ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜಿಲ್ಲಾ ಎಸ್ ವೈ ಎಸ್ ನಿಂದ ರೋಗಿಗಳಿಗೆ ಹಣ್ಣು ಹಂಪಲು ಮತ್ತು ವಸ್ತ್ರ ವಿತರಣೆ
ಮಂಗಳೂರು: ಕರ್ನಾಟಕ ರಾಜ್ಯಾದ್ಯಂತ ಎಲ್ಲಾ ಸೆಂಟರ್ ಗಳಲ್ಲಿ ಭಾರತ ಬಾರತೀಯರದ್ದಾಗಲಿ ಎಂಬ ಘೋಷ ವಾಕ್ಯದೊಂದಿಗೆ 72 ನೇ ಸ್ವಾತಂತ್ರ್ಯದ ಅಂಗವಾಗಿ ನಗರದ ವೆನ್ಲಾಕ್ ಆಸ್ಪತ್ರೆ ಯ ಸುಮಾರು 700 ರಷ್ಟು ರೋಗಿಗಳಿಗೆ ಹಣ್ಣುಹಂಪಲು ಮತ್ತು ವಸ್ತ್ರ ವಿತರಣಾ ಕಾರ್ಯಕ್ರಮ ಆಗಸ್ಟ್ 16 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ ಖಾದರ್, ರಾಜ್ಯ ಎಸ್ ವೈ ಎಸ್ ಪ್ರಧಾನ ಕಾರ್ಯದರ್ಶಿ ಎಂಎಸ್ಎಂ ಝೈನಿ ಕಾಮಿಲ್ , ಜಿಲ್ಲಾ ಉಪಾಧ್ಯಕ್ಷ ಮೂಳೂರು ಸಖಾಫಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಕಿನಾರ, ಕೋಶಾಧಿಕಾರಿ ಹನೀಪ್ ಹಾಜಿ, ಜಿಲ್ಲಾ ನಾಯಕರುಗಳಾದ ಎಸ್ಎಂ ತಂಙಲ್, ಉಮರ್ ಮಾಸ್ಟರ್, ಬಾವ ಫಕ್ರುದ್ದೀನ್, ಖಲೀಲ್ ಮುಸ್ಲಿಯಾರ್, ಅಬ್ದುಲ್ಲ ಮುಸ್ಲಿಯಾರ್ ,ಎಸ್ಸೆಸ್ಸೆಫ್ ಮಂಗಳೂರು ನಾಯಕರಾದ ಹಸನ್ , ಲತೀಪ್, ನಝೀರ್ ಭಾಗವಹಿಸಿದರು.
Next Story