Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಡೋಕಾ ಲಾದಲ್ಲಿ ಚೀನಾ ಸೇನೆಯ ಬಿರುಸಿನ...

ಡೋಕಾ ಲಾದಲ್ಲಿ ಚೀನಾ ಸೇನೆಯ ಬಿರುಸಿನ ಚಟುವಟಿಕೆ ಎಂಬ ವರದಿ ತಳ್ಳಿಹಾಕಿದ ಭಾರತ

ವಾರ್ತಾಭಾರತಿವಾರ್ತಾಭಾರತಿ29 July 2018 9:19 PM IST
share
ಡೋಕಾ ಲಾದಲ್ಲಿ ಚೀನಾ ಸೇನೆಯ ಬಿರುಸಿನ ಚಟುವಟಿಕೆ ಎಂಬ ವರದಿ  ತಳ್ಳಿಹಾಕಿದ ಭಾರತ

ಹೊಸದಿಲ್ಲಿ, ಜು.29: ಚೀನಾದ ಸೇನೆ ಡೋಕಾ ಲಾ ಪ್ರಸ್ಥಭೂಮಿಯಲ್ಲಿ ಚಟುವಟಿಕೆಯನ್ನು ಬಿರುಸುಗೊಳಿಸಿದೆ ಎಂಬ ವರದಿಯನ್ನು ತಳ್ಳಿ ಹಾಕಿರುವ ಭಾರತೀಯ ಸೇನೆಯು, ಇದು ಸೇನೆ ನಡೆಸುತ್ತಿರುವ ದೈನಂದಿನ ಗಸ್ತು ತಿರುಗಾಟದ ಭಾಗವಾಗಿದೆ ಎಂದು ಹೇಳಿದೆ.

ತ್ರಿವಳಿ ರಾಷ್ಟ್ರಗಳ(ಚೀನಾ, ಭಾರತ, ಭೂತಾನ್) ಗಡಿಗಳ ಸಂಗಮ ಸ್ಥಳವಾಗಿರುವ ಡೋಕಾ ಲಾದಲ್ಲಿ ಮೂರೂ ರಾಷ್ಟ್ರಗಳ ಸೇನಾಪಡೆಯ ಉಪಸ್ಥಿತಿಯಿದ್ದು, ಯೋಧರ ತಂಡವನ್ನು ಆಗಿಂದಾಗ್ಗೆ ಬದಲಾಯಿಸಲಾಗುತ್ತದೆ. ಹೀಗೆ ಬದಲಾಯಿಸುವ ಸಂದರ್ಭ ಹೊಸ ತಂಡದ ಸೈನಿಕರು ಹಾಗೂ ಹಳೆಯ ತಂಡದ ಸೈನಿಕರು ಒಟ್ಟು ಸೇರಿದಾಗ ಸೈನಿಕರ ಸಂಖ್ಯೆ ಹೆಚ್ಚಾದಂತೆ ಭಾಸವಾಗುತ್ತದೆ ಎಂದು ಭಾರತೀಯ ಸೇನೆ ವಿವರಿಸಿದೆ.

ಬುಧವಾರ ಅಮೆರಿಕದ ಸಂಸತ್‌ನಲ್ಲಿ ಹೇಳಿಕೆ ನೀಡಿದ್ದ ಸಂಸದೆ ಆ್ಯನ್ ವಾಗ್ನರ್ ಡೋಕಾ ಲಾದಲ್ಲಿ ಚೀನಾದ ಸೇನೆ ತನ್ನ ಚಟುವಟಿಕೆಯನ್ನು ಪುನರಾರಂಭಿಸಿದೆ. ಅಲ್ಲದೆ ಡೋಕಾ ಲಾದಲ್ಲಿ ಚೀನಾದ ಸೇನೆ ಸರಕು ಸಾಗಣೆ ಮತ್ತಿತರ ಯುದ್ಧ ಚಟುವಟಿಕೆಗಳನ್ನು ಬಿರುಸುಗೊಳಿಸಿದೆ ಎಂದಿದ್ದರು. ಕಳೆದ ವರ್ಷದಂತೆಯೇ, ಮುಂಬರುವ ಚಳಿಗಾಲಕ್ಕಾಗಿ ಚೀನಾದ ಸೇನೆ ಈಗಲೇ ಸಿದ್ಧತೆ ಆರಂಭಿಸಿದೆ. ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಹಿಮಪಾತ ಆಗುವ ಕಾರಣ ಅಗತ್ಯವಿರುವ ಸರಕುಗಳನ್ನು ಈಗಲೇ ಸಂಗ್ರಹ ಮಾಡಿಡುವ ಸಹಜ ಕ್ರಿಯೆ ಇದಾಗಿದೆ ಎಂದು ಭಾರತದ ಸೇನಾಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಚೀನಾದ ಪಿಎಲ್‌ಎ (ಪೀಪಲ್ಸ್ ಲಿಬರೇಷನ್ ಆರ್ಮಿ) ಡೋಕಾ ಲಾದಲ್ಲಿ ಸುಮಾರು 700 ಸೈನಿಕರನ್ನು ಹೊಂದಿದ್ದು ಘನ ವಾಹನ ಹಾಗೂ ಬರಾಕ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿದೆ.

ಆದರೆ ಡೋಕಾ ಲಾದಲ್ಲಿ ಚೀನಾ ಸೇನೆಯು ಭೂಮಿಯಿಂದ ಆಕಾಶಕ್ಕೆ ಉಡಾಯಿಸುವ ಕ್ಷಿಪಣಿ(ಎಸ್-300) ಬಳಸುವ ಅನುಕೂಲತೆ ಹೊಂದಿಲ್ಲ. ಇಲ್ಲಿ ಭಾರತೀಯ ಸೇನೆ ಎತ್ತರದ ಪ್ರದೇಶದಲ್ಲಿರುವ ಕಾರಣ ಭಾರತದ ಸೇನೆಯೊಂದಿಗಿನ ಸಂಘರ್ಷದ ಸಮಯದಲ್ಲಿ ಚೀನಾದ ಪಡೆಗಳು ತೆರೆದ ಬಯಲಿನಲ್ಲಿ ನಿಂತು ಯುದ್ದ ಮಾಡುವ ಪರಿಸ್ಥಿತಿಯಿದೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾದ ಸೇನೆಯ ಬಳಿ ಇರುವ ಭೂಮಿಯಿಂದ ಆಕಾಶಕ್ಕೆ ಉಡಾಯಿಸುವ ಕ್ಷಿಪಣಿಗಳು ಚೀನಾದ ಭೂಪ್ರದೇಶದ ಒಳಗಡೆ ತುಂಬ ದೂರದಲ್ಲಿರುವ ಯದೋಂಗ್ ಎಂಬಲ್ಲಿದೆ. ಇನ್ನೊಂದೆಡೆ ಚೀನಾದ ಸೇನೆಗೆ ಪ್ರತಿಯಾಗಿ ಭೂತಾನ್‌ನ ರಾಯಲ್ ಭೂತಾನ್ ಸೇನಾಪಡೆಯ ಯೋಧರನ್ನೂ ಇಲ್ಲಿ ಗಮನಾರ್ಹ ಪ್ರಮಾಣದಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ಮತ್ತು ಭೂತಾನ್ ನಡುವೆ ಡೋಕಾ ಲಾ ಪ್ರದೇಶದಲ್ಲಿ ಗಡಿ ಗುರುತಿನ ಬಗ್ಗೆ ಇರುವ ವಿವಾದವನ್ನು ಶೀಘ್ರ ಬಗೆಹರಿಸಿಕೊಳ್ಳುವಂತೆ ಭೂತಾನ್‌ನ ಮೇಲೆ ಚೀನಾ ನಿರಂತರ ಒತ್ತಡ ಹೇರುತ್ತಿದೆ. ಕಳೆದ ವರ್ಷ ಡೋಕಾ ಲಾದಲ್ಲಿ ಭಾರತದ ಭೂಭಾಗದಲ್ಲಿರುವ ಪ್ರದೇಶದ ಸನಿಹದಲ್ಲಿರುವ ಝಂಪೇರಿ ಪರ್ವತಶ್ರೇಣಿಯನ್ನು ತಲುಪಲು ರಸ್ತೆಯೊಂದನ್ನು ನಿರ್ಮಿಸಲು ಚೀನಾದ ಪಡೆಗಳು ನಡೆಸಿದ ಪ್ರಯತ್ನಕ್ಕೆ ಭಾರತೀಯ ಸೇನೆ ತಡೆಯೊಡ್ಡಿದ್ದು, ಉಭಯ ಸೇನೆಗಳ ನಡುವಿನ ಬಿಕ್ಕಟ್ಟು 73 ದಿನಗಳವರೆಗೆ ಮುಂದುವರಿದಿತ್ತು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X