ಉಡುಪಿ: ಯಕ್ಷಗಾನ-ನಾಟ್ಯ-ಹಾಸ್ಯ ವೈಭವ
ಉಡುಪಿ, ಜು.17: ಕುತ್ಪಾಡಿ ಫ್ರೆಂಡ್ಸ್ ಕುತ್ಪಾಡಿ ಇವರ ಆಶ್ರಯದಲ್ಲಿ ಜು.29ರ ರವಿವಾರ ಉಡುಪಿ ಅಜ್ಜರಕಾಡಿನ ಟೌನ್ ಹಾಲ್ನಲ್ಲಿ ಅಪರಾಹ್ನ 2 ರಿಂದ ಯಕ್ಷಗಾನದ ತೆಂಕು ಹಾಗೂ ಬಡಗುತಿಟ್ಟಿನ ಖ್ಯಾತ ಕಲಾವಿದರಿಂದ ಯಕ್ಷಗಾನ-ನಾಟ್ಯ-ಹಾಸ್ಯ ವೈಭವ ಕಾರ್ಯಕ್ರಮ ನಡೆಯಲಿದೆ.
ಹೆಸರಾಂತ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಸತ್ಯನಾರಾಯಣ ಪುಣಿಚಿತ್ತಾಯ, ಗಿರೀಶ್ ರೈ ಕಕ್ಕೆಪದವು ಮತ್ತು ಕಾವ್ಯಶ್ರೀ ಅಜೇರು ಇವರಿಂದ ಪೌರಾಣಿಕ, ಸಾಮಾಜಿಕ, ತುಳು ಪದ್ಯಗಳ ಗಾನವೈಭವ, ಯಕ್ಷರಂಗದ ಚಾರ್ಲಿ ಚಾಪ್ಲಿನ್ ಸೀತಾರಾಮ ಕುಮಾರ್ ಕಟೀಲ್ ಇವರ ನಕ್ಕುನಗಿಸುವ ಹಾಸ್ಯ ರಸಾಯನ ಹಾಗೂ ಯಕ್ಷಗಾನದ ಸಿಡಿಲಮರಿ ದಿವಾಕರ ರೈ ಸಂಪಾಜೆ ಹಾಗೂ ನಾಟ್ಯ ಮಯೂರಿ ರಕ್ಷಿತ್ ಶೆಟ್ಟಿ ಪಡ್ರೆ ಇವರ ಜೋಡಿ ಶೃಂಗಾರ ನಾಟ್ಯ ವೈಭವ ಪ್ರದರ್ಶನಗೊಳ್ಳಲಿದೆ.
ಇದರೊಂದಿಗೆ ಡಾ. ವರ್ಷ ಶೆಟ್ಟಿ, ದಿಶಾ ಶೆಟ್ಟಿ ಅವರ ರಾಧಾ ವಿಲಾಸ ನಾಟ್ಯ ವೈಭವ, ಅಧ್ವಿಕಾ ಶೆಟ್ಟಿ, ಸನ್ನಿಧಿ ಶೆಟ್ಟಿ, ಉಪಾಸನಾ ಇವರಿಂದ ವಿಶೇಷ ನಾಟ್ಯ ಪ್ರದರ್ಶನ, ಹೆಸರಾಂತ ಮದ್ದಳೆಗಾರರಾದ ವಿನಯ ಆಚಾರ್ಯ ಹಾಗೂ ಶಶಿ ಆಚಾರ್ಯರ ಮದ್ದಳೆವಾದನೆ ಹಾಗೂ ಆನಂದ ಪಡ್ರೆಯವರ ವಿಶೇಷ ಚಂಡೆ ವಾದನವೂ ಇರಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ ಎಂದು ಕುತ್ಪಾಡಿ ಫ್ರೆಂಡ್ಸ್ ಅಧ್ಯಕ್ಷ ಸದಾಶಿವ ಅಮೀನ್ ಕಟ್ಟೆಗುಡ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.