Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೂಲಿ ಕಾರ್ಮಿಕನ ಕುಟುಂಬವನ್ನು...

ಕೂಲಿ ಕಾರ್ಮಿಕನ ಕುಟುಂಬವನ್ನು ಗೃಹಬಂಧನದಲ್ಲಿಟ್ಟು ಹಿಂಸೆ: ಆರೋಪ

ನ್ಯಾಯಕ್ಕಾಗಿ ಮೂಡಿಗೆರೆ ಪೊಲೀಸರ ಮೊರೆ

ವಾರ್ತಾಭಾರತಿವಾರ್ತಾಭಾರತಿ2 Aug 2018 11:26 PM IST
share
ಕೂಲಿ ಕಾರ್ಮಿಕನ ಕುಟುಂಬವನ್ನು ಗೃಹಬಂಧನದಲ್ಲಿಟ್ಟು ಹಿಂಸೆ: ಆರೋಪ

ಮೂಡಿಗೆರೆ, ಆ.2: ಕಾಫಿ ತೋಟದ ಮಾಲಿಕನೋರ್ವ ಕೂಲಿ ಕಾರ್ಮಿಕ ಮತ್ತು ಆತನ ಹೆಂಡತಿ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಲ್ಲೇ ಗೃಹ ಬಂಧನದಲ್ಲಿರಿಸಿದ್ದಾರೆನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಡಿಗೆರೆ ತತ್ಕೊಳ ವಾಸಿಯಾದ ಗೋಪಾಲ ಎಂಬ ಕಾರ್ಮಿಕ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರಿನ ಜೇನುಗದ್ದೆಯ ಮೀನುಪಾಲ್ ಎಂಬಲ್ಲಿರುವ ಕಾಫಿ ಎಸ್ಟೇಟಿಗೆ ಕಳೆದ 1 ವರ್ಷದಿಂದ ಕಾರ್ಮಿಕರನ್ನು ಪೂರೈಸುವ ಕೆಲಸ ಮಾಡುತ್ತಿದ್ದು, ಈತ ಕಾರ್ಮಿಕನನ್ನು ಪೂರೈಸುವ ಮತ್ತೋರ್ವ ವ್ಯಕ್ತಿಯನ್ನು ಎಸ್ಟೇಟ್ ಮಾಲಕ ಪೀಟರ್ ಎಂಬವರಿಗೆ ಪರಿಚಯಿಸಿದ್ದ. ಆತ ಕಾಫಿ ಎಸ್ಟೇಟಿನ ಮಾಲಕ ಪೀಟರ್ ಅವರಿಂದ ಲಕ್ಷಂತರ ರೂ. ಹಣ ಪಡೆದು ನಾಪತ್ತೆಯಾಗಿದ್ದರಿಂದ, ಎಸ್ಟೇಟಿನ ಮಾಲಕ ಗೋಪಾಲನಿಗೆ ನೀನು ಕರೆದುಕೊಂಡು ಬಂದ ವ್ಯಕ್ತಿ ಹಣ ಪಡೆದು ಪರಾರಿಯಾಗಿದ್ದಾನೆ. ಅವನ ಬಾಕಿ ಹಣವನ್ನು ನೀನು ನಿನ್ನ ಹೆಂಡತಿ ಮಕ್ಕಳೊಂದಿಗೆ ದುಡಿದು ತೀರಿಸುವಂತೆ ಬೆದರಿಸಿದ್ದರು. ಇದಕ್ಕೆ ಗೋಪಾಲ ನನಗೂ ಆ ಹಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾನೆಂದು ತಿಳಿದು ಬಂದಿದೆ. . 

2018 ರ ಜುಲೈ 16 ರಂದು ಮಾಲಕ ಪೀಟರ್ ಬಾಳೆಹೊನ್ನೂರಿನ ಪೊಲೀಸ್ ರೊಂದಿಗೆ ಮನೆಗೆ ಆಗಮಿಸಿ, ತನ್ನನ್ನು ಮತ್ತು ಹೆಂಡತಿ ಇಂದ್ರಳನ್ನು ಬಲವಂತವಾಗಿ ಬಾಳೆಹೊನ್ನೂರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದು, ರಾತ್ರಿಯಿಡಿ ನಿರಂತರ ಹಲ್ಲೆ ನಡೆಸಿದ ಪೊಲೀಸರು ಕುಡಿಯಲು ಅನ್ನ ನೀರು ಕೊಡದೆ ಅಮಾನವಿಯ ರೀತಿಯಲ್ಲಿ ವರ್ತಿಸಿದ್ದಾರೆಂದು ಗೋಪಾಲ ಆರೋಪಿಸಿದ್ದಾನೆ.

ಮಾಲಕರಿಗೆ ಹಣ ಕೊಡದೆ ಇದ್ದರೆ ನೀವು ಸಾಯುವ ವರೆಗೂ ಅಲ್ಲೆ ಇರಬೇಕಾಗುತ್ತದೆ ಎಂದು ಬೆದರಿಕೆಯನ್ನು ಹಾಕಿ ಕೋಲು ಮತ್ತು ಬೂಟಿನಿಂದ ಬಾಳೆಹೊನ್ನೂರು ಪೊಲೀಸರು ಮನ ಬಂದಂತೆ ಥಳಿಸಿದ್ದಾರೆ. ಮರುದಿನ ಜುಲೈ 17 ರಂದು ಸಂಜೆ ಎಸ್ಟೇಟಿಗೆ ಕರೆದುಕೊಂಡು ಹೋಗಿ ಎಸ್ಟೇಟಿನ ರೂಮಿನಲ್ಲಿ ತನ್ನನ್ನು ಮತ್ತು ಪತ್ನಿ ಇಂದ್ರರನ್ನು ಗೃಹ ಬಂಧನದಲ್ಲಿರಿಸಿದ್ದರು. ನಂತರ ರಾತ್ರಿ ಎಸ್ಟೇಟಿನ ರೂಮಿಗೆ ಬಂದ ಮಾಲಕ ಪೀಟರ್ ಮತ್ತು ಆತನ ಸ್ನೇಹಿತ ಸೇರಿಕೊಂಡು ತಮ್ಮನ್ನು ಮನ ಬಂದಂತೆ ತಳಿಸಿದ್ದಾರೆಂದು ಗೋಪಾಲ ಆರೋಪಿಸಿದ್ದಾರೆ.

ಮಾರನೆ ದಿನ ತನ್ನನ್ನು ಮಾಲಕ ಪೀಟರ್ ತನ್ನ ವಾಹನದಲ್ಲಿ ಮಂಗಳೂರಿಗೆ ಕರೆದುಕೊಂಡು ಹೋಗಿ ಹಾಸ್ಟೆಲ್‍ನಲ್ಲಿ ಓದುತ್ತಿದ್ದತನ್ನ ಎರಡು ಹೆಣ್ಣು ಮಕ್ಕಳನ್ನು ಕರೆದು ಕೊಂಡು ಬಂದು ಎಸ್ಟೇಟಿನ ರೂಮಿನಲ್ಲಿ ಒಟ್ಟಿಗೆ ಕೂಡಿ ಹಾಕಿ ಚಿತ್ರ ಹಿಂಸೆ ನೀಡಿದ್ದಾರೆ. ಅನ್ನಾಹಾರವನೂ ನೀಡದೇ ಜೀವನ ಪರ್ಯಂತ ದುಡಿದು ಕೊಂಡಿರುವಂತೆ ಬೆದರಿಕೆ ಹಾಕಿ, ತಪ್ಪಿಸಿಕೊಳ್ಳಲಾಗದಂತೆ ಪಹರೆಯನ್ನು ಹಾಕಿದ್ದರು ಎಂದು ಗೋಪಾಲ ಆರೋಪಿಸಿದ್ದಾರೆ.

ಜು.31 ರ ರಾತ್ರಿ ಗೃಹ ಬಂಧನದಿಂದ ತಪ್ಪಿಸಿಕೊಂಡು ಬಂದ ಕಾರ್ಮಿಕ ಗೋಪಾಲ, ಪೀಟರ್ ಬಳಿ ಗೃಹ ಬಂಧನದಲ್ಲಿದ್ದುಕೊಂಡು ದುಡಿಯುತ್ತಿರುವ ತನ್ನ ಮಕ್ಕಳು ಹಾಗೂ ಪತ್ನಿಯನ್ನು ಅಲ್ಲಿಂದ ಪಾರು ಮಾಡಬೇಕು. ನನ್ನ ಮತ್ತು ನನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿ, ಎಸ್ಟೇಟ್‍ನಲ್ಲಿ ಕೂಡಿ ಹಾಕಿರುವ ಪೀಟರ್ ಮತ್ತವನ ಸ್ನೇಹಿತ ಹಾಗೂ ಬಾಳೆಹೊನ್ನುರಿನ ಪಿಎಸೈ ಮೇಲೆ ಕ್ರಮ ಜರುಗಿಸಿ ತಮಗೆ ನ್ಯಾಯ ಕೊಡಿಸಬೇಕೆಂದು ಜಿಲ್ಲಾ ರಕ್ಷಾಣಧಿಕಾರಿಗಳಿಗೆ ಮತ್ತು ಮಾನವ ಹಕ್ಕು ಆಯೋಗ ಹಾಗೂ ಮಹಿಳಾ ಮತ್ತು ಮಕ್ಕಳ ಆಯೋಗಕ್ಕೆ ದೂರು ನೀಡಿ ತಮಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X