ಮಳೆಯಿಂದ ಕೃಷಿಗೆ ಹಾನಿ: ಪರಿಹಾರ ನೀಡಲು ಆಗ್ರಹ
ಕಿನ್ಯ ಗ್ರಾಮಸಭೆ

ಮಂಗಳೂರು, ಜು.18: ಮಳೆಯಿಂದಾಗಿ ಕಿನ್ಯ ಗ್ರಾಮದ ಅನೇಕ ಕೃಷಿ ಭೂಮಿಗೆ ಹಾನಿಯಾಗಿದ್ದು, ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ. ರೈತರಿಗೆ ಅಪಾರ ನಷ್ಟವಾಗಿದೆ. ಹಾಗಾಗಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಶೀಘ್ರ ಪರಿಶೀಲನೆ ನಡೆಸಿ ಪರಿಹಾರ ಒದಗಿಸಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ ಆಗ್ರಹಿಸಿದ್ದಾರೆ.
ಕಿನ್ಯ ಗ್ರಾಪಂ ಕಚೇರಿಯಲ್ಲಿ ನಡೆದ ಕಿನ್ಯ ಗ್ರಾಪಂನ 2018-19ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಭಾರತಿ.ಕೆ ನೋಡೆಲ್ ಅಧಿಕಾರಿಯಾಗಿದ್ದರು. ಕಿನ್ಯ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರತಿಭಾ ಕುತ್ತಡ್ಕ ಗ್ರಾಮಸ್ಥರಿಗೆ ಸರಕಾರದಿಂದ ಸಿಗುವ ಸವಲತ್ತು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಸರಕಾರಿ ಶಾಲೆಯ ಮಕ್ಕಳಿಗೆ ಕ್ಷೀರ ಭಾಗ್ಯ, ಶೂ ಭಾಗ್ಯಕ್ಕಿಂತ ಹೆಚ್ಚುವರಿ ಶಿಕ್ಷಕರನ್ನು ನೀಡಿ ಸರಕಾರಿ ಶಾಲೆಯನ್ನು ಉಳಿಸಬೇಕೆಂದು ಮಂಗಳೂರು ನಗರ ದಕ್ಷಿಣ ವಲಯ ಶಿಕ್ಷಣಾಧಿಕಾರಿ ಕಚೇರಿಯ ಸಂಯೋಜಕ ಫ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್ ಅವರಿಗೆ ಗ್ರಾಮಸ್ಥರು ಮನವಿ ಮಾಡಿದರು.
ಗ್ರಾಮಕರಣಿಕ ಎನ್.ಜಿ.ಪ್ರಸಾದ್, ಅಬಕಾರಿ ಇಲಾಖೆಯ ಚಂದ್ರಹಾಸ್, ಸಹಾಯಕ ತೋಟಗಾರಿಕಾ ಇಲಾಖಾಧಿಕಾರಿ ಮಹೇಶ್ ಎನ್., ಮಂಗಳೂರು ಹೋಬಳಿ ಮಟ್ಟದ ಕೃಷಿ ಅಧಿಕಾರಿ ಅಜಿತ್ ಪ್ರಸಾದ್ ಎಚ್.ಎನ್., ಶಿಕ್ಷಣ ಇಲಾಖೆಯ ತಲಪಾಡಿ ಕ್ಲಸ್ಟರ್ ಸಿಆರ್ಪಿ ವೀಣಾ ಡೇಸಾ, ಉಳ್ಳಾಲ ಪೊಲೀಸ್ ಠಾಣೆಯ ಸುರೇಶ್ ಮತ್ತು ದೇವೇಂದ್ರ, ಕೋಟೆಕಾರ್ ಮೆಸ್ಕಾಮ್ ಕಚೇರಿಯ ಪ್ರವೀಣ್ ಬಿ.ಎನ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾರದಾ ಕೆ., ಕೋಟೆಕಾರ್ ಪಶು ಆಸ್ಪತ್ರೆಯ ವೈದ್ಯಕೀಯ ಪರೀಕ್ಷಕ ಚಂದ್ರಹಾಸ ಪಿ., ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋಪಿ ಪ್ರಕಾಶ್, ತಾಪಂ ಸದಸ್ಯರಾದ ಅಬೂಬಕರ್ ಸಿದ್ದೀಕ್, ಕಿನ್ಯ ಗ್ರಾಪಂ ಅಧ್ಯಕ್ಷ ಮಾಲಿನಿ ಎನ್., ಸದಸ್ಯರಾದ ಮಹಾಬಲ ಪೂಂಜ, ಮೈಮುನಾ, ಆಶಲತಾ, ಉಮರ್ ಫಾರೂಕ್, ಕುಸುಮಾ, ಆಸಿಯಮ್ಮ, ಹಮೀದ್, ಕೆ.ಬಿ.ಅಬೂಸಾಲಿ, ಮುಹಮ್ಮದ್ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಖಾ ವರದಿ ವಾಚಿಸಿದರು. ಮುಹಮ್ಮದ್ ಅಶ್ರಫ್ ಸ್ವಾಗತಿಸಿದರು.