ವೃದ್ಧನ ಥಳಿಸಿ ಹತ್ಯೆ ನಾಲ್ವರು ಪೊಲೀಸರ ವಿರುದ್ಧ ಪ್ರಕರಣ ದಾಖಲು
ಬಡೌನ್ (ಉತ್ತರಪ್ರದೇಶ), ಆ. 9: ಬಿಸೌಲಿ ಪ್ರದೇಶದ ಸಂಗ್ರಾಮ್ಪುರ ಗ್ರಾಮದಲ್ಲಿ ವೃದ್ಧನೋರ್ವನನ್ನು ಥಳಿಸಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ ಅಕ್ಬರ್ ಎಂಬವರನ್ನು ಬಂಧಿಸಲು ಅವರ ಮನೆಗೆ ನಿನ್ನೆ ತೆರಳಿದ ಸಂದರ್ಭ ಸಬ್ ಇನ್ಸ್ಪೆಕ್ಟರ್ ಸುನೀಲ್ ಕುಮಾರ್ ಹಾಗೂ ಅಜಿತ್ ಕುಮಾರ್, ಕಾನ್ಸ್ಟೆಬಲ್ ಸುರೇಶ್ ಹಾಗೂ ಹೋಂ ಗಾರ್ಡ್ ಅಕ್ಬರ್ ಅವರ ತಂದೆ ಮಸ್ಖುರ್ ನಬಿಗೆ ಥಳಿಸಿದ್ದರು ಎಂದು ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಶರ್ಮಾ ಹೇಳಿದ್ದಾರೆ. ನಾಲ್ವರ ವಿರುದ್ಧ 304 ಐಪಿಸಿ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾವಿಗೆ ಹೃದಯಾಘಾತ ಕಾರಣ ಎಂದು ಮರಣೋತ್ತರ ವರದಿ ಹೇಳಿದೆ. ಘಟನೆಯ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
Next Story