Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ12 Aug 2018 11:41 PM IST
share
ಓ ಮೆಣಸೇ...

ರಾಜಕಾರಣ ನಿಂತ ನೀರಲ್ಲ - ಎಚ್. ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ

► ಅದು ಕೊಳೆತ ನೀರು. 

---------------------

ರಾಹುಲ್‌ಗಾಂಧಿ ಸುಳ್ಳನ್ನು ಬಿಟ್ಟು ಬೇರೇನೂ ಹೇಳುವುದಿಲ್ಲ - ಅಮಿತ್ ಶಾ, ಬಿಜೆಪಿ ಅಧ್ಯಕ್ಷ

► ನರೇಂದ್ರ ಮೋದಿಯವರನ್ನು ತಬ್ಬಿಕೊಂಡಾಗ ಅಂಟಿಕೊಂಡ ವೈರಸ್ ಅದು. 

---------------------

ಕಾಂಗ್ರೆಸನ್ನು ನಿರ್ನಾಮ ಮಾಡುವ ಪಕ್ಷ ಇನ್ನೂ ಹುಟ್ಟಿಲ್ಲ - ಜಯಮಾಲಾ, ಸಚಿವೆ

► ಅದನ್ನು ನಿರ್ನಾಮ ಮಾಡಲು ಪಕ್ಷದೊಳಗೇ ಸಾಕಷ್ಟು ಜನರಿದ್ದಾರೆ.

---------------------

ಪತ್ರಿಕೋದ್ಯಮ ಇಂದು ಉದ್ಯಮವಾಗುತ್ತಿರುವುದು ಬಹು ದೊಡ್ಡ ದುರಂತ - ವೈ.ಎಸ್.ವಿ.ದತ್ತ, ಮಾಜಿ ಶಾಸಕ 

► ಉದ್ಯಮಗಳು ಹೆಚ್ಚಬೇಕು ಎನ್ನುವುದೇ ಪ್ರಧಾನಿ ಮೋದಿಯ ಕನಸು.

---------------------

ಮಾಜಿ ಪ್ರಧಾನಿ ದೇವೇಗೌಡರು ವಿಶ್ವಕೋಶವಿದ್ದಂತೆ - ಪ್ರಜ್ವಲ್ ರೇವಣ್ಣ, ಜೆಡಿಎಸ್ ಪ್ರ.ಕಾರ್ಯದರ್ಶಿ 

► ಮನೆಯೇ ಅವರ ವಿಶ್ವ.

---------------------

ಕಾರ್ಯಕರ್ತರಿಗಿಂತ ವಿಶ್ವಾಸಾರ್ಹ ಮಾಧ್ಯಮ ಮತ್ತೊಂದಿಲ್ಲ - ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವ 

ಅದಕ್ಕೇ ಹೆಚ್ಚಿನ ಪತ್ರಿಕೆಗಳಲ್ಲಿ ನಿಮ್ಮ ಕಾರ್ಯಕರ್ತರೇ ಪತ್ರಕರ್ತರ ವೇಷದಲ್ಲಿರುವುದು.

---------------------

ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಏಳಿಗೆ ಹೊಂದುತ್ತಿರುವುದು ವಿಪಕ್ಷಗಳಿಗೆ ಸಹಿಸಲಾಗುತ್ತಿಲ್ಲ - ಆದಿತ್ಯನಾಥ್, ಉ.ಪ. ಮುಖ್ಯಮಂತ್ರಿ 

►ಯಾವ ದೇಶದ ಏಳಿಗೆ ಎನ್ನುವುದು ಪ್ರಶ್ನೆ.

---------------------

ಉದ್ಯೋಗವೇ ಇಲ್ಲದಿರುವಾಗ ಮೀಸಲಾತಿ ಎಲ್ಲಿರುತ್ತದೆ? - ನಿತಿನ್ ಗಡ್ಕರಿ, ಕೇಂದ್ರ ಸಚಿವ 

►ಮೀಸಲಾತಿ ಅಳಿಸುವುದಕ್ಕಾಗಿ ಉದ್ಯೋಗ ಇಲ್ಲದಂತೆ ಮಾಡಿರುವುದೇ?

---------------------

ಇಂದು ಸ್ವಾಮಿ ವಿವೇಕಾನಂದರು ಇರುತ್ತಿದ್ದರೆ ಅವರೂ ಹಿಂಸಾತ್ಮಕ ದಾಳಿಗೆ ತುತ್ತಾಗುತ್ತಿದ್ದರು -ಶಶಿತರೂರು, ಕಾಂಗ್ರೆಸ್ ನಾಯಕ

► ಮತ್ತು ಉಳಿದವರು ಪಟಾಕಿ ಹಚ್ಚಿ ಸಂಭ್ರಮಿಸುತ್ತಿದ್ದರು. 

---------------------

ನನ್ನ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಸುಂದರಿಯರನ್ನು ಹುಡುಕಿ ಕೊಡಿ -ಅಶೋಕ್ ಖೇಣಿ, ಕಾಂಗ್ರೆಸ್ ಮುಖಂಡ

► ಅದಕ್ಕಾಗಿಯೇ ವಿಶೇಷ ತನಿಖಾ ತಂಡವೊಂದನ್ನು ರಚಿಸಿದರೆ?

---------------------

ಸಂವಿಧಾನದಲ್ಲಿ ಹಿಂಸೆಗೆ ಸ್ಥಾನವಿಲ್ಲ - ರಾಮನಾಥ್ ಕೋವಿಂದ್, ರಾಷ್ಟ್ರಪತಿ

► ಅದಕ್ಕೆ ಸಂವಿಧಾನವನ್ನೇ ಸುಡಲು ಹೊರಟಿರುವುದು.

---------------------

ಲೋಕಸಭಾ ಚುನಾವಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲುರಿಗೆ ಬಿಜೆಪಿ ಟಿಕೆಟ್ ತಪ್ಪಿಸಲು ಪಿತೂರಿ ನಡೆಯುತ್ತಿದೆ - ಪ್ರತಾಪ ಸಿಂಹ, ಸಂಸದ

► ಪಿತೂರಿಯಲ್ಲಿ ನಿಮ್ಮ ಪಾಲೆಷ್ಟು?

---------------------

ಬಿಜೆಪಿಯವರಿಗೆ ಶ್ರೀರಾಮ ದೇವರ ಶಾಪವಿದೆ - ವಿನಯ ಕುಮಾರ್ ಸೊರಕೆ, ಮಾಜಿ ಸಚಿವ 

► ಅಧಿಕಾರ ಹಿಡಿಯಲು ಸಹಾಯಕವಾಗುವುದಾದರೆ ಅದೆಷ್ಟು ಶಾಪಗಳನ್ನೂ ಅವರು ಸ್ವೀಕರಿಸಲು ಸಿದ್ಧರಿದ್ದಾರೆ.

---------------------

ಜಿನ್ನಾ ಭಾರತದ ಪ್ರಧಾನಿಯಾಗಿದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ -ದಲಾಯಿಲಾಮಾ, ಬೌದ್ಧ ಧರ್ಮ ಗುರು

► ಸದ್ಯಕ್ಕೆ ತಾವು ಟಿಬೆಟ್ ಕುರಿತಂತೆ ಹೇಳಿಕೆ ನೀಡಿದರೆ ಆರೋಗ್ಯಕ್ಕೆ ಉತ್ತಮ.

---------------------

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು 3 ತಿಂಗಳಲ್ಲಿ ಮೈತ್ರಿ ಸರಕಾರವನ್ನು ಉರುಳಿಸಲಿದ್ದಾರೆ - ಬಸವನ ಗೌಡ ಪಾಟೀಲ ಯತ್ನಾಳ, ಶಾಸಕ

► ಹಳೆ ಬಿಜೆಪಿ ಸರಕಾರದ ಅನುಭವದ ಮಾತೇ?

---------------------

ಮುಂದಿನ ಚುನಾವಣೆಯಲ್ಲಿ ಗೆದ್ದರೂ - ಸೋತರೂ ನಾನೇ ಹೊಣೆ - ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ 

► ಒಟ್ಟಿನಲ್ಲಿ ನಿಮ್ಮನ್ನು ಹೊಣೆಯಾಗಿಸಿ ಕಾಂಗ್ರೆಸ್ ಸೋಲಲು ಸಿದ್ಧತೆ ನಡೆಸುತ್ತಿದೆ ಎಂದಾಯಿತು.

---------------------

ನಮ್ಮ ಕತ್ತು ಕತ್ತರಿಸಿದರೂ ನಾವು ಮುಸಲ್ಮಾನರಾಗಿಯೇ ಮುಂದುವರಿಯುತ್ತೇವೆ -ಅಸದುದ್ದೀನ್ ಉವೈಸಿ, ಸಂಸದ 

► ಒಳ್ಳೆಯ ಮುಸಲ್ಮಾನರನ್ನು ಯಾರೂ ಕತ್ತು ಕತ್ತರಿಸುವುದಿಲ್ಲ. ಬದಲಿಗೆ ತಬ್ಬಿಕೊಳ್ಳುತ್ತಾರೆ.

---------------------

ದೇವೇಗೌಡ , ಸೋನಿಯಾಗಾಂಧಿ ಮತ್ತು ತನಗೆ ಮಾತ್ರ ವಿಪಕ್ಷಗಳನ್ನು ಒಗ್ಗೂಡಿಸಲು ಸಾಧ್ಯವಿರುವುದು -ಶರದ್ ಪವಾರ್, ಎನ್‌ಸಿಪಿ ಮುಖ್ಯಸ್ಥ 

► ಒಡೆಯುವುದಕ್ಕೆ ಯಾರ ಸಹಾಯ ಪಡೆಯುತ್ತೀರಿ?

---------------------

ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಮತದಾರರು ಕೊಟ್ಟ ಪೆಟ್ಟಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಕೃತಿ ಚಿಕಿತ್ಸೆ ಪಡೆಯ ಬೇಕಾಯಿತು -ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ 

► ನಿಮ್ಮಂತೆ ಚಿಕಿತ್ಸೆ ಪಡೆಯದೇ ಏನೇನೋ ಮಾತನಾಡುವುದಕ್ಕಿಂತ, ಚಿಕಿತ್ಸೆ ಪಡೆದು ಗುಣಮುಖರಾಗುವುದು ಒಳ್ಳೆಯದು.

---------------------

ಪ್ರಧಾನಿ ನರೇಂದ್ರ ಮೋದಿ ಹತ್ತಿರ ಧೈರ್ಯವಾಗಿ ಮಾತನಾಡುವ ಶಕ್ತಿ ಬಿಜೆಪಿಯವರಿಗೇ ಇಲ್ಲ -ಪ್ರಿಯಾಂಕ್ ಖರ್ಗೆ, ಸಚಿವ 

► ಸೋನಿಯಾ ಗಾಂಧಿಯ ಮುಂದೊಮ್ಮೆ ಧೈರ್ಯವಾಗಿ ಮಾತನಾಡಿ ನೋಡಿ.

---------------------

ಆಪರೇಶನ್ ಕಮಲ ಮಾಡುವ ಅಗತ್ಯ ನಮ್ಮ ಪಕ್ಷಕ್ಕಿಲ್ಲ -ಯಡಿಯೂರಪ್ಪ,  ಮಾಜಿ ಮುಖ್ಯಮಂತ್ರಿ 

► ಅಂದರೆ ವ್ಯವಹಾರ ಕುದುರಲಿಲ್ಲವೆಂದಾಯಿತು.

---------------------

ಕರುಣಾನಿಧಿ ನನ್ನ ತಂದೆ ಇದ್ದಂತೆ - ಸೋನಿಯ ಗಾಂಧಿ, ಕಾಂಗ್ರೆಸ್ ನಾಯಕಿ

► ಜಯಲಲಿತಾ ತಾಯಿ ಇದ್ದಂತೆ ಎಂದು ಹೇಳಿದ ನೆನಪು.

share
ಪಿ.ಎ.ರೈ
ಪಿ.ಎ.ರೈ
Next Story
X