Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ‘ಎಬಿಪಿ’ ಪತ್ರಕರ್ತರು ಚಾನೆಲ್ ತೊರೆಯುವ...

‘ಎಬಿಪಿ’ ಪತ್ರಕರ್ತರು ಚಾನೆಲ್ ತೊರೆಯುವ ಮುನ್ನ ಜಾಹೀರಾತು ಹಿಂಪಡೆದಿದ್ದ ಪತಂಜಲಿ!

ಮೋದಿಯನ್ನು ಟೀಕಿಸಿದ್ದಕ್ಕಾಗಿ ಹೇರಿದ ಒತ್ತಡವೇ?

ವಾರ್ತಾಭಾರತಿವಾರ್ತಾಭಾರತಿ10 Aug 2018 10:26 PM IST
share
‘ಎಬಿಪಿ’ ಪತ್ರಕರ್ತರು ಚಾನೆಲ್ ತೊರೆಯುವ ಮುನ್ನ ಜಾಹೀರಾತು ಹಿಂಪಡೆದಿದ್ದ ಪತಂಜಲಿ!

ಹೊಸದಿಲ್ಲಿ, ಆ.10: ಈ ತಿಂಗಳ ಆರಂಭದಲ್ಲಿ ‘ಎಬಿಪಿ ನ್ಯೂಸ್’ ಹಿಂದಿ ವಾಹಿನಿಯಿಂದ ಪ್ರತಿಷ್ಠಿತ ಪತ್ರಕರ್ತರ ನಿರ್ಗಮನಕ್ಕೆ ನರೇಂದ್ರ ಮೋದಿ ಸರಕಾರವನ್ನು ತುಷ್ಟೀಕರಿಸುವ ಆಡಳಿತ ವರ್ಗದ ಬಯಕೆ ಕಾರಣವಾಗಿರಬಹುದು, ಆದರೆ ಸ್ವಘೋಷಿತ ಯೋಗಗುರು ಮತ್ತು ಉದ್ಯಮಿ ಬಾಬಾ ರಾಮದೇವ್ ಅವರು ತನ್ನ ಪತಂಜಲಿ ಕಂಪನಿಯ ಜಾಹೀರಾತುಗಳನ್ನು ದಿಢೀರ್ ಹಿಂದೆಗೆದುಕೊಳ್ಳುವ ಮೂಲಕ ವಾಹಿನಿಯ ಮೇಲೆ ಒತ್ತಡ ಹೇರಿದ್ದಿರಬಹುದು ಎಂದು ಆಂಗ್ಲ ಸುದ್ದಿವಾಹಿನಿಯು ವರದಿ ಮಾಡಿದೆ.

ಪತಂಜಲಿ ಕಂಪನಿಯು ಜುಲೈ 15ರ ಸುಮಾರಿಗೆ ಎಬಿಪಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ತನ್ನ ಜಾಹೀರಾತುಗಳನ್ನು ದಿಢೀರನೆ ಹಿಂದೆಗೆದುಕೊಂಡಿತ್ತು ಎನ್ನುವುದನ್ನು ಈ ವ್ಯವಹಾರವನ್ನು ನೇರವಾಗಿ ಅರಿತಿರುವ ವ್ಯಕ್ತಿಯೋರ್ವರನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.

ಎಬಿಪಿ ವಾಹಿನಿಯ ಸಂಪಾದಕರಲ್ಲೋರ್ವರಾಗಿದ್ದ ಪುಣ್ಯ ಪ್ರಸೂನ್ ಬಾಜಪೈ ಅವರು, ತಾನು ಈ ಹಿಂದೆ ಮೋದಿ ಸರಕಾರದ ವಿರುದ್ಧ ಮಾಡಿದ್ದ ಆರೋಪವನ್ನು ಪುನರಾವರ್ತಿಸಿ ತನ್ನ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮವನ್ನು ಪ್ರಸಾರ ಮಾಡಿದ ಮರುದಿನವೇ ಪತಂಜಲಿ ತನ್ನ ಜಾಹೀರಾತುಗಳನ್ನು ಹಿಂದಕ್ಕೆ ತೆಗೆದುಕೊಂಡಿತ್ತು. ಪ್ರಧಾನಿಯವರ ಯೋಜನೆಯೊಂದರ ಫಲಾನುಭವಿ ಮಹಿಳೆಯೋರ್ವಳು ಸಂದರ್ಶನದಲ್ಲಿ ತನ್ನ ಆದಾಯವು ದ್ವಿಗುಣಗೊಂಡಿದೆ ಎಂದು ಹೇಳಿಕೊಂಡಿದ್ದಳು. ಈ ಮಹಿಳೆಗೆ ಹೀಗೆಯೇ ಹೇಳುವಂತೆ ಮೊದಲೇ ತರಬೇತಿ ನೀಡಿದ್ದು, ಮೋದಿ ಸರಕಾರವು ಜನತೆಯನ್ನು ದಾರಿ ತಪ್ಪಿಸುತ್ತಿದೆ ಎಂದು ಬಾಜಪೈ ಆರೋಪಿಸಿದ್ದರು. ಕಾರ್ಯಕ್ರಮದಲ್ಲಿ ಮೋದಿಯವರ ಹೆಸರನ್ನು ಪ್ರಸ್ತಾಪಿಸುವಂತಿಲ್ಲ ಮತ್ತು ಅವರ ಚಿತ್ರವನ್ನೂ ತೋರಿಸುವಂತಿಲ್ಲ ಎಂದು ಆಡಳಿತ ವರ್ಗ ತಾಕೀತು ಮಾಡಿದ ನಂತರ ಬಾಜಪೈ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಹೊರಕ್ಕೆ ನಡೆದಿದ್ದರು ಎನ್ನಲಾಗಿದೆ.

‘ಎಬಿಪಿ’ ವಾಹಿನಿಯಿಂದ ಜಾಹೀರಾತುಗಳನ್ನು ಹಿಂದೆಗೆದುಕೊಂಡಿರುವುದನ್ನು ಖಚಿತಪಡಿಸಿರುವ ಪತಂಜಲಿಯ ವಕ್ತಾರ ಎಸ್.ಕೆ ತಿಜಾರಾವಾಲಾ ಅವರು, ಆದರೆ ವಾಹಿನಿಯು ಮೋದಿ ಸರಕಾರವನ್ನು ಟೀಕಿಸಿ ಪ್ರಸಾರ ಮಾಡಿದ್ದ ಕಾರ್ಯಕ್ರಮಗಳಿಗೂ ಇದಕ್ಕೂ ಏನೂ ಸಂಬಂಧವಿಲ್ಲ. ವಾಸ್ತವದಲ್ಲ್ಲಿ ಕಂಪನಿಯ ಜಾಹೀರಾತು ಗುತ್ತಿಗೆಯು ಜೂನ್ 30ಕ್ಕೇ ಅಂತ್ಯಗೊಂಡಿತ್ತು ಮತ್ತು ವಾಹಿನಿಯು ಜಾಹೀರಾತುಗಳನ್ನು ತೋರಿಸಲೇಬಾರದಿತ್ತು. ಆದರೆ ತಪ್ಪಿನಿಂದಾಗಿ ಜಾಹೀರಾತು ಜು.15ರವರೆಗೂ ಮುಂದುವರಿದಿತ್ತು. ಇದು ಗಮನಕ್ಕೆ ಬಂದಾಗ ಕಂಪನಿಯು ‘ಎಬಿಪಿ ನ್ಯೂಸ್’, ‘ಎಬಿಪಿ ಆನಂದ’ ಮತ್ತು ‘ಎಬಿಪಿ ಮಜಾ’ ವಾಹಿನಿಗಳಿಂದ ಜಾಹೀರಾತುಗಳನ್ನು ಹಿಂದೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ ಎಂದು ಆಂಗ್ಲ ಸುದ್ದಿವಾಹಿನಿಯು ವರದಿ ಮಾಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X