Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸೋನಿಯಾ, ಅಹ್ಮದ್ ಪಟೇಲ್ ಅವರನ್ನು...

ಸೋನಿಯಾ, ಅಹ್ಮದ್ ಪಟೇಲ್ ಅವರನ್ನು ಸಿಲುಕಿಸಲು ಒತ್ತಾಯಿಸಲಾಗಿತ್ತು: ಮಧ್ಯವರ್ತಿ ಮೈಕಲ್

ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣ

ವಾರ್ತಾಭಾರತಿವಾರ್ತಾಭಾರತಿ1 Aug 2018 8:06 PM IST
share
ಸೋನಿಯಾ, ಅಹ್ಮದ್ ಪಟೇಲ್ ಅವರನ್ನು ಸಿಲುಕಿಸಲು ಒತ್ತಾಯಿಸಲಾಗಿತ್ತು: ಮಧ್ಯವರ್ತಿ ಮೈಕಲ್

ಹೊಸದಿಲ್ಲಿ, ಆ. 1: 3,600 ಕೋಟಿ ರೂ. ಮೊತ್ತ ಅಗಸ್ಟಾ ವೆಸ್ಟ್  ಲ್ಯಾಂಡ್ ಹಗರಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸಿದರೆ, ತನಗೆ ಕ್ಲೀನ್ ಚಿಟ್ ನೀಡುವ ಭರವಸೆಯನ್ನು ಭಾರತೀಯ ತನಿಖೆಗಾರರು ನೀಡಿದ್ದರು ಎಂದು ಅಗಸ್ಟಾ ವೆಸ್ಟ್  ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಹಾಗೂ ಬ್ರಿಟಿಶ್ ಶಸ್ತ್ರಾಸ್ತ್ರ ವ್ಯಾಪಾರಿ ಕ್ರಿಶ್ಚಿಯನ್ ಮೈಕಲ್ ಹೇಳಿದ್ದಾರೆ. ದುಬೈಯಲ್ಲಿ ಜಾಮೀನು ದೊರಕಿದ ಒಂದು ದಿನದ ಬಳಿಕ ಕ್ರಿಶ್ಚಿಯನ್ ಮೈಕಲ್ ಈ ಹೇಳಿಕೆ ನೀಡಿದ್ದಾರೆ. ಕಳೆದ 49 ದಿನಗಳ ಕಾಲ ಬಂಧನದಲ್ಲಿದ್ದ ಮೈಕಲ್ ಅವರ ಪ್ರಕರಣದ ವಿಚಾರಣೆಯನ್ನು ದುಬೈ ನ್ಯಾಯಾಲಯ ಸೋಮವಾರ ನಡೆಸಿತು ಹಾಗೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತು.

  ಬ್ರಿಟಿಶ್ ಪ್ರಜೆ ಆಗಿರುವ ಮೈಕಲ್ ಅಗಸ್ಟಾ ವೆಸ್ಟ್  ಲ್ಯಾಂಡ್‌ನ 60 ದಶಲಕ್ಷ ಯುರೋ ಲಂಚವನ್ನು ನಿರ್ವಹಿಸಿದ್ದಾನೆ ಹಾಗೂ ರವಾನಿಸಿದ್ದಾನೆ ಎಂದು ಶಂಕಿಸಲಾಗಿದೆ. 1997 ಹಾಗೂ 2013ರ ನಡುವೆ ಅವರು 300 ಭಾರಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ತನಿಖೆಗಾರರು ಹೇಳಿದ್ದಾರೆ. ಅವರು ಲಂಚವನ್ನು ಇರಿಸಲು ಹಾಗೂ ವರ್ಗಾಯಿಸಲು ದುಬೈ ಮೂಲದ ಸಂಸ್ಥೆ ಗ್ಲೋಬಲ್ ಸರ್ವೀಸ್ ಎಫ್‌ಝಡ್‌ಇಯನ್ನು ಬಳಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಕಡತಗಳು ಹೇಳುತ್ತವೆ. ಆದರೆ, ತಾನು ಯಾವುದೇ ಅಪರಾಧ ಎಸಗಿಲ್ಲ ಎಂದು ಮೈಕಲ್ ಹೇಳಿದ್ದಾರೆ. ಅಗಸ್ಟಾ ವೆಸ್ಟ್  ಲ್ಯಾಂಡ್ ಹಗರಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂಬ ತನ್ನ ಆರೋಪ ಸಾಬೀತುಪಡಿಸಲು ಹೋಟೆಲ್‌ನ ಭದ್ರತಾ ದೃಶ್ಯಾವಳಿ, ಕನಿಷ್ಠ 6 ಸಾಕ್ಷಿಗಳನ್ನು ಹಾಜರುಪಡಿಸುವುದಾಗಿ ಮೈಕಲ್ ಬುಧವಾರ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

 “ಮೇಯಲ್ಲಿ ನನ್ನನ್ನು ಭೇಟಿಯಾಗಲು ನಿಯೋಗವೊಂದು ಬಂದಿತ್ತು. ನಾನು ಭೇಟಿಯಾಗಲು ಒಪ್ಪಿಕೊಂಡೆ. ಗ್ರಾಂಡ್ ಹಯಾತ್ ಹೊಟೇಲ್ ಒಂದು ಹಾಗೂ ದುಬೈಯ ಪ್ಯಾಲೇಸ್ ಹೊಟೇಲ್‌ನಲ್ಲಿ ಎರಡು ಸಬೆ ನಡೆಯಿತು. ಸುಮಾರು 20 ಪುಟಗಳಿದ್ದ ದಾಖಲೆಯನ್ನು ಅವರು ನನಗೆ ನೀಡಿದರು ಹಾಗೂ ಅದಕ್ಕೆ ಸಹಿ ಹಾಕುವಂತೆ ಹೇಳಿದರು” ಎಂದು ಅವರು ಪ್ರತಿಪಾದಿಸಿದ್ದಾರೆ. “ಆ ದಾಖಲೆಯ ಎರಡು ಮೂರು ಪುಟಗಳನ್ನು ಓದಿದ ಬಳಿಕ ಇದು ಸರಿ ಇಲ್ಲ. ಆದುದರಿಂದ ತಾನು ಸಹಿ ಹಾಕಲಾರೆ ಎಂದು ಹೇಳಿದ್ದೆ. ಅದರಲ್ಲಿ ಸಂಭವಿಸದೇ ಇರುವ ವಿಷಯವನ್ನು ಹೇಳಲಾಗಿತ್ತು” ಎಂದು ಮೈಕಲ್ ಹೇಳಿದ್ದಾರೆ. “ಕೊನೆಯ ಸಭೆ ರಾತ್ರಿ 11 ಗಂಟೆಗೆ ನಡೆಯಿತು. ನಾವು ಎಲ್ಲ ಕಡತಗಳನ್ನು ನೋಡಿದೆವು. ಅದರಲ್ಲಿ ಏನೂ ಇರಲಿಲ್ಲ. ಅನಂತರ ಅವರು ನಾನು ಬರೆಯದ, ನಾನು ಹೇಳದ ಬಜೆಟ್ ಹಾಳೆಯೊಂದನ್ನು ತೆಗೆದರು. ಅದನ್ನು ಬರೆಯುವಾಗ ನಾನು ಅಲ್ಲಿ ಇರಲಿಲ್ಲ. ಹಾಳೆಯ ಕೊನೆಯಲ್ಲಿ ಸೋನಿಯಾ ಗಾಂಧಿ, ಅವರ ಕುಟುಂಬದವರು ಹಾಗೂ ಅಹ್ಮದ್ ಪಟೇಲ್ ಅವರ ಹೆಸರನ್ನು ಉಲ್ಲೇಖಿಸಲು ಅವರು ಬಯಸಿದ್ದರು. ಇದಕ್ಕೆ ಒಪ್ಪಿದರೆ ತನಗೆ ಕ್ಲೀನ್ ಚಿಟ್ ನೀಡಲಾಗುವುದು ಎಂದು ಅವರು ಹೇಳಿದ್ದರು” ಎಂದು ಮೈಕಲ್ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X