ಬೆಂಕಿ ಅಕಸ್ಮಿಕದಿಂದ ಮೃತ್ಯು
ಶಂಕರನಾರಾಯಣ, ಜು.17: ಸಿದ್ಧಾಪುರ ರಸ್ತೆಯ ಎಣ್ಣೆ ಮಿಲ್ಲಿನಲ್ಲಿ ಜು.16ರಂದು ಸಂಭವಿಸಿದ ಬೆಂಕಿ ಆಕಸ್ಮಿಕದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಶ್ರೀನಿವಾಸ ಬಾಯರಿ(72) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಎಣ್ಣೆ ಮಿಲ್ಲುನಲ್ಲಿ ಕೊಬ್ಬರಿ ಬಿಸಿ ಮಾಡಲು ಬೆಂಕಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಮೈಗೆ ತಗುಲಿ ಗಂಭೀರ ಗಾಯಗೊಂಡರೆನ್ನಲಾಗಿದೆ. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆ ಮೃತಪಟ್ಟರು. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





