Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ರಂಗದೊಳಗಿಂದ
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕಾವ್ಯ ಭಾಷೆಯಲ್ಲಿ ನೆರೂಡನ ಬದುಕು

ಕಾವ್ಯ ಭಾಷೆಯಲ್ಲಿ ನೆರೂಡನ ಬದುಕು

ಈ ಹೊತ್ತಿನ ಹೊತ್ತಿಗೆ

ಕಾರುಣ್ಯಾಕಾರುಣ್ಯಾ17 July 2018 7:08 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಕಾವ್ಯ ಭಾಷೆಯಲ್ಲಿ ನೆರೂಡನ ಬದುಕು

ನಮ್ಮ ರಸ್ತೆಗಳು ಜನರ ರಕ್ತದಿಂದ ಕೆಂಪಾಗುತ್ತಿರುವ ಈ ದಿನಗಳಲ್ಲಿ ಕವಿ ಪಾಬ್ಲೋ ನೆರೂಡ ಹೆಚ್ಚು ಪ್ರಸ್ತುತವಾಗುತ್ತಿದ್ದಾನೆ. ಕಾವ್ಯ ಅವನ ಪಾಲಿಗೆ ತನ್ನನ್ನು, ತನ್ನ ನೆಲವು ನ್ನು ಳಿಸಿಕೊಳ್ಳುವ ಒಂದು ಮಾರ್ಗವಾಗಿತ್ತು. ಬಹುಜನರಿಗಾಗಿ ಬರೆದ, ಬಾಳಿದ ಕವಿಯೆಂದೇ ಅವನ ಕವಿತೆಗಳು ಜನರ ಎದೆಯ ಹಾಡುಗಳಾಗಿ ಇಂದಿಗೂ ಜನಮನದಲ್ಲಿ ಸ್ಥಾಯಿಯಾಗಿದೆ. ಪಾಬ್ಲೋ ನೆರೂಡನ ವಿಸ್ತೃತ ಆತ್ಮಕತೆಯನ್ನು ಲಡಾಯಿ ಪ್ರಕಾಶನ ಹೊರತಂದಿದೆ. ಓ. ಎಲ್. ನಾಗಭೂಷಣ ಸ್ವಾಮಿ ಅವರು ಆ ಆತ್ಮಕತೆಯನ್ನು ಕನ್ನಡಕ್ಕೆ ಇಳಿಸಿದ್ದಾರೆ. ನೆರೂಡನ ಕವಿತೆ ಮತ್ತು ಬದುಕು ಬೇರೆ ಬೇರೆಯಲ್ಲ. ಅಂದಿನ ರಾಜಕೀಯ ಸಂದರ್ಭದ ಜೊತೆಗೆ ನಂಟನ್ನು ಹೊಂದಿರುವ ಆತನ ಕವಿತೆಗಳು ಆ ಕಾಲಘಟ್ಟದ ಮನುಷ್ಯನೊಬ್ಬನ ಪ್ರೀತಿ, ನೋವು, ಹತಾಶೆ, ಏಕಾಂಗಿತನ ಎಲ್ಲವನ್ನೂ ತೆರೆದಿಡುತ್ತದೆ. ನೆರೂಡನ ಆತ್ಮಕತೆಯೆಂದರೆ ಅಂದಿನ ಸಾಮಾಜಿಕ ಮತ್ತು ರಾಜಕೀಯ ಏಳುಬೀಳುಗಳ ಚರ್ಚೆಯಾಗಿದೆ.

ನೆರೂಡನ ಬರಹಗಳು ಹಲವು ಹೋರಾಟಗಾರರಿಗೆ ಸ್ಫೂರ್ತಿಯಾಗಿವೆ. ಕನ್ನಡಿಗರಿಗೂ ಆತ ಅಪರಿಚಿತನಲ್ಲ. ಈಗಾಗಲೇ ಅವನ ಕವಿತೆಗಳನ್ನು ಹಲವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಬಿಡಿ ಬರಹಗಳೂ ಬಹಳಷ್ಟು ಬಂದಿವೆ. ಜೊತೆಗೆ, ಆತನ ಪರಿಚಯಾತ್ಮಕ ಪುಟ್ಟ ಕೃತಿಗಳೂ ಕನ್ನಡದಲ್ಲಿವೆ. ಆದರೆ ಆತನ ಬೇರೆ ಬೇರೆ ಮುಖ, ಅವನ ಕಾವ್ಯದ ವಿಸ್ತಾರಗಳು, ಅದಕ್ಕೆ ಕಾರಣವಾದ ಅಂದಿನ ರಾಜಕೀಯ ಸಂದರ್ಭಗಳನ್ನು ಕನ್ನಡಿಗರು ಪೂರ್ಣವಾಗಿ ತನ್ನದಾಗಿಸಿಕೊಂಡಿಲ್ಲ. ನೆರೂಡ ಸುಮಾರು ನಲವತ್ತು ಪುಸ್ತಕಗಳನ್ನು ಬರೆದಿದ್ದಾನೆ. ನಾಲ್ಕು ಸಾವಿರ ಕವಿತೆಗಳನ್ನು ಬರೆದಿದ್ದಾನೆ. ಜಗತ್ತಿನ ಮೂವತ್ತೈದಕ್ಕೂ ಅಧಿಕ ಭಾಷೆಗಳಿಗೆ ಆತನ ಕವಿತೆಗಳು ಅನುವಾದಗೊಂಡಿವೆ. 1961ರ ಹೊತ್ತಿಗೆ ಅವನ ಪ್ರೀತಿ ಮತ್ತು ದುಃಖ ಕವಿತೆಗಳ ಸಂಕಲನ ‘ಇಪ್ಪತ್ತು ಪ್ರೇಮ ಕವಿತೆಗಳು ಮತ್ತು ಒಂದು ವಿಷಾದ ಗೀತ’ ಹತ್ತು ಲಕ್ಷ ಪ್ರತಿಗಳಷ್ಟು ಮುದ್ರಣಗೊಂಡಿತ್ತು. ನೆರೂಡನ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆತ ಮೂಲತಃ ಕವಿಯಾದರೂ, ಅವನು ಬೇರೆ ಬೇರೆ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡವನು. ಅನೇಕ ದೇಶಗಳಲ್ಲಿ ವಿವಿಧ ರಾಯಭಾರ ಹುದ್ದೆಗಳನ್ನು ನಿರ್ವಹಿಸಿದವನು. ಕಮ್ಯುನಿಸ್ಟ್ ಪಕ್ಷದ ಸದಸ್ಯನಾಗಿ ಚಿಲಿಯ ರಾಜಕೀಯದಲ್ಲಿ ಪಾಲ್ಗೊಂಡು, ಸೆನೆಟಿನ ಸದಸ್ಯನೂ, ರಾಷ್ಟ್ರಾಧ್ಯಕ್ಷ ಪದವಿಯ ಚುನಾವಣೆಯ ಸ್ಪರ್ಧಿಯೂ ಆಗಿದ್ದವನು. ಆಳುವ ಸರಕಾರದ ಕೋಪಕ್ಕೆ ಗುರಿಯಾಗಿ ದೇಶ ಭ್ರಷ್ಟನಾಗಿ ಅಲೆದವನು. ಬದುಕನ್ನು ಬೇರೆ ಬೇರೆ ಹವ್ಯಾಸಗಳಿಂದ ಸಮೃದ್ಧಗೊಳಿಸಿದವನು. ಈ ಎಲ್ಲ ಕಾರಣದಿಂದ ಸಮಗ್ರ ನೆರೂಡನನ್ನು ಕನ್ನಡದಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭವಿಲ್ಲ. ಈ ಹಿನ್ನೆಲೆಯಲ್ಲಿ ಪಾಬ್ಲೋ ನೆರೂಡ ನೆನಪುಗಳು ಆತ್ಮ ಕಥನ ಕನ್ನಡ ಸಾಹಿತ್ಯದ ಪಾಲಿಗೆ ಒಂದು ಮಹತ್ವದ ಅನುವಾದವಾಗಿದೆ. ನಾಗಭೂಷಣ ಸ್ವಾಮಿ ಅವರ ಅನುವಾದವೂ ನೆರೂಡನನ್ನು ಕನ್ನಡತನದಲ್ಲಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

ಲಡಾಯಿ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ಪುಟಗಳು 338. ಮುಖಬೆಲೆ 330 ರೂ. ಆಸಕ್ತರು 94802 86844 ದೂರವಾಣಿಯನ್ನು ಸಂಪರ್ಕಿಸಬಹುದು.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
ಕಾರುಣ್ಯಾ
ಕಾರುಣ್ಯಾ
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X