Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಆತ್ಮವಿಶ್ವಾಸದ ಪ್ರತಿರೂಪ ಸಫ್ವಾನಳ ಸಾಧನೆ...

ಆತ್ಮವಿಶ್ವಾಸದ ಪ್ರತಿರೂಪ ಸಫ್ವಾನಳ ಸಾಧನೆ : ದೇಹ ಸೋಲಿಸಿದರೂ ಮನಸ್ಸು ಗೆಲ್ಲಿಸಿತು

ದುರ್ಗಾಕುಮಾರ್ ನಾಯರ್ಕೆರೆದುರ್ಗಾಕುಮಾರ್ ನಾಯರ್ಕೆರೆ31 July 2018 9:56 PM IST
share
ಆತ್ಮವಿಶ್ವಾಸದ ಪ್ರತಿರೂಪ ಸಫ್ವಾನಳ ಸಾಧನೆ : ದೇಹ ಸೋಲಿಸಿದರೂ ಮನಸ್ಸು ಗೆಲ್ಲಿಸಿತು

ಆತ್ಮವಿಶ್ವಾಸ ಮತ್ತು ಇಚ್ಛಾಶಕ್ತಿಯ ಮುಂದೆ ಎಲ್ಲಾ ಕೊರತೆಗಳು ತೃಣ ಸಮಾನ ಎಂದು ಇಲ್ಲೋರ್ವಳು ವಿದ್ಯಾರ್ಥಿನಿ ನಿರೂಪಿಸಿದ್ದಾಳೆ. ತನ್ನ ಮನೋಧೈರ‍್ಯಕ್ಕೆ ತಕ್ಕ ಪ್ರತಿಫಲವನ್ನೂ ಪಡೆದಿದ್ದಾಳೆ. ಹುಟ್ಟು ಅಂಗವೈಕಲ್ಯವನ್ನು ಮೆಟ್ಟಿನಿಂತ ಈಕೆ ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣಳಾಗಿ ಭರವಸೆಯ ಬದುಕಿಗೆ ಸಾಕ್ಷಿ ಯಾಗಿದ್ದಾಳೆ.

ಈಕೆ ಸಫ್ವಾನ. ಸುಳ್ಯದ ವಿವೇಕಾನಂದ ಸರ್ಕಲ್ ಬಳಿ ಅಂಬಟೆಡ್ಕ ನಿವಾಸಿ ಬಿ. ಸುಲೈಮಾನ್ - ಬಿ. ಫಾತಿಮಾ ದಂಪತಿಯ ಪುತ್ರಿ. 6 ತಿಂಗಳಲ್ಲೇ ಈಕೆಯ ಜನನವಾಗಿತ್ತು. ಪರಿಣಾಮ ಹುಟ್ಟು ಅಂಗವೈಕಲ್ಯ ಎದುರಾಯಿತು. ಸೊಂಟದಿಂದ ಕೆಳಗೆ ಅಷ್ಟು ಬಲವಿಲ್ಲದಂತಾಗಿ ನಡೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಯಿತು. ತಂದೆ ತಾಯಿ ಕಷ್ಟದಿಂದಲೇ ಸಫ್ವಾನಳನ್ನು ಬೆಳೆಸಿದರು. 

7ನೇ ತರಗತಿಯವರೆಗೆ ಈಕೆಗೆ ದೊರೆತದ್ದು ಮನೆ ಪಾಠ. ಕ್ಷೇತ್ರ ಸಂಪನ್ಮೂಲ ಕೇಂದ್ರದ ಗೃಹಾಧಾರಿತ ಶಿಕ್ಷಣ ಯೋಜನೆಯಲ್ಲಿ ಶಿಕ್ಷಕಿಯರು ಮನೆಗೆ ಬಂದು ಪಾಠ ಹೇಳಿ ಕೊಟ್ಟರು. ಶಿಕ್ಷಣ ನಿಲ್ಲಿಸಲು ಈಕೆಗೆ ಮನಸ್ಸಿರಲಿಲ್ಲ. ಪೋಷಕರಿಗೂ ಇರಲಿಲ್ಲ. ಹೀಗಾಗಿ ಅಂಗವೈಕಲ್ಯವಿದ್ದರೂ ಶಿಕ್ಷಣ ಮುಂದುವರಿಯಿತು.

ಪ್ರೌಢ ಶಿಕ್ಷಣಕ್ಕಾಗಿ ಸುಳ್ಯದ ಜೂನಿಯರ್ ಕಾಲೇಜಿಗೆ ದಾಖಲಾದಳು. ಶೇ. 55 ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪಾಸಾದ ಸಫ್ವಾನ ಅಲ್ಲಿಯೇ ಪಿಯುಸಿ ಶಿಕ್ಷಣವನ್ನು ಮುಂದುವರಿಸಿದಳು. ವಾಣಿಜ್ಯ ವಿಭಾಗ ಆರಿಸಿಕೊಂಡ ಆಕೆ ಶೇ.68 ಅಂಕಗಳೊಂದಿಗೆ ಉತ್ತೀರ್ಣಳಾದಳು. ಪದವಿ ಶಿಕ್ಷಣಕ್ಕಾಗಿ ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸೇರಿದಳು. ಇದೀಗ ಶೇ. 70 ಅಂಕಗಳೊಂದಿಗೆ ಈಕೆ ಬಿ.ಕಾಂ. ಮುಗಿಸಿ ಖುಷಿಯಲ್ಲಿದ್ದಾಳೆ.

ಇಷ್ಟು ಅಂಗವೈಕಲ್ಯವಿದ್ದರೂ, ನಡೆದಾಡಲು ಸಾಧ್ಯವಾಗದಿದ್ದರೂ ತರಗತಿಗಳಿಗೆ ಹೇಗೆ ಹೋಗುತ್ತಾಳೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಜೂನಿಯರ್ ಕಾಲೇಜಿಗೆ ಹೋಗುತ್ತಿರುವ ಸಂದರ್ಭ ಮನೆಯಿಂದ ರಿಕ್ಷಾದಲ್ಲಿ ಕಾಲೇಜಿನವರೆಗೆ ಹೋಗುವ ಈಕೆಯನ್ನು ಸಹಪಾಠಿಗಳು ರಿಕ್ಷಾದಿಂದ ಇಳಿಸುತ್ತಿದ್ದಳು. ಬಳಿಕ ವಾಕರ್ ಸಹಾಯದೊಂದಿಗೆ ತರಗತಿಗೆ ಹೋಗುತ್ತಿದ್ದಳು. ಪದವಿ ಸೇರಿದ ಬಳಿಕ ರಿಕ್ಷಾದಲ್ಲಿ ಕಾಲೇಜಿನವರೆಗೆ ಹೋಗಿ ಸಹಪಾಠಿಗಳ ಸಹಾಯದೊಂದಿಗೆ ವ್ಹೀಲ್ ಚೇರ್ ಮೂಲಕ ತರಗತಿಗೆ ಹೋಗಿ ಎಲ್ಲರಂತೆ ಬೆಂಚಿನಲ್ಲಿ ಕೂರುತ್ತಿದ್ದಳು. ಈಕೆಯ ಓಡಾಟಕ್ಕೆಂದೇ ರಿಕ್ಷಾವೊಂದನ್ನು ಗೊತ್ತು ಮಾಡಲಾಗಿತ್ತು.

ದೇಹಕ್ಕೆ ಅಂಗವೈಕಲ್ಯವಿದ್ದರೂ ಸಫ್ವಾನಳ ಮನಸ್ಸು ಮತ್ತು ಬುದ್ಧಿ ಶಕ್ತಿಗೆ ಶಹಬ್ಬಾಸ್ ಹೇಳಲೇಬೇಕು. ಕಲಿಕೆಗೆ ಈಕೆಗೆ ವಿಪರೀತ ಆಸಕ್ತಿ. ತರಗತಿಯಲ್ಲಿ ಉಪನ್ಯಾಸಕರು ಹೇಳಿದ ವಿಷಯ ಅರ್ಥವಾಗದಿದ್ದರೆ ಇತರ ಸಮಯದಲ್ಲಿ ಉಪನ್ಯಾಸಕರೊಂದಿಗೆ ಕೇಳಿ ತಿಳಿದುಕೊಳ್ಳುತ್ತಿದ್ದಳು. ಸಹಪಾಠಿಗಳೊಂದಿಗೆ ಚರ್ಚಿಸುತ್ತಿದ್ದಳು. ಪರೀಕ್ಷಾ ಸಂದರ್ಭದಲ್ಲಿ ಈಕೆಗೆ ವಿಶೇಷವಾಗಿ ಅರ್ಧತಾಸು ಹೆಚ್ಚಿನ ಅವಧಿ ನೀಡಲಾಗುತ್ತಿತ್ತು.

ಶಿಕ್ಷಣದ ಜೊತೆಗೆ ಪುಸ್ತಕ ಓದುವ, ಚಿತ್ರ ಬಿಡಿಸುವ, ಕವನ ಬರೆಯುವ ಹವ್ಯಾಸವೂ ಸಫ್ವಾನಳಿಗಿದೆ. ಆಟೋಟದಲ್ಲೂ ಆಸಕ್ತಿ ಇದೆ. ಆದರೆ ಮನಸ್ಸಿನ ಆಸಕ್ತಿಗೆ ದೇಹ ಸ್ಪಂದಿಸುವುದಿಲ್ಲ. ಕಾಲೇಜಿನಲ್ಲಿ ನಡೆಯುವ ಆಟೋಟಗಳ ಸಂದರ್ಭ ದೈಹಿಕ ಶಿಕ್ಷಕರು, ಸಹಪಾಠಿಗಳು ಆಕೆ ಅಲ್ಲಿರುವಂತೆ ನೋಡಿಕೊಳ್ಳುತ್ತಿದ್ದರು. ಪರೀಕ್ಷೆ ಪಾಸಾದ ಖುಷಿಯಲ್ಲಿ ಸಫ್ವಾನ ಉಪನ್ಯಾಸಕರಿಗೆ, ಆತ್ಮೀಯ ಗೆಳತಿಯರಿಗೆ ಮನೆಯಲ್ಲಿ ಔತಣ ಕೂಟವನ್ನೂ ಏರ್ಪಡಿಸಿದ್ದಳು.

ಸಫ್ವಾನಳಿಗೆ ತಿಂಗಳಿಗೆ 3000 ರೂಪಾಯಿ ಅಂಗವಿಕಲ ವೇತನ ಬರುತ್ತಿದ್ದು, ಈ ಹಣ ರಿಕ್ಷಾ ಬಾಡಿಗೆಗೇ ಖರ್ಚಾಗುತ್ತಿತ್ತು. ಮುಂದೆ ಸುಳ್ಯದಲ್ಲೇ ಎಂ.ಬಿ.ಎ. ಮಾಡಬೇಕೆಂಬ ಹಂಬಲವಿತ್ತು. ಆದರೆ ಪರಿಸ್ಥಿತಿಯ ಬೆಂಬಲವಿಲ್ಲ ! ಕೆ.ವಿ.ಜಿ. ವಿದ್ಯಾಸಂಸ್ಥೆಯಲ್ಲಿ ಎಂ.ಬಿ.ಎ.ಇರುವುದು ಮೂರನೇ ಮಹಡಿಯ ಮೇಲೆ. ಹೀಗಾಗಿ ಕರೆಸ್ಪಾಂಡೆಂಟ್ ಎಂ.ಎ. ಮಾಡಲು ನಿರ್ಧರಿಸಿದ್ದು, ಈ ಮಧ್ಯೆ ಉದ್ಯೋಗ ದೊರೆತರೆ ಹೋಗುವ ಆಸಕ್ತಿ ಇದೆ.

ಸಫ್ವಾನಳಿಗಾಗಿ ಮನೆಯವರು ಕಂಪ್ಯೂಟರ್ ಖರೀದಿಸಿದ್ದಾರೆ. ಹೋಗಿ ಕಲಿಯುವ ಕಷ್ಟವಾದ ಕಾರಣ ಶಿಕ್ಷಕಿ ಸಂಜೆ ಮನೆಗೇ ಬಂದು ಪಾಠ ಹೇಳಿಕೊಡುತ್ತಿದ್ದಾರೆ.
ಸಫ್ವಾನಳ ಅಕ್ಕನಿಗೆ ಮದುವೆಯಾಗಿ ಕಾಸರಗೋಡಿನಲ್ಲಿ ನೆಲೆಸಿದ್ದಾರೆ. ತಮ್ಮ ಸುಳ್ಯದಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾನೆ. 

ಅವಕಾಶಗಳು ಬಂದಾಗ ಕಷ್ಟವನ್ನು ಹುಡುಕುವ ಜನರ ಮಧ್ಯೆ ಕಷ್ಟದ ಮಧ್ಯೆಯೇ ಅವಕಾಶ ಹುಡುಕಿ ತನ್ನ ಮನೋಧೈರ್ಯದಿಂದ ಶಿಕ್ಷಣ ಪಡೆದಿರುವ ಸಫ್ವಾನಾಳ ಸಾಧನೆ ಇತರರಿಗೆ ಮಾದರಿಯೇ ಸರಿ. ಕಂಗ್ರಾಟ್ಸ್ ಸಫ್ವಾನ, ಗುಡ್‌ಲಕ್!

share
ದುರ್ಗಾಕುಮಾರ್ ನಾಯರ್ಕೆರೆ
ದುರ್ಗಾಕುಮಾರ್ ನಾಯರ್ಕೆರೆ
Next Story
X