ಕೇರಳದಲ್ಲಿ ಭಾರೀ ಮಳೆ: ಮುಂಗಡ ಕಾಯ್ದಿರಿಸಿದ್ದ ಟಿಕೆಟ್ ರದ್ದುಪಡಿಸಿದ ಕೆಎಸ್ಸಾರ್ಟಿಸಿ
ಬೆಂಗಳೂರು, ಆ. 17: ಕೇರಳ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹದಿಂದ ಹಿನ್ನೆಲೆಯಲ್ಲಿ ಮುಂಗಡ ಕಾಯ್ದಿರಿಸಿದ್ದ ಪ್ರಯಾಣಿಕರ ಟಿಕೆಟ್ ರದ್ದುಪಡಿಸಿದ್ದು, ಪ್ರಯಾಣಿಕರಿಗೆ ಒಟ್ಟು 52ಲಕ್ಷ ರೂ.ಗಳಿಗೂ ಅಧಿಕ ಮೊತ್ತದ ಹಣವನ್ನು ಮರುಪಾವತಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ತಿಳಿಸಿದೆ.
ಆ.9 ರಿಂದ ಇಂದಿನ ವರೆಗೆ ಮುಂಗಡ ಕಾಯ್ದಿರಿಸಿದ್ದ 8,415 ಟಿಕೆಟ್ಗಳನ್ನು ರದ್ದುಪಡಿಸಿದೆ. ಒಟ್ಟು 918 ಟ್ರಿಪ್ಗಳನ್ನು ಮಳೆ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.
ಒಂದು ವಾರದಿಂದ ಭಾರೀ ಮಳೆಯಾಗುತ್ತಿರುವ ಮಡಿಕೇರಿ, ಮಂಗಳೂರು ಹಾಗೂ ಕೇರಳ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್ಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ರದ್ದುಪಡಿಸಲಾಗಿತ್ತು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪ್ರಕಟಣೆ ಮಾಹಿತಿ ನೀಡಿದೆ.
Next Story