Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ನಾಗರಹಾವು: ಪುಟ್ಟಣ್ಣನ ಪುಂಗಿಗೆ...

ನಾಗರಹಾವು: ಪುಟ್ಟಣ್ಣನ ಪುಂಗಿಗೆ ಪ್ರೇಕ್ಷಕರೇ ಹಾವುಗಳು

ಕನ್ನಡ ಸಿನೆಮಾ

ವಾರ್ತಾಭಾರತಿವಾರ್ತಾಭಾರತಿ22 July 2018 12:04 AM IST
share
ನಾಗರಹಾವು: ಪುಟ್ಟಣ್ಣನ ಪುಂಗಿಗೆ ಪ್ರೇಕ್ಷಕರೇ ಹಾವುಗಳು

1972ರಲ್ಲಿ ತೆರೆಕಂಡ ಚಿತ್ರವೊಂದು ಇಂದಿಗೂ ಈ ಮಟ್ಟಕ್ಕೆ ಕ್ರೇಝ್ ಉಳಿಸಿಕೊಂಡಿರುವುದು ವಿಶೇಷ. ಆದರೆ ಮತ್ತೊಮ್ಮೆ ಚಿತ್ರ ನೋಡಿದಾಗ ಅಂಥದೊಂದು ಸೆಳೆತವನ್ನು ನಾಗರಹಾವು ಸೃಷ್ಟಿಸಿರುವುದರಲ್ಲಿ ಯಾವ ವಿಶೇಷವೂ ಇಲ್ಲ. ಯಾಕೆಂದರೆ ಚಿತ್ರ ಇಂದಿಗೂ ಅಷ್ಟು ವಿಶಿಷ್ಟವಾಗಿಯೇ ಕಾಣಿಸುತ್ತದೆ.

ಕಾದಂಬರಿ ಆಧಾರಿತ ಚಿತ್ರಗಳ ಶಕ್ತಿಯೇ ಹಾಗೆ. ಅದರಲ್ಲೂ ತರಾಸು ಅವರ ಮೂರು ಕಾದಂಬರಿಗಳನ್ನು ಸೇರಿಸಿ ಒಂದು ಚಿತ್ರರತ್ನವನ್ನೇ ಸೃಷ್ಟಿಸಿದ್ದಾರೆ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಇದೊಂದು ಸಿನೆಮಾ ಆನಂತರದ ಎಷ್ಟೊಂದು ಚಿತ್ರಗಳಿಗೆ ಸ್ಫೂರ್ತಿಯಾಗಿದೆ ಎನ್ನುವುದು ಚಿತ್ರ ನೋಡುತ್ತಿರುವಂತೆ ಗೊತ್ತಾಗಿ ಬಿಡುತ್ತದೆ. ಎರಡು ದಶಕದ ಹಿಂದೆ ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿದ್ದ ‘ಸ್ಪಟಿಕಂ’ ಸಿನೆಮಾ ಕೂಡ ಇದೇ ಹಿನ್ನೆಲೆಯುಳ್ಳ ಚಿತ್ರವಾಗಿತ್ತು. ಈ ಸಿನೆಮಾವನ್ನು ತೀರ್ಥ ಹೆಸರಲ್ಲಿ ಮತ್ತೆ ಕನ್ನಡಕ್ಕೆ ರಿಮೇಕ್ ಮಾಡಲಾಗಿತ್ತು ಅನ್ನೋದು ಸದ್ಯದ ಕನ್ನಡ ಚಿತ್ರರಂಗದ ದುರಂತ. ಲೋಕನಾಥ್ ಅವರ ಕ್ಯಾರೆಕ್ಟರನ್ನೇ ಕದ್ದು ಹಿಂದಿಯ ‘ತ್ರಿ ಇಡಿಯಟ್ಸ್’ನಲ್ಲಿ ಮುಂದುವರಿಸಿದ್ದಾರೆ ಅನಿಸಿದರೆ ಅಚ್ಚರಿಯಿಲ್ಲ. ಕನ್ನಡದಲ್ಲಿ ನಾಗರಹಾವು ಹೆಸರಲ್ಲೇ ರಿಮೇಕ್ ಗಳು, ವಿಚಿತ್ರ ಸಿನೆಮಾಗಳು ಬಂದರೂ ಯಾವುದೂ ಇದರೆತ್ತರ ತಲುಪಲೇ ಇಲ್ಲ. ಅದಕ್ಕೆ ಕಾರಣ ಕತೆ ಮತ್ತು ನಿರೂಪಣೆಯ ರೀತಿ ಎನ್ನದೇ ವಿಧಿಯಿಲ್ಲ.

ಎಪ್ಪತ್ತರ ಕಾಲಘಟ್ಟದ ಚಿತ್ರವೊಂದನ್ನು ಈಗಿನ ಶ್ರೇಷ್ಠ ನಿರ್ದೇಶಕರು ಮಾಡಿದರೆ ಹೇಗಿರಬಹುದೋ ಅಷ್ಟೇ ಗುಣಮಟ್ಟದೊಂದಿಗೆ ಚಿತ್ರವನ್ನು ಮರಳಿ ತಂದ ಕೀರ್ತಿ ಬಾಲಾಜಿಗೆ ಸಲ್ಲುತ್ತದೆ. ಸಾಮಾನ್ಯವಾಗಿ ಸಿನೆಮಾ ಸ್ಕೋಪ್ ಮಾಡಿದಾಗ ದೃಶ್ಯಗಳು ವಿಕಾರಗೊಳ್ಳುವುದನ್ನು ನೋಡಿರುವ ನಮಗೆ ಇದು ಅಂಥ ಅನುಭವ ನೀಡುವುದಿಲ್ಲ. ದೃಶ್ಯಗಳ ಕ್ವಾಲಿಟಿಗೆ ತಕ್ಕಂತೆ ಹಿನ್ನೆಲೆ ಸಂಗೀತ ಕೂಡ ಅದ್ಭುತವಾಗಿ ಸೇರಿಕೊಂಡಿದೆ. ಬಿಜಿಎಮ್ ಹೊಸದಾಗಿ ಧ್ವನಿಸುವ ಮೂಲಕ ನಮ್ಮನ್ನು ಚಿತ್ರದಿಂದ ಹೊರಗೆ ತರುವಂಥ ಅಪಾಯ ನಡೆದಿಲ್ಲ. ಎಲ್ಲವೂ ಚಿತ್ರದೊಂದಿಗೇ ಸಾಗುವ ಕಾರಣ ನಾವು ಕೂಡ ಚಿತ್ರದೊಳಗೇ ಮುಳುಗಿ ಬಿಡುತ್ತೇವೆ. ಇಂದಿನ ಸಿನೆಮಾ ಟೇಕಿಂಗ್ಸ್‌ಗಳಲ್ಲೇ ತಪ್ಪು ಹುಡುಕುವ ಯುವ ಮನಸ್ಸುಗಳಿಗೂ ಕೂಡ ತಂತ್ರಜ್ಞಾನ ಬೆಳೆದಿರದ ದಿನಗಳಲ್ಲಿ ಆ ದೃಶ್ಯಗಳನ್ನು ಹೇಗೆ ತೆಗೆದಿರಬಹುದು ಎಂಬ ಕುತೂಹಲವನ್ನಷ್ಟೇ ಚಿತ್ರ ನೀಡುತ್ತದೆ.

ನಾಗರಹಾವಿನ ಪತಾಕೆಯನ್ನು ಚಾಮಯ್ಯ ಮೇಷ್ಟ್ರು ಹಾರಿ ಬಿಟ್ಟಾಗ ಕ್ಯಾಮರಾ ಅದನ್ನು ಹಿಂಬಾಲಿಸುವ ರೀತಿ ಸೇರಿದಂತೆ ಛಾಯಾಗ್ರಾಹಕ ಚಿಟ್ಟಿಬಾಬು ಮತ್ತೊಮ್ಮೆ ಸ್ಮರಿಸಲ್ಪಡುತ್ತಾರೆ. ಭಕ್ತವತ್ಸಲಂ ಸಂಕಲನದ ರೀತಿಗೆ ತಲೆಬಾಗಲೇ ಬೇಕು. ಇನ್ನು ಕತೆಯೂ ಅಷ್ಟೇ. ಕಾಲಘಟ್ಟ ಬದಲಾದರೂ ಕೂಡ ಸಮಾಜ ವಿದ್ಯಾಭ್ಯಾಸದಲ್ಲಿ ಹಿನ್ನಡೆ ಕಂಡ ವಿದ್ಯಾರ್ಥಿಯನ್ನು ನೋಡುವ ರೀತಿ, ಧರ್ಮಗಳ ನಡುವೆ ನೆಮ್ಮದಿಯ ಭಾವೈಕ್ಯತೆ ಬಯಸುವ ಬದಲು ಜಾತಿ, ಧರ್ಮಗಳ ಪ್ರತ್ಯೇಕತೆಯ ಹೆಸರಲ್ಲೇ ಕೊಳೆತು ಹೋಗುವ ಮನಃಸ್ಥಿತಿಗಳಿಗೆ ಇಂದಿಗೂ ಕೊರತೆಯಿಲ್ಲ. ಹಾಗಾಗಿ ಇದು ಇಂದಿಗೂ ಅನ್ವಯಿಸುವಂಥ ಘಟನೆಗಳಿಂದ ಕೂಡಿದ ಚಿತ್ರ. ಒಟ್ಟಿನಲ್ಲಿ ಕ್ಲಾಸ್ ಚಿತ್ರವೊಂದನ್ನು ಅದೇ ಗುಣಮಟ್ಟದೊಂದಿಗೆ ಮತ್ತೆ ಚಿತ್ರಮಂದಿರಗಳಲ್ಲಿ ನೋಡುವ ಅವಕಾಶ ಕನ್ನಡಿಗರದ್ದಾಗಿದೆ.

ತಾರಾಗಣ: ವಿಷ್ಣುವರ್ಧನ್, ಆರತಿ
ನಿರ್ದೇಶನ: ಪುಟ್ಟಣ್ಣ ಕಣಗಾಲ್
ನಿರ್ಮಾಣ: ಎನ್. ವೀರಾಸ್ವಾಮಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X