Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಜನಾಂಗೀಯವಾಗಿ ನಿಂದಿಸುವ ಟ್ರಂಪ್:...

ಜನಾಂಗೀಯವಾಗಿ ನಿಂದಿಸುವ ಟ್ರಂಪ್: ಶ್ವೇತಭವನದ ಮಾಜಿ ಉದ್ಯೋಗಿಯ ಆರೋಪ

ವಾರ್ತಾಭಾರತಿವಾರ್ತಾಭಾರತಿ11 Aug 2018 10:01 PM IST
share
ಜನಾಂಗೀಯವಾಗಿ ನಿಂದಿಸುವ ಟ್ರಂಪ್: ಶ್ವೇತಭವನದ ಮಾಜಿ ಉದ್ಯೋಗಿಯ ಆರೋಪ

ವಾಶಿಂಗ್ಟನ್, ಆ. 11: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಭಾಷೆಯನ್ನು ಬಳಸಿದ ಹಲವಾರು ಉದಾಹರಣೆಗಳಿವೆ ಎಂದು ಶ್ವೇತಭವನದ ಮಾಜಿ ಮಹಿಳಾ ಉದ್ಯೋಗಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ತನ್ನ ಹೊಸ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.

ಪತ್ನಿ ಹಾಗೂ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್‌ರಿಲ್ಲದೆ ಭಾಗವಹಿಸಿದ ಹಲವಾರು ಕಾರ್ಯಕ್ರಮಗಳಲ್ಲಿ ಟ್ರಂಪ್ ‘ಸಂಕಲೆಯಿಂದ ತಪ್ಪಿಸಿಕೊಂಡ ನಾಯಿ’ಯಂತೆ ವರ್ತಿಸಿರುವುದನ್ನು ತಾನು ನೋಡಿದ್ದೇನೆ ಎಂಬುದಾಗಿಯೂ ಅವರು ಹೇಳಿದ್ದಾರೆ.

 ತನ್ನ ನೂತನ ಪುಸ್ತಕ ‘ಅನ್‌ಹಿಂಜ್ಡ್’ನಲ್ಲಿ ಅವರು ಇನ್ನೂ ಹಲವಾರು ವಿವಾದಾತ್ಮಕ ವಿಷಯಗಳನ್ನು ಹೇಳಿದ್ದಾರೆ. ಪುಸ್ತಕವು ಆಗಸ್ಟ್ 14ರಂದು ಬಿಡುಗಡೆಯಾಗಲಿದೆ.

ಅದೇ ವೇಳೆ, ಇದು ಸುಳ್ಳುಗಳು ಮತ್ತು ಸುಳ್ಳು ಆರೋಪಗಳನ್ನು ಹೊಂದಿದ ಪುಸ್ತಕವಾಗಿದೆ ಎಂಬುದಾಗಿ ಪುಸ್ತಕದ ಬಗ್ಗೆ ಶ್ವೇತಭವನ ಕಿಡಿಕಾರಿದೆ.

ಪುಸ್ತಕದ ಲೇಖಕಿಯು ಟ್ರಂಪ್‌ರ ‘ದ ಅಪ್ರೆಂಟಿಸ್’ ರಿಯಾಲಿಟಿ ಶೋನಲ್ಲಿ ಓರ್ವ ಸ್ಪರ್ಧಿಯಾಗಿದ್ದರು ಹಾಗೂ ಬಳಿಕ ಅವರು ಅಧ್ಯಕ್ಷರ ಹಿರಿಯ ಸಲಹಾಗಾರ್ತಿಯಾಗಿ ಸೇವೆ ಸಲ್ಲಿಸಿದ್ದರು.

  ಅವರು ತನ್ನ ಪುಸ್ತಕದಲ್ಲಿ ಅಧ್ಯಕ್ಷರನ್ನು ಏಕಾಗ್ರತೆಯಿಲ್ಲದ, ತನ್ನ ಬಗ್ಗೆಯೇ ಚಿಂತಿಸುವ, ಮಹಿಳೆಯರನ್ನು ದ್ವೇಷಿಸುವ ಹಾಗೂ ಅಭದ್ರತೆಯ ಭಾವನೆ ಹೊಂದಿರುವ ವ್ಯಕ್ತಿ ಎಂಬುದಾಗಿ ಚಿತ್ರಿಸಿದ್ದಾರೆ ಹಾಗೂ ಸರಣಿ ಆರೋಪಗಳನ್ನು ಹೊರಿಸಿದ್ದಾರೆ.

ಟ್ರಂಪ್ ಅಸಹಿಷ್ಣು

‘‘ಟ್ರಂಪ್‌ರನ್ನು ವರ್ಷಗಳಿಂದ ಸಮರ್ಥಿಸಿಕೊಂಡ ಬಳಿಕ, ಅವರೊಬ್ಬ ಅಸಹಿಷ್ಣು ಎಂಬ ನಿರ್ಧಾರಕ್ಕೆ ನಾನು ಬರಬೇಕಾಯಿತು’’ ಎಂದು ಅವರು ಹೇಳಿದ್ದಾರೆ.

‘‘ಆರಂಭದಲ್ಲಿ ಟ್ರಂಪ್ ಓರ್ವ ಅಸಹಿಷ್ಣು ಎಂಬುದಾಗಿ ಜನರು ಹೇಳಿದಾಗ ನಾನು ನಂಬಿರಲಿಲ್ಲ. ಅವರ ಬಗ್ಗೆ ಜನರು ಹೇಳುತ್ತಿರುವುದನ್ನು ನಾನು ತಿರಸ್ಕರಿಸಿದೆ. ಯಾಕೆಂದರೆ ಟ್ರಂಪ್ ಬಗ್ಗೆ ನನಗೆ ಗೊತ್ತಿರುವಷ್ಟು ಅವರಿಗೆ ಗೊತ್ತಿಲ್ಲ ಎಂದು ನಾನು ಭಾವಿಸಿದೆ. ಆದರೆ, ಬಳಿಕ ಅವರ ಜನಾಂಗೀಯ ನಿಂದನೆಯ ಸ್ವಭಾವವನ್ನು ನನ್ನ ಕಣ್ಣಾರೆ ನೋಡುವ ಹಾಗೂ ನಿಂದನೆಯ ಮಾತುಗಳನ್ನು ಕಿವಿಯಾರೆ ಕೇಳುವ ಸಂದರ್ಭಗಳು ಬಂದವು. ಇಂಥ ಎಷ್ಟು ಘಟನೆಗಳಿಗೆ ನಾನು ಸಾಕ್ಷಿಯಾದೆ ಎಂದರೆ ಅವರೊಬ್ಬ ಅಸಹಿಷ್ಣು ಎನ್ನುವುದನ್ನು ನಾನಿನ್ನು ನಿರಾಕರಿಸಲಾರೆ’’ ಎಂದು ಲೇಖಕಿ ನ್ಯೂಮನ್ ಹೇಳಿದ್ದಾರೆ.

ಮಾತನಾಡದಂತೆ ತಡೆಯಲು ಯತ್ನಿಸಿದ್ದರು

ಡೊನಾಲ್ಡ್ ಟ್ರಂಪ್ ಜನಾಂಗೀಯ ನಿಂದನೆಯ ಮಾತುಗಳನ್ನು ಆಡುತ್ತಾರೆ ಎನ್ನುವುದನ್ನು ಯಾರಿಗೂ ಹೇಳಬಾರದು ಎಂಬ ನಿಟ್ಟಿನಲ್ಲಿ ಅಧ್ಯಕ್ಷರ ಜನರು ತನಗೆ ಆಮಿಷ ಒಡ್ಡಿದ್ದರು ಎಂಬುದಾಗಿ ಲೇಖಕಿ ಒಮರೊಸಾ ಮ್ಯಾನಿಗಾಲ್ಟ್ ನ್ಯೂಮನ್ ಆರೋಪಿಸಿದ್ದಾರೆ.

ಶ್ವೇತಭವನದಿಂದ ತಾನು ಹೊರ ಬರುವಾಗ, ಟ್ರಂಪ್‌ರ 2020ರ ಚುನಾವಣಾ ಪ್ರಚಾರ ತಂಡದಲ್ಲಿ ‘ಹಿರಿಯ ಹುದ್ದೆ’ಯೊಂದನ್ನು ನೀಡಿ ತಿಂಗಳಿಗೆ 15,000 ಡಾಲರ್ (ಸುಮಾರು 10.36 ಲಕ್ಷ ರೂಪಾಯಿ) ವೇತನ ನೀಡುವ ಪ್ರಸ್ತಾಪವನ್ನು ಮುಂದಿಡಲಾಯಿತು ಎಂದು ಅವರು ಹೇಳಿದ್ದಾರೆ.

ಆದರೆ, ಅದರ ಜೊತೆಗೆ ಮಾಹಿತಿ ಬಹಿರಂಗಪಡಿಸದಿರುವ ಕಠಿಣ ಒಪ್ಪಂದವೊಂದಕ್ಕೆ ತಾನು ಸಹಿಹಾಕಬೇಕಾಗಿತ್ತು ಹಾಗೂ ಅದು ತಾನು ಟೆಲಿವಿಶನ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನೋಡಿದ್ದ ಒಪ್ಪಂದದಷ್ಟೇ ಕಠಿಣ ಹಾಗೂ ನಿರ್ಬಂಧಕಾರಿಯಾಗಿತ್ತು ಎಂದಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X