Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ಮಿತಿಗಳ ನಡುವೆ ಬೆವರಹನಿಗಳು...

ಮಿತಿಗಳ ನಡುವೆ ಬೆವರಹನಿಗಳು...

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ13 Aug 2018 12:00 AM IST
share
ಮಿತಿಗಳ ನಡುವೆ ಬೆವರಹನಿಗಳು...

ಬದುಕಿನಿಂದಲೇ ಯಥಾವತ್ ಮೊಗೆದು ತೆಗೆದ ನೆನಪುಗಳ ಹನಿಗಳೇ ಕೆ. ಮಲ್ಲಿನಾಥ್ ಅವರು ಬರೆದ 'ಬೆವರ ಹನಿಗಳು'. ಅವರೇ ಹೇಳುವಂತೆ ಇವು ಜೀವನದ ಸತ್ಯ ಘಟನೆಗಳನ್ನು ಆಧರಿಸಿದವುಗಳು. ಲೇಖಕ ಮಲ್ಲಿನಾಥರು ಕೆಎಎಸ್ ಅಧಿಕಾರಿ. ಇಂತಹದೊಂದು ಸ್ಥಾನದಲ್ಲಿ ನಿಂತು ಕಾರ್ಯ ನಿರ್ವಹಿಸುವಾಗ ಅವರು ಮುಖಾಮುಖಿಗೊಳ್ಳಬೇಕಾದ ಹಲವು ಮಹತ್ವದ ಸಂಗತಿಗಳಿರುತ್ತವೆ. ಜನಸಾಮಾನ್ಯರೊಂದಿಗೆ ಮಾತ್ರವಲ್ಲ, ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಹಿರಿಯ ನಾಗರಿಕರ ಜೊತೆಗೆ ವ್ಯವಹಾರಿಸುವ ಸಂದರ್ಭಗಳು ಎದುರಾಗುತ್ತವೆ. ಈ ನಿಟ್ಟಿನಲ್ಲಿ ಮಲ್ಲಿನಾಥ್ ಅವರ ಬರಹಗಳು ಒಂದಿಷ್ಟು ಕುತೂಹಲವನ್ನು ಹುಟ್ಟಿಸುತ್ತವೆೆ. ಈ ಕೃತಿಯನ್ನು ಮೂರು ಭಾಗವನ್ನಾಗಿ ಮಾಡಿದ್ದಾರೆ. ಮೊದಲ ಭಾಗದಲ್ಲಿ ಮಂಜುಹನಿಯ ನೆನಪುಗಳಿವೆ. ಭಾಗ ಎರಡರಲ್ಲಿ, ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವಗಳಿವೆ. ಭಾಗ ಮೂರರಲ್ಲಿ ವೃತ್ತಿ ಬದುಕಿನ ಜೊತೆಗೆ ಬೆಸೆದುಕೊಂಡ ಇತರ ಬರಹಗಳಿವೆ.
ಬೆರಳಚ್ಚುಗಾರನಾಗಿ ಆರಂಭಗೊಂಡ ಲೇಖಕರ ಬದುಕು, ಬಳಿಕ ಶಿಕ್ಷಕನಾಗಿ, ಆ ಬಳಿಕ ಕಂದಾಯ ಇಲಾಖೆಯ ಅಧಿಕಾರಿ....ಮುಂದೆ ತಹಶೀಲ್ದಾರ್...ಹೀಗೆ ಅವರ ವೃತ್ತಿ ಬದುಕು ಮುಂದುವರಿಯುತ್ತದೆ. ಇಲ್ಲಿ ವೃತ್ತಿ ಬದುಕಿನಲ್ಲಿ ಮಾಡಿದ ಸಾಧನೆಗಳಷ್ಟೇ ಅಲ್ಲ, ಆ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಅವರ ಅನುಭವ, ಅವರು ಕಂಡುಕೊಂಡ ಬದುಕು, ಬವಣೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ತಮ್ಮ ಮಂಜುಹನಿಗಳು ಕೃತಿಯಲ್ಲಿ ತಮ್ಮ ಬದುಕಿನ ಅನೇಕ ವಿಷಯಗಳನ್ನು ಪ್ರಸ್ತಾಪಿಸಿರುವ ಲೇಖಕರು, ಈ ಕೃತಿಯಲ್ಲಿ ತಮ್ಮ ಮೂರು ದಶಕಗಳ ಆಡಳಿತಾತ್ಮಕ ಅನುಭವ ಹಾಗೂ ನಿವೃತ್ತಿಯ ಅನಂತರ ಎರಡು ದಶಕಗಳ ವಿವಿಧ ಇಲಾಖೆಗಳಲ್ಲಿ ಕಂಡುಂಡ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಒಬ್ಬ ಅಧಿಕಾರಿಯಾಗಿ ತನ್ನ ಬದುಕಿನ ಅನುಭವವನ್ನು ತೆರೆದಿಡಬೇಕಾದರೆ ಒಂದಿಷ್ಟು ಸೃಜನಶೀಲ ಮನಸ್ಸಿರಬೇಕು. ಅಂತಹ ಸೃಜನಶೀಲ ಮನಸ್ಸಿನಿಂದ ಅರಳಿದ ಕೃತಿ ಇದು. ವಿಶೇಷವೆಂದರೆ, ಇಲ್ಲಿ ಲೇಖಕರು ತಮ್ಮ ಖಾಸಗಿ ಬದುಕಿಗೆ ಒತ್ತುಕೊಟ್ಟಿದ್ದಾರೆ. ಹಾಗೆಯೇ ತಮ್ಮ ನಂಬಿಕೆ, ಮೂಢನಂಬಿಕೆ ಎಲ್ಲವನ್ನೂ ಓದುಗರ ಮೇಲೆ ಹೇರುವ ಪ್ರಯತ್ನ ಮಾಡಿದ್ದಾರೆ. ಇದು ಕೃತಿಯ ಮಿತಿಯೂ ಹೌದು. ಜನಸಾಮಾನ್ಯರೊಂದಿಗೆ ಬೆಸೆಯುವ ಅಪಾರ ಅವಕಾಶವಿರುವ ವೃತ್ತಿ ಕಂದಾಯ ಇಲಾಖೆ. ಈ ಸಂದರ್ಭದಲ್ಲಿ ಜನಸಾಮಾನ್ಯರ ಜೊತೆಗೆ ಬೆರೆತು, ಅವರು ಬದುಕು ಬವಣೆಗಳನ್ನು ಪರಿಣಾಮಕಾರಿಯಾಗಿ ತೆರೆದಿಡುವ ಅವಕಾಶ ಲೇಖಕರಿಗಿತ್ತು. ವೈಯಕ್ತಿಕ ಅನುಭವಗಳನ್ನು ಕಥನರೂಪದಲ್ಲಿ ವಿವರಿಸಬಹುದಾಗಿತ್ತು. ಆದರೆ ಇದು ಸಣ್ಣ ಪುಟ್ಟ ಟಿಪ್ಪಣಿಗಳಂತಿದೆ. ಒಂದು ರೀತಿಯಲ್ಲಿ ಲೇಖಕರ ಆತ್ಮಕಥನವಾಗಿದೆ. ಕೆಲವು ಪ್ರಕರಣಗಳಂತೂ ವರದಿಯ ರೂಪದಲ್ಲಿವೆೆ. ಅದು ನೀರಸವಾಗಿದೆ. ಓದುಗರ ಜೊತೆಗೆ ಸಂವಾದಿಸುವಲ್ಲಿ ಅದು ವಿಫಲವಾಗುತ್ತದೆ. ನಿವೃತ್ತ ಅಧಿಕಾರಿಯಾಗಿ ಇಷ್ಟರಮಟ್ಟಿಗಾದರೂ ತಮ್ಮ ವೃತ್ತಿ ದಾರಿಯ ಕಡೆಗೆ ಹಿನ್ನೋಟ ಹರಿಸಿದ ಕಾರಣಕ್ಕೆ ಮಲ್ಲಿನಾಥರನ್ನು ಅಭಿನಂದಿಸಬೇಕು. ತಮ್ಮ ವೃತ್ತಿ ಬದುಕಿನ ಅನುಭವಗಳನ್ನು ಇನ್ನಷ್ಟು ವಿಸ್ತಾರವಾಗಿ, ಒಳನೋಟಗಳ ಜೊತೆಗೆ ಕಟ್ಟಿಕೊಡುವ ಅವಕಾಶ ಅವರಿಗಿದೆ. ಮುಂದಿನ ದಿನಗಳಲ್ಲಿ ಅವರಿಂದ ಅಂತಹದೊಂದು ಪ್ರಯತ್ನ ನಡೆಯಬೇಕಾಗಿದೆ.

 

share
-ಕಾರುಣ್ಯಾ
-ಕಾರುಣ್ಯಾ
Next Story
X