ಸೀಮೆಎಣ್ಣೆ ಬದಲು ನಾಡದೋಣಿಗೆ ಎಲೆಕ್ಟ್ರಿಕ್ ಎಂಜಿನ್ ಬಳಕೆ: ಮಲ್ಪೆ ನಾಡದೋಣಿ ಮೀನುಗಾರರ ವಿರೋಧ
ಉಡುಪಿ, ಜು.18: ಕೇಂದ್ರ ಸರಕಾರ ಈಗಾಗಲೇ ರಾಜ್ಯಗಳ ಪಿಡಿಎಸ್ ವ್ಯವಸ್ಥೆಗೆ ಸೀಮೆಎಣ್ಣೆ ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸಿದ್ದು, ಶೀಘ್ರವೇ ಸಾರ್ವಜನಿಕ ಬಳಕೆಗೂ ನಿಲ್ಲಿಸುವ ಸಾಧ್ಯತೆ ಇರುವುದರಿಂದ ಸೀಮೆಎಣ್ಣೆ ಆಧಾರಿತ ಔಟ್ಬೋರ್ಡ್ ಇಂಜಿನ್ ಬಳಸುವ ನಾಡದೋಣಿಗೆ ಎಲೆಕ್ಟ್ರಿಕಲ್ ಇಂಜಿನ್ನ್ನು ಬಳಸುವ ಪ್ರಾಯೋಗಿಕ ಪರೀಕ್ಷೆಗೆ ಮಲ್ಪೆಯ ಮೀನುಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಒಮ್ಮೆಲೆ ಸೀಮೆಎಣ್ಣೆಯ ಸಮಸ್ಯೆ ಎದುರಾದರೆ ಮೀನುಗಾರರಿಕೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಬದಲಿ ವ್ಯವಸ್ಥೆಯಾಗಿ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಿದ ದೋಣಿಯನ್ನು ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡರ ಸೂಚನೆಯಂತೆ ಸಿದ್ದಪಡಿಸಲಾಗಿದ್ದು, ಅವರ ಉಪಸ್ಥಿತಿಯಲ್ಲಿ ಅದನ್ನು ಇಂದು ಪ್ರಾಯೋಗಿಕ ವಾಗಿ ಪರಿಶೀಲಿಸಲಾಯಿತು.
ಮುಂದಿನ ದಿನಗಳಲ್ಲಿ ಒಮ್ಮೆಲೆ ಸೀಮೆಎಣ್ಣೆಯ ಸಮಸ್ಯೆ ಎದುರಾದರೆ ಮೀನುಗಾರರಿಕೆ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಬದಲಿ ವ್ಯವಸ್ಥೆಯಾಗಿ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಿದ ದೋಣಿಯನ್ನು ರಾಜ್ಯ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡರ ಸೂಚನೆಯಂತೆ ಸಿದ್ದಪಡಿಸಲಾಗಿದ್ದು, ಅವರ ಉಪಸ್ಥಿತಿಯಲ್ಲಿ ಅದನ್ನು ಇಂದು ಪ್ರಾಯೋಗಿಕ ವಾಗಿ ಪರಿಶೀಲಿಸಲಾಯಿತು. ಸ್ವತಹ ಸಚಿವರೇ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಮೆಂಡನ್, ಮೀನುಗಾರ ಮುಖಂಡ ಯಶ್ಪಾಲ್ ಸುವರ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜಯಕುಮಾರ್ ಪರ್ಕಳ ಮುಂತಾದವರೊಂದಿಗೆ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಿದ ದೋಣಿಯಲ್ಲಿ ಕುಳಿತು ಹತ್ತು ನಿಮಿಷ ಸಮುದ್ರದಲ್ಲಿ ಸಂಚರಿಸಿ ಬಂದರು.
ಸ್ವತಹ ಸಚಿವರೇ, ಶಾಸಕರಾದ ಕೆ.ರಘುಪತಿ ಟ್,ಲಾಲಾಜಿಮೆಂಡನ್,ಮೀನುಗಾರಮುಖಂಡಯಶ್ಪಾಲ್ಸುವರ್ಣ,ಜೆಡಿಎಸ್ಜಿಲ್ಲ್ಯಾಕ್ಷ ಯೋಗೀಶ್ ಶೆಟ್ಟಿ, ಜಯಕುಮಾರ್ ಪರ್ಕಳ ಮುಂತಾದವರೊಂದಿಗೆ ಎಲೆಕ್ಟ್ರಿಕ್ ಇಂಜಿನ್ ಅಳವಡಿಸಿದ ದೋಣಿಯಲ್ಲಿ ಕುಳಿತು ಹತ್ತು ನಿಮಿಷ ಸಮುದ್ರದಲ್ಲಿ ಸಂಚರಿಸಿ ಬಂದರು. ಮುಂದಿನ ತಿಂಗಳು ಮೀನುಗಾರಿಕಾ ಋತು ಆರಂಭಗೊಂಡ ನಂತರ ಮೀನುಗಾರಿಕೆಗೆ ತೆರಳುವ ಮೂಲಕ ಇದನ್ನು ಇನ್ನಷ್ಟು ಪರೀಕ್ಷೆಗೊಳಪಡಿಸಿ, ಈ ಪ್ರಯೋಗ ಸಂಪೂರ್ಣ ಯಶಸ್ವಿಯಾದರೆ ಮುಂದೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವ ನಾಡಗೌಡ ಮೀನುಗಾರರಿಗೆ ತಿಳಿಸಿದರು.
ಆದರೆ ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳು ಹಿರಿಯ ಮುಖಂಡರಾದ ಜನಾರ್ದನ ತಿಂಗಳಾಯರ ನೇತೃತ್ವದಲ್ಲಿ ಸಚಿವರ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಆದರೆ ಮಲ್ಪೆ ನಾಡದೋಣಿ ಮೀನುಗಾರರ ಸಂಘದ ಪದಾಧಿಕಾರಿಗಳು ಹಿರಿಯ ಮುಖಂಡರಾದ ಜನಾರ್ದನ ತಿಂಗಳಾಯರ ನೇತೃತ್ವದಲ್ಲಿ ಸಚಿವರ ಈ ರ್ನಿಾರಕ್ಕೆತೀವ್ರವಿರೋ ವ್ಯಕ್ತಪಡಿಸಿದರು. ಸೀಮೆ ಎಣ್ಣೆ ಸಿಗುವುದಿಲ್ಲ ಎಂದರೇನರ್ಥ, ಈಗಾಗಲೇ ಸೀಮೆಎಣ್ಣೆ ಆಧಾರಿತ ಔಟ್ಬೋರ್ಡ್ ಎಂಜಿನ್ ಬಳಸಿದ 20,000 ನಾಡದೋಣಿಗಳನ್ನು ಏನು ಮಾಡಬೇಕು. ಅಲ್ಲದೇ ಎಲೆಕ್ಟ್ರಿಕ್ ಇಂಜಿನ್ನಲ್ಲಿ ವೇಗವಾಗಿ ಸಾಗಲು, ಮೀನುಗಾರಿಕೆ ನಡೆಸಲು ಅಸಾಧ್ಯ. ನಮಗೆ ಸೀಮೆಎಣ್ಣೆ ನಿಲ್ಲಿಸಿದರೆ ನಾವು ಹೋರಾಟಕ್ಕಿಳಿಯುತ್ತೇವೆ ಎಂದು ಮೀನುಗಾರರು ಪಟ್ಟು ಹಿಡಿದರು.
ಮೀನುಗಾರರ ಮನ ಒಲಿಸಲು ಮುಂದಾದ ಸಚಿವರು, ಸೀಮೆಎಣ್ಣೆಯನ್ನು ಕೇಂದ್ರ ಸರಕಾರ ಇಂದಲ್ಲ, ನಾಳೆ ಸರಬರಾಜು ಮಾಡುವುದನ್ನು ನಿಲ್ಲಿಸಿಯೇ ನಿಲ್ಲಿಸುತ್ತದೆ. ಆಗ ಹಠಾತ್ತನೆ ನಿಮಗೆ ತೊಂದರೆಯಾಗಬಾರದೆಂದು ಬದಲಿ ವ್ಯವಸ್ಥೆಯಾಗಿ ಇದನ್ನು ಪರಿಶೀಲಿಸುತಿದ್ದೇವೆ. ಕೇಂದ್ರ ಪಿಡಿಎಸ್ಗೆ ನೀಡುವುದನ್ನು ನಿಲ್ಲಿಸಿದರೂ, ನಾವು ನಿಮಗೆ ಮಾರುಕಟ್ಟೆಯಿಂದ ನೀಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಮಾರುಕಟ್ಟೆಯಲ್ಲೇ ಸಿಗದಿದ್ದರೆ ಏನು ಮಾಡಬೇಕು ಎಂದು ಪ್ರಶ್ನಿಸಿದ ನಾಡಗೌಡ, ಅದು ಸಿಗುವವರೆಗೆ ಮೀನುಗಾರರಿಗೆ ಸೀಮೆಎಣ್ಣೆಯ ಸಮಸ್ಯೆ ಆಗದು ಎಂದು ಭರವಸೆ ನೀಡಿದರು.
ಶಾಸಕ ರಘುಪತಿ ಭಟ್ ಹಾಗೂ ಯಶ್ಪಾಲ್ ಸುವರ್ಣ ಅವರೂ ಮೀುಗಾರರಿಗೆ ಸಮಾಧಾನ ಪಡಿಸಿದರು.
ಜರ್ಮನ್ ಕಂಪೆನಿಯ ಇಂಜಿನ್
ಜರ್ಮನಿ ಮೂಲದ ಟಾರ್ಕಿಡೊ ಕಂಪೆನಿಯ ಎಲೆಕ್ಟ್ರಿಕ್ ಇಂಜಿನ್ 1, 3, 5, 10, 20, 50 ಹಾರ್ಸ್ ಪವರ್ನಲ್ಲಿ ಲಭ್ಯವಿದ್ದು, ಗಂಟೆಗೆ 7ಕಿ.ಮೀ.ನಿಂದ ಗರಿಷ್ಠ 16ಕಿ.ಮೀ. ದೂರ ಸಾಗಲಿದೆ ಎಂದು ಕಂಪೆನಿಯ ಅಧಿಕಾರಿಗಳು ಮಾಹಿತಿ ನೀಡಿದರು. ಇಂಜಿನ್ ಸಂಪೂರ್ಣ ಚಾರ್ಜ್ ಆಗಲು 3 ಗಂಟೆ ಬೇಕಾಗಿದ್ದು, ಬ್ಯಾಟರಿ 10 ವರ್ಷ ಬಾಳಿಕೆ ಬರಲಿದೆ ಎಂದರು.
ಎಲೆಕ್ಟ್ರಿಕ್ ಬ್ಯಾಟರಿಯಲ್ಲಿ ನ್ಯೂನತೆ ಇದ್ದರೆ ಅದನ್ನು ಸರಿಪಡಿಸಲು, ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದರು. ಗೋವಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಇದನ್ನು ಬಳಸಲಾಗುತ್ತಿದೆ ಎಂದೂ ಅವರು ಹೇಳಿದರು.