Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಗ್ರ ದೃಷ್ಟಿಯಿಲ್ಲದ ಹಣದುಬ್ಬರ ನಿಗ್ರಹ...

ಸಮಗ್ರ ದೃಷ್ಟಿಯಿಲ್ಲದ ಹಣದುಬ್ಬರ ನಿಗ್ರಹ ಕ್ರಮಗಳು

ಅನು: ಶಿವಸುಂದರ್ಅನು: ಶಿವಸುಂದರ್22 Aug 2018 12:00 AM IST
share
ಸಮಗ್ರ ದೃಷ್ಟಿಯಿಲ್ಲದ ಹಣದುಬ್ಬರ ನಿಗ್ರಹ ಕ್ರಮಗಳು

ಭಾರತೀಯ ರಿಸರ್ವ್ ಬ್ಯಾಂಕಿನ ಹಣಕಾಸು ನಿರ್ವಹಣಾ ಕ್ರಮಗಳು ಕೇವಲ ಗ್ರಾಹಕ ದರ ಸೂಚ್ಯಂಕದ ಉಬ್ಬರವನ್ನು ತಡೆಗಟ್ಟುವುದನ್ನು ಮಾತ್ರ ಗುರಿಯಾಗಿರಿಸಿಕೊಂಡಿದೆ. 


ಭಾರತೀಯ ರಿಸರ್ವ್ ಬ್ಯಾಂಕು (ಆರ್‌ಬಿಐ) ಸಂಭವನೀಯ ಹಣದುಬ್ಬರ ದರಗಳನ್ನು ನಿಯಂತ್ರಿಸಲು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಕೆಲವು ಶಾಸ್ತ್ರೀಯ ಕ್ರಮಗಳನ್ನು ಕೈಗೊಂಡಿದೆ. ಅದು ಆರ್ಥಿಕತೆಯಲ್ಲಿ ಹಣದ ಹರಿವನ್ನು ಬಿಗಿಗೊಳಿಸುವ ಉದ್ದೇಶದಿಂದ ತನ್ನ ಪಾಲಿಸಿ ದರಗಳನ್ನು ಶೇ.6ರಿಂದ ಶೇ.6.5ಕ್ಕೆ ಏರಿಸಿದೆ. ಅದರ ಜೊತೆಜೊತೆಗೆ ರಿವರ್ಸ್ ರಿಪೊ ದರ (ವಾಣಿಜ್ಯ ಬ್ಯಾಂಕುಗಳಿಂದ ಪಡೆದುಕೊಳ್ಳುವ ಹಣಕ್ಕೆ ರಿಸರ್ವ್ ಬ್ಯಾಂಕ್ ತೆರುವ ಬಡ್ಡಿದರ), ಮಾರ್ಜಿನಲ್ ಸ್ಟಾಂಡಿಂಗ್ ಫೆಸಿಲಿಟಿ ರೇಟ್ (ಸರಕಾರದ ಬಾಂಡುಗಳನ್ನು ಸಲ್ಲಿಸಿ ಬ್ಯಾಂಕುಗಳು ಆರ್‌ಬಿಐಯಿಂದ ಪಡೆದುಕೊಳ್ಳುವ ದಿಢೀರ್ ಮತ್ತು ಅಲ್ಪಕಾಲೀನ ಹಣಕಾಸಿಗೆ ಆರ್‌ಬಿಐ ವಿಧಿಸುವ ದರ), ಮತ್ತು ಬ್ಯಾಂಕು ದರ (ಬ್ಯಾಂಕುಗಳು ಆರ್‌ಬಿಐನಿಂದ ಪಡೆದುಕೊಳ್ಳುವ ಹಣಕಾಸಿಗೆ ಆರ್‌ಬಿಐ ವಿಧಿಸುವ ದರ)ಗಳನ್ನು ಶೇ. 0.25ರಷ್ಟು ಏರಿಸಿದೆ.

ಆರ್‌ಬಿಐ ಒದಗಿಸುವ ನಗದು ಹಣವನ್ನು ಪಡೆದುಕೊಳ್ಳಲು ತಗಲುವ ವೆಚ್ಚವನ್ನು ಹೆಚ್ಚುಮಾಡುವುದು ಮತ್ತು ಆ ಮೂಲಕ ಬ್ಯಾಂಕುಗಳಿಂದ ಸಾಲ ಪಡೆಯುವುದನ್ನು ತುಟ್ಟಿಗೊಳಿಸಿ ಹಣಕಾಸಿನ ಹರಿವನ್ನು ನಿಯಂತ್ರಣಕ್ಕೆ ತರುವುದರ ಮೂಲಕ ಹಣದುಬ್ಬರವನ್ನು ನಿಗದಿತವಾದ ವಲಯದಲ್ಲೇ ಇರುವಂತೆ ಸ್ಥಿರಗೊಳಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ದುರಂತವೆಂದರೆ ಭಾರತದ ಆರ್ಥಿಕತೆಯನ್ನು ನಿಯಂತ್ರಿಸುವ ಎರಡು ಪ್ರಧಾನ ಸಾರ್ವಜನಿಕ ನೀತಿಗಳಾದ ವಿತ್ತ ನೀತಿ ಮತ್ತು ಹಣಕಾಸು ನೀತಿಗಳೆರಡೂ ಸಹ ನವ ಉದಾರವಾದಿ ಚೌಕಟ್ಟಿನೊಳಗೆ ಸಿಲುಕಿಕೊಂಡಿವೆ ಮತ್ತು ಆ ಕಾರಣದಿಂದಾಗಿಯೇ ಆ ಎರಡೂ ನೀತಿ ಚೌಕಟ್ಟುಗಳಿಗೆ ಆರ್ಥಿಕತೆಯಲ್ಲಿ ಹೆಚ್ಚಿನ ಅಭಿವೃದ್ಧಿ ದರವನ್ನು ಸಾಧಿಸುವ, ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಸಾಮಾಜಿಕ ಅಸಮಾನತೆಗಳನ್ನು ಕಡಿತಗೊಳಿಸುವ ಉದ್ದೇಶಗಳೇ ಇಲ್ಲದಂತಾಗಿದೆ.

ವಿತ್ತೀಯ ಸುಧಾರಣೆ ಮತ್ತು ಸದೃಢೀಕರಣ ನೀತಿಗಳಿಂದಾಗಿ ಭಾರತದ ಸಾಮಾಜಿಕ ರಂಗಕ್ಕೆ ದೊರಕಬೇಕಾದ ಸಾರ್ವಜನಿಕ ನಿಧಿಯ ಪಾಲು ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಾಗಿ ಹಲವಾರು ಸಾಮಾಜಿಕ ಸೂಚ್ಯಂಕಗಳಲ್ಲಿ ಭಾರತವು ತನ್ನ ರೀತಿಯೇ ಇರುವ ಹಲವು ದೇಶಗಳಿಗಿಂತ ಹಿಂದೆ ಬಿದ್ದಿದೆ. ಇದರ ಪರಿಣಾಮದಿಂದ ವ್ಯವಸ್ಥೆಯಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಅಸಮಾನತೆಗಳು ಇನ್ನಷ್ಟು ಹೆಚ್ಚಾಗುತ್ತಿವೆ. ಆರ್‌ಬಿಐನ ಹಣಕಾಸು ನೀತಿಗಳು ಹಣದುಬ್ಬರವನ್ನು ಶೇ.4ರ ಆಸುಪಾಸಿನಲ್ಲಿ- ಕಡಿಮೆ ಅಂದರೆ ಶೇ.2 ಮತ್ತು ಹೆಚ್ಚೆಂದರೆ ಶೇ.6ರ ನಡುವೆ-ಇರುವಂತೆ ನೋಡಿಕೊಳ್ಳುವ ತನ್ನ ಶಾಸನಾತ್ಮಕ ಹೊಣೆಗಾರಿಕೆಯನ್ನು ನಿಭಾಯಿಸಲು ಬ್ಯಾಂಕುಗಳಲ್ಲಿರುವ ನಗದು ಹಣದ ಹರಿವನ್ನು ಏಕ ಬಡ್ಡಿ ದರದ ಮೂಲಕ ನಿಯಂತ್ರಿಸುವ ಕ್ರಮಗಳಿಗೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಂಡುಬಿಟ್ಟಿವೆ. ಆರ್‌ಬಿಐನಂತಹ ಒಂದು ಕೇಂದ್ರೀಯ ಬ್ಯಾಂಕು ಈ ರೀತಿ ಹಣದುಬ್ಬರದ ನಿಯಂತ್ರಣಕ್ಕೆ ಮಾತ್ರ ಹೆಚ್ಚು ಒತ್ತುಕೊಟ್ಟು ಸೀಮಿತಗೊಳಿಸಿಕೊಳ್ಳುವುದರಿಂದ ಅದರ ಮುಂದಿರುವ ಇತರ ಮತ್ತು ಒಟ್ಟಾರೆ ಆರ್ಥಿಕ ಅಭಿವೃದ್ಧಿಯ ಕಡೆಗಿನ ಗಮನ ತಪ್ಪುತ್ತದೆ ಎಂದು ಆರ್‌ಬಿಐನ ಬಹುಪಾಲು ನಿವೃತ್ತ ಗವರ್ನರುಗಳು ಅಭಿಪ್ರಾಯ ಪಟ್ಟಿದ್ದಾರೆ.

ಭಾರತದಲ್ಲಿ ಹಣದುಬ್ಬರವು ಸಂಭವಿಸುವುದು ಹೆಚ್ಚಾಗಿ ಆರ್ಥಿಕತೆಯ ಸರಬರಾಜು ವಲಯದ ಏರುಪೇರುಗಳ ಕಾರಣಕ್ಕೆ. ಅದರ ಮೇಲೆ ಆರ್‌ಬಿಐಗೆ ಹೆಚ್ಚಿನ ನಿಯಂತ್ರಣವೇನೂ ಇಲ್ಲ. ಅಲ್ಲದೆ ಹಣಕಾಸು ಹರಿವಿನ ಮೇಲೆ ನಿಯಂತ್ರಣ ವಿಧಿಸುವ ಕ್ರಮಗಳು ಈ ವಲಯದ ಮೇಲೆ ಹೆಚ್ಚಿನ ಪ್ರಭಾವನ್ನೇನೂ ಬೀರುವುದಿಲ್ಲ. ಅಷ್ಟು ಮಾತ್ರವಲ್ಲದೆ ತನ್ನ ರೆಪೋ ದರದ ಬದಲಾವಣೆಗಳಿಂದಾಗಿ ಹಣದುಬ್ಬರದ ದರಗಳಲ್ಲಿ ಬದಲಾವಣೆಯನ್ನು ತರಲಾಗಿದೆಯೆಂಬ ಆರ್‌ಬಿಐನ ಪ್ರತಿಪಾದನೆಗಳನ್ನು ಸಹ ಹಲವಾರು ಸ್ವತಂತ್ರ ಅಧ್ಯಯನಗಳು ಪ್ರಶ್ನೆಗೊಳಪಡಿಸಿವೆ. ಅದಲ್ಲದೆ ಹಣದುಬ್ಬರವನ್ನು ಅಳೆಯಲು ಭಿನ್ನ ಭಿನ್ನ ಮಾಪನಗಳಿವೆ. ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ), ಸಗಟು ಬೆಲೆ ಸೂಚ್ಯಂಕ ಮತ್ತು ಜಿಡಿಪಿ ಡಿಫ್ಲೇಟರ್ (ಆರ್ಥಿಕತೆಯಲ್ಲಿ ಹೊಸದಾಗಿ ಉತ್ಪಾದಿತವಾದ ಸರಕು ಮತ್ತು ಸೇವೆಗಳ ಬೆಲೆಗಳು)ಗಳೆಂಬ ಸೂಚ್ಯಂಕಗಳು ಬೇರೆಬೇರೆ ರೀತಿಗಳಲ್ಲಿ ಉತ್ಪಾದಕರೊಡನೆ ಮತ್ತು ಗ್ರಾಹಕರೊಡನೆ ಸಂಬಂಧ ಹೊಂದಿರುತ್ತವೆ.

ಗುಜರಾತಿನಲ್ಲಿ ನಡೆದ ಹೈನು ಕ್ರಾಂತಿಯು ಇದಕ್ಕೆ ಒಂದು ದೊಡ್ಡ ಉದಾಹರಣೆ. ಒಂದು ಅಭಿವೃದ್ಧಿಶೀಲ ದೇಶದಲ್ಲಿ ಉತ್ಪನ್ನಗಳ ಬೆಲೆ ಏರಿಕೆಯು ಉತ್ಪಾದನೆಯನ್ನು ಹೆಚ್ಚಿಸಲು ಉತ್ಪಾದಕರಿಗೆ ಪ್ರೇರಣೆಯನ್ನು ನೀಡುತ್ತದೆ ಎಂಬುದನ್ನು ಅದು ಸಾಬೀತುಪಡಿಸಿದೆ. ವಿವಿಧ ಸರಕು ಮತ್ತು ಸೇವೆಗಳ ಬೆಲೆ ಏರಿಳಿತಗಳ ಚಲನೆಯು ಭಿನ್ನಭಿನ್ನವಾಗಿರುತ್ತದೆ. ಆದ್ದರಿಂದ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ನಿಗದಿಯಾಗಿರುವ ಶೇ.4ರ ಹಣದುಬ್ಬರ ದರದ ಮಿತಿಯು ಅತ್ಯಂತ ಕಡಿಮೆಯಾಗಿದೆ. ಹಣದುಬ್ಬರ ದರದ ಲೆಕ್ಕಾಚಾರದಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಪರಿಗಣಿಸುವ ಸರಕು ಸೇವೆಗಳ ಬೆಲೆಯನ್ನು ಆಧರಿಸಿರುವ ಹೆಡ್‌ಲೈನ್ ಹಣದುಬ್ಬರದ ಲೆಕ್ಕಾಚಾರ ಒಂದು ರೀತಿಯಿದ್ದರೆ ಸಿಪಿಐ ಪರಿಗಣಿಸದ ಇತರ ಸರಕು ಮತ್ತು ಸೇವೆಗಳ ಬೆಲೆಗಳನ್ನು ಆಧರಿಸಿದ ಕೋರ್ ಹಣದುಬ್ಬರದ ಲೆಕ್ಕಾಚಾರ ಬೇರೇ ರೀತಿಯಲ್ಲಿರುತ್ತದೆ. ಆದರೆ ಆರ್‌ಬಿಐ ಗವರ್ನರ್ ಅವರು ತಮ್ಮ ಇತ್ತೀಚಿನ ಪತ್ರಿಕಾ ಗೋಷ್ಠಿಯಲ್ಲಿ ‘‘ಶಾಸನವಿರುವುದು ಗ್ರಾಹಕ ಬೆಲೆ ಸೂಚ್ಯಂಕದ ಹೆಡ್‌ಲೈನ್ ಹಣದುಬ್ಬರ ದರವನ್ನು ನಿಯಂತ್ರಿಸುವುದರ ಕುರಿತು. ಆದ್ದರಿಂದ ನಮ್ಮ ನೀತಿಗಳು ಅದನ್ನು ಶೇ.4ರ ಆಸುಪಾಸಿನಲ್ಲಿ ನಿಯಂತ್ರಿಸುವ ದಿಕ್ಕಿನಲ್ಲಿವೆ.’’ ಎಂದು ಹೇಳಿದ್ದಾರೆ. ಹೀಗಾಗಿ ಹಣದುಬ್ಬರವನ್ನು ನಿಯಂತ್ರಿಸುವ ಶಾಸನಾತ್ಮಕ ಗುರಿಗಳು ಮತ್ತು ಸಮಗ್ರವಾದ ಅಭಿವೃದ್ಧಿ ನಿರ್ವಹಣೆಗಳ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಕಾಲ ಸರಕಾರ ಮತ್ತು ಆರ್‌ಬಿಐಗಳೆರಡಕ್ಕೂ ಬಂದಾಗಿದೆ.

ಇಂದು ಆರ್ಥಿಕತೆಯಲ್ಲಿ ತುರ್ತು ಅಗತ್ಯವಾಗಿರುವ ಹಣಕಾಸು ಉಳಿತಾಯವನ್ನು ಉತ್ತೇಜಿಸುವುದು ಆರ್‌ಬಿಐನ ಗುರಿಯಾಗಿರಬೇಕು: ಇದಕ್ಕಾಗಿ ಅದು ಬ್ಯಾಂಕುಗಳಲ್ಲಿ ಹಣವನ್ನು ನಿಯೋಜಿಸಿರುವ ಖಾತೆದಾರರಿಗೆ ಒಂದು ಸಕಾರಾತ್ಮಕ ಮತ್ತು ನೈಜ ಬಡ್ಡಿ ದರವನ್ನು ನೀಡಬೇಕು, ಏಕೆಂದರೆ ಈಗಲೂ ಜನಸಮುದಾಯಗಳಿಗೆ ಸುಲಭವಾಗಿ ಹಣವನ್ನು ಉಳಿತಾಯ ಮಾಡಬಹುದಾದ ಮಾರ್ಗ ಅದೊಂದೇ ಆಗಿದೆ; ಹಣಕಾಸು ಉಳಿತಾಯ ಮಾಡುವವರಲ್ಲಿ ಪ್ರಧಾನವಾದವರು ಸಣ್ಣ ಉಳಿತಾಯದಾರರೇ ಆದರೂ ವಿತ್ತೀಯ ಉತ್ತೇಜನಗಳನ್ನು ಘೋಷಿಸುವಾಗ ಈ ಸಣ್ಣ ಉಳಿತಾಯದಾರರನ್ನು ಸಾಮಾನ್ಯವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ಸಣ್ಣ ಉಳಿತಾಯದಾರರಿಗೆ ದಕ್ಕುವಂತಹ ವಿತ್ತೀಯ ಉತ್ತೇಜನ ಯೋಜನೆಗಳನ್ನು ರೂಪಿಸಬೇಕು. ಇದರರ್ಥ ಈ ಹಿಂದಿನ ಕಠಿಣ ಬಡ್ಡಿದರ ನಿಯಂತ್ರಣ ವ್ಯವಸ್ಥೆಗೆ ಹಿಂದಿರುಗಬೇಕಂತಲ್ಲ.

ಬದಲಿಗೆ ಒಂದು ವರ್ಷದ ತನಕ ಹಣವನ್ನು ಹೂಡಿಕೆ ಮಾಡುವ ಉಳಿತಾಯದಾರರಿಗೆ ಏನಿಲ್ಲವೆಂದರೂ ಹಿಂದಿನ ವರ್ಷದ ಗ್ರಾಹಕ ಬೆಲೆ ಸೂಚ್ಯಂಕದ ಹಣದುಬ್ಬರ ದರಮೇಲೆ ಮೇಲೆ ಶೇ.2ರಷ್ಟು ಬಡ್ಡಿ ದರವನ್ನು ಕೊಡುವಂಥ ಏಕಸೂತ್ರವನ್ನಾದರೂ ಅನುಸರಿಸುವಂತಾಗಬೇಕು. ಇನ್ನುಳಿದ ಉಳಿತಾಯ ಹೂಡಿಕೆ ಬಡ್ಡಿ ದರ, ಪೋಸ್ಟಲ್ ಉಳಿತಾಯ ದರಗಳು ಕ್ರಮೇಣವಾಗಿ ಇದೇ ಮಾರ್ಗವನ್ನು ಅನುಸರಿಸುತ್ತವೆ. ಇದರಿಂದ ಬ್ಯಾಂಕುಗಳ ನಿಧಿಗಳ ಮೇಲಿನ ಹೆಚ್ಚಿನ ಹೊರೆಯು ಬಿದ್ದರೂ ಅದನ್ನು ಇಂತಹ ನಿಧಿಗಳ ನಿರ್ವಹಣೆಯ ವೆಚ್ಚಕ್ಕೆಂದೇ ಬ್ಯಾಂಕುಗಳಿಗೆ ನಿಗದಿಯಾಗಲ್ಪಟ್ಟ ಕೋಶದಿಂದ ಒದಗಿಸಬಹುದು. ಬ್ಯಾಂಕುಗಳು ಕ್ರೋಡೀಕರಿಸಿರುವ ಉಳಿತಾಯ ಮೊತ್ತವನ್ನು ಅಭಿವೃದ್ಧಿ ಯೋಜನೆಗಳಿಗೆ ವ್ಯಯ ಮಾಡುವ ವಿಷಯದಲ್ಲಿ ಬ್ಯಾಂಕುಗಳ ಆಡಳಿತ ವರ್ಗ ದೊಡ್ಡ ಮೊತ್ತದ ಸಾಲಗಳನ್ನು ಪಡೆದುಕೊಂಡು ವಾಪಸ್ ಮಾಡದ ದೊಡ್ಡ ಕಾರ್ಪೊರೇಟ್ ಕಂಪೆನಿಗಳಿಂದ ಉಂಟಾಗಿರುವ ವಸೂಲಾಗದ ಸಾಲದ ಸಮಸ್ಯೆಯಿಂದ (ನಾನ್ ಪರ್‌ಫಾರ್ಮಿಂಗ್ ಅಸೆಟ್ಸ್-ಎನ್‌ಪಿಎ) ಆತಂಕಕ್ಕೊಳಗಾಗಿದ್ದಾರೆ.

ಮತ್ತೊಂದೆಡೆ ಭಾರತದ ಆರ್ಥಿಕತೆಯಲ್ಲಿ ಪ್ರಧಾನವಾಗಿರುವ ಅಸಂಘಟಿತ ಕ್ಷೇತ್ರವನ್ನು ಬ್ಯಾಂಕುಗಳು ಕಡೆಗಣಿಸಿವೆ. ಭಾರತೀಯ ಬ್ಯಾಂಕುಗಳು ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಕ್ಷೇತ್ರದ ಸಾಧ್ಯತೆಗಳನ್ನು ಪೂರ್ಣ ಬಳಕೆ ಮಾಡಿಕೊಂಡಿಲ್ಲ. ಹೀಗಾಗಿಯೇ ಭಾರತದ ಜಿಡಿಪಿ ಮತ್ತು ಬ್ಯಾಂಕುಗಳ ಖಾಸಗಿ ಸಾಲದ ಅನುಪಾತವು ಶೇ.52ರಷ್ಟು ಕಡಿಮೆ ಇದೆ. ಆದರೆ ಉಳಿದ ದೇಶಗಳಲ್ಲಿ ಅದು ಶೇ.110ರಷ್ಟಿವೆ. ಇಂತಹ ದೊಡ್ಡ ಕ್ಷೇತ್ರದ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಬ್ಯಾಂಕುಗಳು ಯಾವ ಉಪಕರಣಗಳನ್ನು ಬಳಸಬೇಕು ಮತ್ತು ಯಾವ ಸಂಘಟನಾ ರಚನೆಗಳನ್ನು ರೂಪಿಸಿಕೊಳ್ಳಬೇಕೆಂಬ ಬಗ್ಗೆ ಅರ್ಥಪೂರ್ಣವಾದ ಚಿಂತನೆಗಳು ನಡೆಯಬೇಕಿವೆ. ಹಲವಾರು ಕೈಗಾರಿಕಾ ಅಭಿವೃದ್ಧಿ ಬ್ಯಾಂಕುಗಳು ಮುಚ್ಚಿಕೊಂಡಿರುವುದರಿಂದ ಮತ್ತು ಆ ಜಾಗದಲ್ಲಿ ಯಾವ ಬಗೆಯ ಹಣಕಾಸು ಸಂಸ್ಥೆಗಳನ್ನು ಸ್ಥಾಪಿಸಬಹುದೆಂಬ ಬಗ್ಗೆ ಆರ್‌ಬಿಐ ಒಂದೂವರೆ ವರ್ಷದ ಹಿಂದೆ ಕೊಟ್ಟಿರುವ ಶಿಫಾರಸುಗಳು ಇನ್ನೂ ಜಾರಿಗೆ ಬರದಿರುವುದರಿಂದಲೂ ದೇಶದ ಕೈಗಾರಿಕಾ ಅಭಿವೃದ್ಧಿ ಕುಂಠಿತವಾಗಿದೆ.

ಏಕೆ ಹೀಗಾಯಿತೆಂದು ಕಂಡುಹಿಡಿದುಕೊಳ್ಳಲು ಈವರೆಗೆ ಯಾವ ಪ್ರಯತ್ನಗಳೂ ನಡೆದಿಲ್ಲ. ಆರ್‌ಬಿಐ ಮಾಡಿರುವ ಈ ಹೊಸ ಪ್ರಸ್ತಾಪದಲ್ಲಿರುವ ದೊಡ್ಡ ಸೈದ್ಧಾಂತಿಕ ತೊಂದರೆಯೇನೆಂದರೆ ಅದು ಸಂಪೂರ್ಣವಾಗಿ ಖಾಸಗಿ ಕ್ಷೇತ್ರವು ಮುನ್ನಡೆಸುವ ನಾನ್ ಬ್ಯಾಂಕಿಂಗ್ ಹಣಕಾಸು ಕಂಪೆನಿಗಳನ್ನು ಅವಲಂಬಿಸುವ ಸಲಹೆ ಮಾಡಿದೆ. ಆದರೆ ಸಾರ್ವಜನಿಕ ಕ್ಷೇತ್ರದ ಬೆಂಬಲವಿಲ್ಲದೆ ಇಂತಹ ಸಂಸ್ಥೆಗಳು ಕೈಗಾರಿಕೆಗಳಿಗೆ ಬೇಕಾಗುವ ದೀರ್ಘಕಾಲೀನ ಹಣಕಾಸನ್ನು ಕ್ರೋಡೀಕರಿಸುವುದು ಸಾಧ್ಯವೇ ಇಲ್ಲ. ಹೀಗೆ ದೇಶದ ಅಭಿವೃದ್ಧಿಯ ಈ ಹಂತದಲ್ಲಿ ಒಟ್ಟಾರೆ ಆರ್ಥಿಕತೆಯ ಅಭಿವೃದ್ಧಿಗೆ ಸಂಬಂಧಪಟ್ಟಿರುವ ಹಲವಾರು ವಿಷಯಗಳ ಬಗ್ಗೆ ಸರಕಾರ ಮತ್ತು ಆರ್‌ಬಿಐ ವಿಶೇಷ ಗಮನವಹಿಸಬೇಕಾದ ಅಗತ್ಯವಿರುವುದರಿಂದ ಈ ಎಲ್ಲಾ ವಿಷಯಗಳನ್ನು ಕೂಲಂಕಷವಾಗಿ ಪರಿಗಣಿಸಿ ಸೂಕ್ತವಾದ ಸಲಹೆಗಳನ್ನು ಮತ್ತು ಶಿಫಾರಸುಗಳನ್ನು ಮಾಡಲು ಒಂದು ಉನ್ನತ ಮಟ್ಟದ ಅಧಿಕಾರವುಳ್ಳ ಆಯೋಗವನ್ನು ನೇಮಕ ಮಾಡುವುದು ಅತ್ಯಂತ ಅಗತ್ಯವಾಗಿದೆ.


ಕೃಪೆ: Economic and Political Weekly

share
ಅನು: ಶಿವಸುಂದರ್
ಅನು: ಶಿವಸುಂದರ್
Next Story
X