ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಮಂಡಳಿ ಅಧ್ಯಕ್ಷರಾಗಿ ಮುರಲಿ

ಮುರಲಿ ಕಡೆಕಾರ್
ಉಡುಪಿ, ಜು.25: ಅಂಬಲಪಾಡಿಯ ಶ್ರೀಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ 60ನೇ ವಾರ್ಷಿಕ ಮಹಾಸಭೆ ಮುರಲಿ ಕಡೆಕಾರ್ ಅಧ್ಯಕ್ಷತೆ ಯಲ್ಲಿ ಜರಗಿತು. ಗತಸಭೆ ವರದಿ, ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡನೆಯ ಬಳಿಕ ಮಹಾಸಭೆಯಲ್ಲಿ ಈ ಕೆಳಗಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷ: ಮುರಲಿ ಕಡೆಕಾರ್, ಉಪಾಧ್ಯಕ್ಷ: ಕೆ.ಅಜಿತ್ ಕುಮಾರ್, ಕಾರ್ಯ ದರ್ಶಿ: ಕೆ.ಜೆ.ಕೃಷ್ಣ, ಜತೆ ಕಾರ್ಯದರ್ಶಿ: ರಮೇಶ್ ಸಾಲಿಯಾನ್, ಕೋಶಾಧಿಕಾರಿ: ಎ. ನಟರಾಜ ಉಪಾಧ್ಯ, ಸದಸ್ಯರು: ಕೆ.ಜೆ. ಗಣೇಶ್, ಡಾ. ಪಿ. ಗಣಪತಿ ಭಟ್, ನಾರಾಯಣ ಎಂ. ಹೆಗಡೆ, ಜಯ ಕೆ., ಮಂಜುನಾಥ ತೆಂಕಿಲ್ಲಾಯ, ಎ.ಪ್ರವೀಣ್ ಉಪಾಧ್ಯ, ರಾಘವೇಂದ್ರ ಸೋಮಯಾಜಿ, ಪ್ರಸಾದ್ ಹೆಬ್ಬಾರ್, ಕೆ.ಜೆ. ಸುಧೀಂದ್ರ, ಕೆ. ಮಾಧವ.
ಆಹ್ವಾನಿತರು: ಎಸ್.ವಿ.ಭಟ್, ಶ್ರೀರಮಣ ಆಚಾರ್ಯ, ಕೆ. ವಿಠಲ ಗಾಣಿಗ, ವಿದ್ಯಾಪ್ರಸಾದ್, ವಸಂತ ಪಾಲನ್, ಸುನೀಲ್ ಕುಮಾರ್. ಲೆಕ್ಕ ಪರಿಶೋಧಕ ರಾಗಿ ಸಿ.ಎ.ಪ್ರದೀಪ್ ಜೋಗಿ ಇವರನ್ನು ನೇಮಕ ಮಾಡಲಾಯಿತು.
Next Story