂ ಅನ್ವಯ. ತಾವು ಹಿಂದಿನ ಯೋಜನೆಗೆ ಬಂಡವಾಳ ಹೂಡಿ, ನಿಯಮಾನುಸಾರ ಕೈಗೊಳ್ಳುವಷ್ಟು ಚಟುವಟಿಕೆ ಕೈಗೊಂಡಿದ್ದರೆ ಆ ಯೋಜನೆ ಅವಧಿ ವಿಸ್ತರಣೆ ಅಥವಾ ಬದಲಾವಣೆ ನೀಡಬಹುದಿತ್ತು. ನೋಟಿಸ್ ನೀಡಿದರೂ ಯಾವುದೇ ಚಟುವಟಿಕೆಯನ್ನೇ ಕೈಗೊಳ್ಳದೆ ಅವಧಿ ಮೀರಿದ ಮೇಲೆ ಯೋಜನೆ ಬದಲಾವಣೆ ಪ್ರಸ್ತಾಪವನ್ನು ಮಾನ್ಯ ಮಾಡಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸಿದರು.

ಕೆಎಸ್‍ಎಸ್‍ಐಡಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಮಾತನಾಡಿ, ಕೊಗ್ಗನೂರಿನ ಕರಿಬಸಪ್ಪ ಎಂಬವರಿಗೆ ಕೈಗಾರಿಕೆ ಸ್ಥಾಪಿಸಲು ಮಂಜೂರಾಗಿರುವ ಜಾಗ ಆ ಗ್ರಾಮದ ಶಾಲೆಯ ಬಿಸಿಯೂಟ ತಯಾರಿಸಲು ಬಳಸಿಕೊಳ್ಳಲಾಗುತ್ತಿದೆ. ಆ ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪಿಸಲು ಗ್ರಾಮಸ್ಥರು, ಎಸ್‍ಡಿಎಂಸಿ ಅಡ್ಡಿಪಡಿದೆ ಎಂದರು.

ಜಿಲ್ಲಾಧಿಕಾರಿ ಮಾತನಾಡಿ, ಆಸ್ತಿ ಹಕ್ಕು ಯಾರದ್ದು ಎಂದು ಸ್ಪಷ್ಟಪಡಿಸಿಕೊಂಡು ನಿಯಮಾನುಸಾರ ಕ್ರಮ ಕೈಗೊಳ್ಳಲು ತಿಳಿಸಿದಾಗ, ಅಧಿಕಾರಿ ಮಾತನಾಡಿ, ಆಸ್ತಿ ಕೆಎಸ್‍ಎಸ್‍ಐಡಿಸಿಗೆ ಸೇರಿದ್ದಾಗಿದ್ದು, 1992 ರಿಂದ ಯಾವುದೇ ಚಟುವಟಿಕೆ ನಡೆದಿಲ್ಲ. ಹಿಂದೆ ಅಲ್ಲಿ ಒಂದು ಯೋಜನೆಯಡಿ ಟೈಲರಿಂಗ್ ಕಲಿಸಲು ಮಳಿಗೆ ಹಾಕಲಾಗಿತ್ತು. ಆ ಯೋಜನೆ ನಿಂತ ನಂತರ ಶಾಲೆಯವರಿಗೆ ಬಾಡಿಗೆ ಷರತ್ತಿಗೊಳಪಡಿಸಿ ಆ ಜಾಗ ಅವರಿಗೆ ನೀಡಲಾಗಿತ್ತು ಎಂದರು. ಜಿಲ್ಲಾಧಿಕಾರಿಗಳು ಎಸ್‍ಡಿಎಂಸಿ ಅವರಿಗೆ ವಸ್ತುಸ್ಥಿತಿ ತಿಳಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರು.

ಹರಿಹರ ಕೈಗಾರಿಕಾ ವಸಾಹತುವಿನ 2ನೆ ಹಂತದ ನಿವೇಶನಗಳಿಗೆ ಭೂ ಪರಿಹಾರ ಮೊತ್ತವನ್ನು ಹಂಚಿಕೆದಾರರಿಂದ ಪಾವತಿಸಿಕೊಳ್ಳಲು ರು. 10 ನ್ನು ನಿಗದಿಪಡಿಸುವಂತೆ ಮಂಡಳಿಗೆ ಜನವರಿಯಲ್ಲೇ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಹಿಂದೆ 15 ದಿನಗಳ ಒಳಗೆ ಮಂಡಳಿಯಿಂದ ದರ ನಿಗದಿಯಾಗುತ್ತದೆಂದು ಹೇಳಲಾಗಿತ್ತಾದರೂ ಇದುವರೆಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಬಗ್ಗೆ ಸೂಕ್ತ ಜರುಗಿಸುವಂತೆ ಹಂಚಿಕೆದಾರರು ಮನವಿ ಮಾಡಿದರು.
ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಈ ಸಭೆಯಲ್ಲಿ ಹಂಚಿಕೆದಾರರು ದರ ನಿಗದಿ ಬಗ್ಗೆ ಒತ್ತಾಯಿಸಿರುವ ಬಗ್ಗೆ ಸಭಾ ನಡವಳಿಯಲ್ಲಿ ದಾಖಲಿಸಿ ಮಂಡಳಿಗೆ ಕಳುಹಿಸಿಕೊಡುವಂತೆ ಸೂಚಿಸಿದರು.

ದಾವಣಗೆರೆ ನಗರದ ಕರೂರು ಕೈಗಾರಿಕಾ ಪ್ರದೇಶದ ನಿವೇಶನ ಸಂ: 64ಎ ರಲ್ಲಿ ಅಸ್ಮಾ ಟೆಕ್ಸ್ ಗಾರ್ಮೆಂಟ್ಸ್ ಇವರಿಗೆ ಹಂಚಿಕೆಯಾಗಿದ್ದ ರೆಡಿಮೇಡ್ ಗಾರ್ಮೆಂಟ್ಸ್ ನಲ್ಲಿ ನೆಲ ಮಹಡಿ ಡಿಬಿಎ ಕಂಪೆನಿಯರಿಗೆ ಅನಧಿಕೃತವಾಗಿ ಬಾಡಿಗೆ ನೀಡಿದ್ದಾರೆ ಎಂದು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿ ಬಸವರಾಜಪ್ಪ ಹೇಳಿದರು.

ಅಸ್ಮಾ ಟೆಕ್ಸ್ ಗಾರ್ಮೆಂಟ್ಸ್ ಮಾಲೀಕ ಮಾತನಾಡಿ, ಮೊದಲನೆ ಮತ್ತು ಎರಡನೇ ಮಹಡಿಯಲ್ಲಿ ಗಾರ್ಮೆಂಟ್ಸ್ ಚಟುವಟಿಕೆ ನಡೆಯುತ್ತಿದೆ. ಆದರೆ ನೆಲಮಹಡಿಯಲ್ಲಿ ಡಿಬಿಎ ಕಂಪೆನಿಗೆ ಯುವಜನತೆಗೆ ತರಬೇತಿ ನೀಡಲು ಬಾಡಿಗೆ ನೀಡಲಾಗಿದೆ. ಈ ಬಗ್ಗೆ ಪತ್ರ ಕೆಐಎಡಿಬಿಗೆ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಮಾತನಾಡಿ, ಕೇವಲ ಪತ್ರ ಬರೆಯದೇ, ನಿಯಮಾನುಸಾರ ಅನುಮತಿ ಪಡೆದು ಬಾಡಿಗೆ ನೀಡುವಂತೆ ಸೂಚಿಸಿದರು.

ಮೆ. ಆಂಜನೇಯ ಅಗ್ರೋಟೆಕ್ ಪ್ರೈ. ಲಿ ಇವರಿಗೆ ಹರಿಹರದಲ್ಲಿ 4.00 ಎಕರೆ ಕೆಐಎಡಿಬಿ ಯಿಂದ ಹಂಚಿಕೆಯಾಗಿ ಅವರ ಘಟಕದ ಹೆಸರಿನಲ್ಲಿ ಶುದ್ದ ಕ್ರಯ ಆಗಿದ್ದು, ಖರಾಬು ಜಮೀನಿಗೂ ಅವರು ಹಣ ಪಾವತಿಸಿರುತ್ತಾರೆ. ಖರಾಬು ಜಮೀನು ಕೆಐಎಡಿಬಿ ಹೆಸರಿಗೆ ಖಾತೆ ಬದಲಾವಣೆ ಆಗದ ಕಾರಣ ಶುದ್ದ ಕ್ರಯಪತ್ರ ನೋಂದಣಿ ಸಾಧ್ಯವಿಲ್ಲವೆಂದು ಹರಿಹರ ತಹಸೀಲ್ದಾರ್ ತಿಳಿಸಿರುತ್ತಾರೆಂದು ಬಸವರಾಜಪ್ಪ ಸಭೆಗೆ ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ಜಮೀನಿನ ಮಧ್ಯದಲ್ಲಿ ಬರುವ ಖರಾಬು ಭೂಮಿಗೆ ಹಕ್ಕು ಕೊಡಲು ಬರುವುದಿಲ್ಲ. ಮಾಲೀಕರು ಅದನ್ನು ಅನುಬೋಗಿಸಬಹುದಾಗಿದ್ದರೂ ಅದರ ಹಕ್ಕನ್ನು ನೀಡಲು ಬರುವುದಿಲ್ಲ. ಇದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದರು.
ಪಶು ಮತ್ತು ಕುಕ್ಕಟ ಆಹಾರ ತಯಾರಿಕೆ, ಮೆಜ್ ಗ್ರಿಟ್(ಎರಡು) ಸೇರಿದಂತೆ ಒಟ್ಟು 3 ಹೊಸ ಕೈಗಾರಿಕೆಗಳ ಸ್ಥಾಪನೆಗೆ ನಿರಾಕ್ಷೇಪಣೆ ಪತ್ರ ಪಡೆಯಲು ಸಲ್ಲಿಸಲಾಗಿದ್ದ ಪ್ರಸ್ತಾವನೆ ಸಭೆಯಲ್ಲಿ ಅನುಮೋದಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಸತ್ಯನಾರಾಯಣ ಭಟ್, ಸಹಾಯಕ ನಿರ್ದೇಶಕ ಮಂಜುನಾಥ್, ಕೈಗಾರಿಕಾ ಸಂಘಗಳ ಪದಾಧಿಕಾರಿಗಳು, ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X