ಶಿರೂರು ಶ್ರೀ ನಿಧನಕ್ಕೆ ಕಲ್ಕೂರ ಸಂತಾಪ
ಮಂಗಳೂರು, ಜು.20: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಯತಿ ಲಕ್ಷ್ಮೀವರ ತೀರ್ಥ ಶ್ರೀ ನಿಧನಕ್ಕೆ ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಎಸ್.ಪ್ರದೀಪಕುಮಾರ ಕಲ್ಕೂರ ತಮ್ಮ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪರ್ಯಾಯದ ಸಂದರ್ಭ ಮಂಗಳೂರಿನ ಸಾರ್ವಜನಿಕರಿಂದ ಪೌರಸನ್ಮಾನ ಸ್ವೀಕರಿಸಿದ್ದ ಶಿರೂರು ಶ್ರೀ ವೈವಿಧ್ಯಮಯವಾಗಿ ಶ್ರೀಕೃಷ್ಣನ ವಿಗ್ರಹವನ್ನು ಅಲಂಕರಿಸಿ ಭಕ್ತರ ಮನೆ-ಮನಗಳಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ್ದರು. ಉಡುಪಿ ರಥಬೀದಿಯನ್ನು ವಾಹನ ಮುಕ್ತಗೊಳಿಸುವಲ್ಲಿ ಪ್ರಮುಖ ಪಾತ್ರ ಇವರದಾಗಿತ್ತು.
ಸದಾ ಒಂದಿಲ್ಲೊಂದು ಜನಪರ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ಶ್ರೀಗಳು ಓರ್ವ ‘ಜನಸ್ನೇಹಿ’ ಸ್ವಾಮೀಜಿಯಾಗಿದ್ದರು. ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದೆ ಎಂದು ಕಲ್ಕೂರ ಸಂತಾಪ ವ್ಯಕ್ತಪಡಿಸಿದರು.
Next Story





