ದಾವಣಗೆರೆ: ಸಾಲಬಾಧೆ ತಾಳಲಾರದೆ ನೇಣಿಗೆ ಶರಣಾದ ರೈತ

ದಾವಣಗೆರೆ, ಜು.30: ಸಾಲ ಬಾಧೆಯಿಂದ ಬೇಸತ್ತ ರೈತನೋರ್ವ ಮನನೊಂದು ನೇಣಿಗೆ ಶರಣಾಗಿರುವ ಘಟನೆ ಹರಿಹರ ತಾಲೂಕಿನ ಕಮಲಾಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಬಿ.ಸಿ. ಹಾಲೇಶ್ (28) ನೇಣಿಗೆ ಶರಣಾದ ರೈತ. ರೈತ ಹಾಲೇಶ್ ಕೃಷಿ ಚಟುವಟಿಕೆಗಳಿಗೆ ಹರಿಹರದ ಕಾರ್ಪೋರೆಷನ್ ಬ್ಯಾಂಕ್ನಲ್ಲಿ 2017ರಲ್ಲಿ 8 ಲಕ್ಷ ರೂ. ಹೊಳೆಸಿರಿಗೆರೆಯ ಪಿಜಿಬಿ ಬ್ಯಾಂಕ್ನಲ್ಲಿ 1 ಲಕ್ಷ ರೂ. ಸಹಕಾರಿ ಬ್ಯಾಂಕ್ನಲ್ಲಿ 65 ಸಾವಿರ ರೂ. ಹಾಗೂ ಕೈಗಡವಾಗಿ ಸುಮಾರು 5 ಲಕ್ಷ ರೂ. ಸಾಲ ಸೇರಿ ಸುಮಾರು 15 ಲಕ್ಷ ರೂ. ಸಾಲ ಮಾಡಿದ್ದರು. ಆದರೆ, ಸತತ ಬರಗಾಲದಿಂದ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಮಲೆಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





