ಪಡುಕುತ್ಯಾರಿನಲ್ಲಿ ಯಡಿಯೂರಪ್ಪರಿಂದ ‘ಶತ ಚಂಡಿಕಾಯಾಗ’

ಕಾಪು, ಜು.25: ಇಲ್ಲಿಗೆ ಸಮೀಪದ ಕುತ್ಯಾರು ಆನೆಗುಂದಿ ಮಠದಲ್ಲಿ ಕಳೆದ ರವಿವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕುಟುಂಬ ಸಮೇತರಾಗಿ ವಿವಿಧ ಯಾಗಗಳಲ್ಲಿ ಪಾಲ್ಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಜ್ಯೋತಿಷಿಗಳು ಹೇಳಿದಂತೆ ಹರಕೆ ಹೊತ್ತಿದ್ದ ಯಡಿಯೂರಪ್ಪ, ಪಡು ಕುತ್ಯಾರಿನ ಆನೆಗುಂದಿ ಮಠದಲ್ಲಿ ಮಹಾರುದ್ರ ಯಾಗ, ಶತಚಂಡಿಕಾ ಯಾಗ ವನ್ನು ಆಯೋಜಿಸಿ ಕುಟುಂಬ ಸಮೇತರಾಗಿ ಅದರಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ. ಯಾಗದಲ್ಲಿ ಯಡಿಯೂರಪ್ಪ ಅವರೊಂದಿಗೆ ಪುತ್ರರಾದ ವಿಜಯೇಂದ್ರ, ರಾಘವೇಂದ್ರ, ಸೊಸೆಯಂದಿರು ಹಾಗೂ ಆಪ್ತರು ಭಾಗಿಯಾಗಿದ್ದು, ಪುರೋಹಿತರಾದ ಶ್ರೀಕೃಷ್ಣ ಉಪಾಧ್ಯಾಯ ನೇತೃತ್ವದಲ್ಲಿ ಯಾಗ ನಡೆದಿದೆ.
ಜ್ಯೋತಿಷಿಗಳು ಹೇಳಿದಂತೆ ಹರಕೆ ಹೊತ್ತಿದ್ದ ಯಡಿಯೂರಪ್ಪ, ಪಡು ಕುತ್ಯಾರಿನ ಆನೆಗುಂದಿ ಮಠದಲ್ಲಿ ಮಹಾರುದ್ರ ಯಾಗ, ಶತಚಂಡಿಕಾ ಯಾಗ ವನ್ನು ಆಯೋಜಿಸಿ ಕುಟುಂಬ ಸಮೇತರಾಗಿ ಅದರಲ್ಲಿ ಪಾಲ್ಗೊಂಡಿದ್ದರು. ಆದರೆ ಯಡಿಯೂರಪ್ಪ ಯಾಗದಲ್ಲಿ ಭಾಗವಹಿಸುವ ಕುರಿತಂತೆ ಪಕ್ಷದ ಜಿಲ್ಲಾ ನಾಯಕರಿಗಾಗಲಿ, ಬೆಂಗಾವಲು ಪೊಲೀಸರಿಗೆ ಸಹ ಮಾಹಿತಿ ಇರಲಿಲ್ಲ. ಸಂಬಂಧ ಪಟ್ಟವರನ್ನು ಹೊರತು ಪಡಿಸಿ ಉಳಿದ ಯಾರಿಗೂ ಒಳಗೆ ಪ್ರವೇಶ ವಿರಲಿಲ್ಲ ಎಂದು ತಿಳಿದುಬಂದಿದೆ.