Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲಿಂಗದೇವನೆ ಕರ್ತ

ಲಿಂಗದೇವನೆ ಕರ್ತ

ವಾರ್ತಾಭಾರತಿವಾರ್ತಾಭಾರತಿ28 July 2018 12:04 AM IST
share
ಲಿಂಗದೇವನೆ ಕರ್ತ

ಲಿಂಗದೇವನೆ ಕರ್ತ, ಶಿವಭಕ್ತನೇ ಶ್ರೇಷ್ಠ.

ಕೊಲ್ಲದಿರ್ಪುದೆ ಧರ್ಮ.
ಅಧರ್ಮದಿಂದ ಬಂದುದನೊಲ್ಲದಿರ್ಪುದೆ ನೇಮ.
ಅಳುಪಿಲ್ಲದಿರ್ಪುದೆ ವ್ರತ.
ಇದೇ ಸತ್ಪಥ, ಉಳಿದುದೆಲ್ಲ ಮಿಥ್ಯವೆಂದೆ ಕಾಣಾ,
ದೇವರಾಯ ಸೊಡ್ಡಳಾ.
                                        -ಸೊಡ್ಡಳ ಬಾಚರಸ

ಸೊಡ್ಡಳ ಬಾಚರಸ, ಸೌರಾಷ್ಟ್ರ ಸೋಮೇಶ್ವರನ ಭಕ್ತನಾಗಿದ್ದ. ಬಿಜ್ಜಳನ ಉಗ್ರಾಣದಲ್ಲಿ ಧಾನ್ಯ ಅಳೆದು ಕೊಡುವ ಮತ್ತು ಅದರ ಲೆಕ್ಕವಿಡುವ ಕಾಯಕ ಮಾಡುತ್ತಿದ್ದ ಬಾಚರಸ, ಬಸವನಿಷ್ಠೆಗೆ ಹೆಸರಾಗಿದ್ದಾನೆ. ಈತನ ವಿಚಾರಗಳಲ್ಲಿ ಸ್ಪಷ್ಟತೆ ಇದೆ. ವ್ಯಾಖ್ಯಾನ ರೂಪದಲ್ಲಿ ಘನವಾದ ಶಬ್ದಗಳ ಅರ್ಥ ವಿವರಿಸುವ ಕ್ರಮ ಈ ವಚನದಲ್ಲಿದೆ.
ಪ್ರತಿಯೊಂದು ಶಬ್ದವೂ ಯಾದೃಚ್ಛಿಕವಾಗಿದೆ. ಅಂದರೆ ಈ ಶಬ್ದಕ್ಕೆ ಇದೇ ಅರ್ಥ ಏಕೆ ಬಂತು ಎಂದು ಹೇಳಲು ಸಾಧ್ಯವಿಲ್ಲ. ಕಲ್ಲು, ಮಣ್ಣು, ಆನೆ, ಕುದುರೆ ಹೀಗೆ ಶಬ್ದಗಳು ಏಕೆ ಉತ್ಪತ್ತಿಯಾದವು ಎಂಬುದು ಯಾರಿಗೂ ಗೊತ್ತಿಲ್ಲ. ಅನೇಕ ಶಬ್ದಗಳು ಕಾಲಕ್ಕೆ ತಕ್ಕಂತೆ ಬದಲಾದುದೂ ಉಂಟು. ಹಳೆಗನ್ನಡದಲ್ಲಿ ತಂದೆಗೆ ‘ಅಮ್ಮ’ ಎನ್ನುತ್ತಿದ್ದರು. ‘ಪೆದ್ದ’ ಎಂದರೆ ಹಿರಿಯ ಎಂಬ ಅರ್ಥವಿತ್ತು. ಇನ್ನು ಒಂದೇ ಶಬ್ದ ವಿವಿಧ ಸಂದರ್ಭಗಳಲ್ಲಿ ವಿವಿಧ ಅರ್ಥ ಕೊಡುವುದು. ಅಲ್ಲದೆ ಶಬ್ದಾರ್ಥ, ಲಕ್ಷಣಾರ್ಥ ಹಾಗೂ ಧ್ವನ್ಯರ್ಥಗಳೂ ಇರುವವು. ಹಾಗೆಯೆ ಆಧ್ಯಾತ್ಮಿಕ ಶಬ್ದಗಳು ಮತ್ತು ಒಳಗುಟ್ಟಿನ ಅರ್ಥಗಳಿಂದ ಕೂಡಿರುವ ಬೆಡಗಿನ ಶಬ್ದಗಳೂ ಇವೆ. ಈ ಹಿನ್ನೆಲೆಯಲ್ಲಿ ಸೊಡ್ಡಳ ಬಾಚರಸ ವಿವಿಧ ಶಬ್ದಗಳಿಗೆ ಸಮೂಹ ಪ್ರಜ್ಞೆಯೊಂದಿಗೆ ವ್ಯಾಖ್ಯಾನಿಸುವುದರ ಮೂಲಕ ನಿಖರತೆಯನ್ನು ಸಾಧಿಸಿದ್ದಾನೆ.
  ಲಿಂಗದೇವ ಎಂಬ ಪದ ಶಿವನನ್ನು ಪ್ರತಿನಿಧಿಸುತ್ತದೆ. ಶಿವನೇ ಸೃಷ್ಟಿಕರ್ತ ಎಂದು ಸೊಡ್ಡಳ ಬಾಚರಸ ಸಾರುತ್ತಾನೆ. ಶಿವದೇವನೊಬ್ಬನೇ ದೇವನಾಗಿರುವುದರಿಂದ ಆತ ಎಲ್ಲ ಜನಸಮುದಾಯಗಳಿಗಷ್ಟೇ ಅಲ್ಲದೆ ಸಕಲಜೀವರಾಶಿಗೆ ಸೇರಿದವನು. ಆ ಶಿವನನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಆದರೆ ಆತನೇ ಸರ್ವ ಸೃಷ್ಟಿಕರ್ತ. ಸೃಷ್ಟಿಯೇ ದೇವರಲ್ಲ. ಅದಕ್ಕೊಬ್ಬ ಕರ್ತನಿದ್ದಾನೆ ಎಂಬುದನ್ನು ಸೊಡ್ಡಳ ಸ್ಪಷ್ಟಪಡಿಸುತ್ತಾನೆ. ಇಂಥ ಸೃಷ್ಟಿಕರ್ತನಿಗೆ ಶರಣಾಗುವ ಭಕ್ತನೇ ಶ್ರೇಷ್ಠ. ಸರ್ವ ಸಮತ್ವದ ಮನೋಭಾವವುಳ್ಳ ಭಕ್ತನು ತನ್ನನ್ನು ‘ಕಿರಿಯ’ ಎಂದು ಭಾವಿಸುತ್ತಾನೆ. ಆದ್ದರಿಂದಲೇ ಆತ ಶ್ರೇಷ್ಠ! ಕೊಲ್ಲದಿರುವುದೇ ಆತನ ಧರ್ಮ. ಅಧರ್ಮದಿಂದ ಬಂದದ್ದನ್ನು ಬೇಡ ಎನ್ನುವುದೇ ಆತನ ನೇಮ. ಬಯಕೆ ಇಲ್ಲದೆ ಬದುಕುವುದೇ ಆತನ ವ್ರತ. ಆತನೇ ಶರಣ. ಹೀಗೆ ಸಾಗುವ ದಾರಿಯೇ ಸತ್ಪಥ. ಉಳಿದ ಜೀವನವಿಧಾನ ಅಸತ್ಯದಿಂದ ಕೂಡಿದ್ದಾಗಿರುತ್ತದೆ ಎಂದು ಬಾಚರಸ ಸ್ಪಷ್ಟಪಡಿಸುತ್ತಾನೆ. ಹೀಗೆ ಸತ್ಪಥದ ಪಂಚಸೂತ್ರಗಳು ಲೋಕದ ಮಾನವರಿಗೆ ದಾರಿ ತೋರುವ ಸಾಮರ್ಥ್ಯ ಹೊಂದಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X