ಸ್ವಾತಂತ್ರೋತ್ಸವ ಕಾರ್ಯಕ್ರಮ: ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು
ಮಂಗಳೂರು, ಆ.14: ನಗರದ ನೆಹರೂ ಮೈದಾನದಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ದಿನಾಚರಣೆಯ ಪ್ರಯುಕ್ತ ಭದ್ರತಾ ದೃಷ್ಟಿಯಿಂದ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.
ನಗರದ ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ತನಕ ಹಾಗೂ ವಿರುದ್ಧ ದಿಕ್ಕಿನಲ್ಲಿ ಕಾರ್ಯಕ್ರಮಕ್ಕೆ ಸಂಬಂಧಿಸಿದ ಇಲಾಖಾ ವಾಹನ ಹೊರತುಪಡಿಸಿ ಇತರ ವಾಹನಗಳ ಪ್ರವೇಶ ಅಥವಾ ಪಾರ್ಕಿಂಗ್ ಅನ್ನು ಹಾಗೂ ಎ.ಬಿ. ಶೆಟ್ಟಿ ವೃತ್ತದಿಂದ ಪುಟ್ಬಾಲ್ ಮೈದಾನದ ತನಕ ಯು.ಪಿ.ಮಲ್ಯ ರಸ್ತೆಯಲ್ಲಿ ಮೈದಾನದ ಬದಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇದಿಸಲಾಗಿದೆ.
ಎ.ಬಿ.ಶೆಟ್ಟಿ ವೃತ್ತದಿಂದ ಹ್ಯಾಮಿಲ್ಟನ್ ವೃತ್ತದ ಕಡೆ ಹೋಗುವ ವಾಹನಗಳು ನೆಹರೂ ವೃತ್ತವಾಗಿ ರೊಸಾರಿಯೋ ಆಗಿ ಸಂಚರಿಸುವುದು. ಹ್ಯಾಮಿಲ್ಟನ್ ವೃತ್ತದಿಂದ ಎ.ಬಿ. ಶೆಟ್ಟಿ ಕಡೆಗೆ ಸಂಚರಿಸುವ ವಾಹನಗಳು ಲೇಡಿಘೋಷನ್ ಕ್ಲಾಕ್ಟವರ್ ಮೂಲಕ ಸಂಚರಿಸಬೇಕಾಗಿದೆ.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ವಾಹನಗಳನ್ನು ಕ್ರಮವಾಗಿ ಗೇಟ್ ವೇ ಹೋಟೆಲ್ ರಸ್ತೆಯ ಎಡಭಾಗದಲ್ಲಿ ಪಾಕ್ ಮಾಡಬಹುದಾಗಿದೆ. ಶಾಲಾ ವಾಹನಗಳನ್ನು ರೊಸಾರಿಯೋ ರಸ್ತೆಯ ಎಡಭಾಗದಲ್ಲಿ ಪಾರ್ಕ್ ಮಾಡಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.







