ಹಾಸನ: ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿ ಕಲ್ಲಹಳ್ಳಿ ಹರೀಶ್ ಆಯ್ಕೆ
ಹಾಸನ,ಆ.12: ಕನ್ನಡ ಪರ ಕಾಳಜಿ, ಅಭಿಮಾನ, ಸಾಹಿತ್ಯ, ಸೇವೆ ಮತ್ತು ಸಂಘಟನೆಯನ್ನು ಪರಿಗಣಿಸಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿಯಾಗಿ ಕಲ್ಲಹಳ್ಳಿ ಹರೀಶ್ ರನ್ನು ನೇಮಕ ಮಾಡಲಾಗಿದೆ.
ಮುಂದಿನ ಸಾಹಿತ್ಯ ಚಟುವಟಿಕೆ ಹಾಗೂ ಕನ್ನಡ ಭಾಷಾ ವಿಚಾರದಲ್ಲಿ ಹೆಚ್ಚು ಗಮನ ನೀಡಿ ಕಾರ್ಯ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪರಿಷತ್ತಿನ ಶ್ರೇಯೋಭಿವೃದ್ಧಿಗೆ ಶ್ರಮಿಸುವಂತೆ ಕಸಾಪ ಜಿಲ್ಲಾಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಶುಭ ಹಾರೈಸಿದ್ದಾರೆ.
Next Story