Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಾ ಮಿಥ್ಯನಾದ

ತಾ ಮಿಥ್ಯನಾದ

ವಾರ್ತಾಭಾರತಿವಾರ್ತಾಭಾರತಿ25 Aug 2018 12:03 AM IST
share
ತಾ ಮಿಥ್ಯನಾದ

ತಾ ಮಿಥ್ಯನಾದ ಮತ್ತೆ ಜಗವೆಲ್ಲವೂ ತನಗೆ ಮಿಥ್ಯ.

ತಾ ತಥ್ಯನಾದ ಮತ್ತೆ ಜಗವೆಲ್ಲವೂ ತನಗೆ ತಥ್ಯ.
ಅಂಗೈಯಲ್ಲಿ ಹಿಡಿದು ಕೈದು ನೋಡದೆ
ಅಲಗು ಕೆಟ್ಟಿತ್ತೆಂದು ಹಲಬುವನಂತಾಗದೆ,
ತನ್ನ ತಾ ಮರೆದು ಅನ್ಯರ ದೆಸೆಯಿಂದ ತನ್ನ ಕೇಳುವನಂತಾಗದೆ
ಅರಿ ನಿಜದರಿವ ಮರೆಯದಂತೆ
ಕಾಲಕರ್ಮವಿರಹಿತ ತ್ರಿಪುರಾಂತಕಲಿಂಗದೊಳಗಾದವನ ಇರವು.
                                -ಕೀಲಾರದ ಭೀಮಣ್ಣ

 
ಕೀಲಾರ ಎಂದರೆ ಗೋಶಾಲೆ. ಕೀಲಾರದ ಭೀಮಣ್ಣ ಕಲ್ಯಾಣದಲ್ಲಿ ಗೋವಳಿಗನಾಗಿ ಜೀವನ ಸಾಗಿಸುತ್ತ ಆ ಅನುಭವದ ಮೂಲಕವೇ ಮಾರ್ಮಿಕ ವಚನಗಳನ್ನು ಬರೆದಿದ್ದಾನೆ. ‘ಗೋವಿಂಗೆ ಹಲವು, ಹಾಲಿಂಗೆ ಏಕ ವರ್ಣ’ ಎಂದು ಆತ ಬೇರೊಂದು ವಚನದಲ್ಲಿ ಹೇಳಿದ್ದಾನೆ. ಆ ಮೂಲಕ ಮಾನವ ಏಕತೆಯನ್ನು ಸೂಚಿಸಿದ್ದಾನೆ. ಮಾನವರು ತಮ್ಮ ಮೂಲವನ್ನು ಅರಿಯಬೇಕು ಮತ್ತು ಬದುಕಿನಲ್ಲಿ ಏಕತೆಯನ್ನು ಸಾಧಿಸಬೇಕು ಎಂಬುದು ಈತನ ಆಶಯವಾಗಿದೆ. ಕೀಲಾರದ ಭೀಮಣ್ಣನ ಸೂಕ್ಷ್ಮ ಚಿಂತನೆಗಳಿಗೆ ಅನುಭವದ ಮೆರುಗಿದೆ. ಧ್ವನಿಪೂರ್ಣವಾದ ಆತನ ವಚನಗಳು ಅನುಭಾವದ ಆನಂದವನ್ನು ನೀಡುತ್ತವೆ.
ನಮ್ಮ ಒಳಲೋಕದಂತೆ ಹೊರ ಲೋಕವಿರುತ್ತದೆ. ಒಳ್ಳೆಯವರ ಕಣ್ಣಿಗೆ ಒಳ್ಳೆಯವರೇ ಬೀಳುತ್ತಾರೆ. ‘ಒಳ್ಳೆಯದರ ಪ್ರತೀಕವಾಗಿರುವ ಧರ್ಮರಾಜನಿಗೆ ಲೋಕದಲ್ಲಿ ಕೆಟ್ಟವರು ಕಾಣುವುದೇ ಇಲ್ಲ. ಕೆಟ್ಟದ್ದರ ಪ್ರತೀಕವಾಗಿರುವ ದುರ್ಯೋಧನನಿಗೆ ಒಳ್ಳೆಯವರು ಕಾಣುವುದೇ ಇಲ್ಲ’ ನಾವು ಹೇಗೆ ಇರುವೆವೋ ಹಾಗೆಯೆ ಜಗತ್ತು ಕಾಣುವುದು.
ಒಳ್ಳೆಯವರು ಒಳ್ಳೆಯದನ್ನೇ ಬಯಸುತ್ತಾರೆ. ಅದಿಲ್ಲದ ಕಡೆಗಳಲ್ಲಿ ಅಂಥದನ್ನು ಸೃಷ್ಟಿಸಲು ಇಷ್ಟಪಡುತ್ತಾರೆ. ನಾವು ಸುಳ್ಳುಗಾರರಾಗಿದ್ದರೆ ಇಡೀ ಜಗತ್ತೇ ಸುಳ್ಳಿನ ಆಗರವಾಗಿ ಕಾಣುತ್ತದೆ. ನಾವು ಸತ್ಯವಂತರಾಗಿದ್ದರೆ ಇಡೀ ಜಗತ್ತೇ ಸತ್ಯ ಎಂಬುದರ ಅರಿವಾಗುತ್ತದೆ. ಆಯುಧವನ್ನು ಕೈಯಲ್ಲಿ ಹಿಡಿದು ಪರೀಕ್ಷಿಸಿ ತೀರ್ಮಾನಕ್ಕೆ ಬರಬೇಕು. ಅದೆಲ್ಲ ಬಿಟ್ಟು ದೂರದಿಂದಲೇ ನೋಡಿ ಖಡ್ಗ ಸರಿಯಿಲ್ಲ ಎಂದು ತೀರ್ಮಾನಿಸಿ ಕೊರಗುವವರ ಹಾಗೆ ನಮ್ಮ ಪರಿಸ್ಥಿತಿ ಆಗಬಾರದು. ಈ ಬದುಕು ಸಕಾರಾತ್ಮಕ ಚಿಂತನೆಯಿಂದ ಕೂಡಿರಬೇಕು. ಅದಕ್ಕಾಗಿ ನಮ್ಮನ್ನು ನಾವೇ ಪರೀಕ್ಷೆಗೆ ಒಳಪಡಿಸಿ, ನಮ್ಮ ಯೋಗ್ಯತೆ ಏನು ಎಂದು ಅರಿಯುವುದು ಅವಶ್ಯವಾಗಿದೆ. ನಮ್ಮನ್ನು ನಾವೇ ಮರೆತು ಬೇರೆಯವರು ನಮ್ಮ ಬಗ್ಗೆ ಹೇಳುವುದರ ಮೂಲಕವೇ ನಮ್ಮನ್ನು ಅರ್ಥೈಸಿಕೊಳ್ಳುವುದು ಬದುಕಿನ ದುರಂತವಾಗಿದೆ. ನಿಜವಾದ ಅರಿವನ್ನು ಪಡೆದ ನಂತರ ಅದನ್ನು ದೈನಂದಿನ ಬದುಕಿನ ತೀವ್ರತೆಗಳಲ್ಲಿ ಮರೆಯದೆ ಕಾಪಾಡಿಕೊಂಡು ಬರಬೇಕಾಗಿದೆ. ಆ ಮೂಲಕ ಬದುಕನ್ನು ಅರ್ಥೈಸಿಕೊಳ್ಳಬೇಕಾಗಿದೆ. ಹೀಗೆ ತನ್ನ ತಾ ಅರಿತು ಬದುಕನ್ನು ಸಕಾರಾತ್ಮಕವಾಗಿ, ಕ್ರಿಯಾಶೀಲವಾಗಿ ಮತ್ತು ಆನಂದಮಯವಾಗಿ ನೋಡುವುದರಲ್ಲೇ ಮಾನವಜನ್ಮದ ಸಾರ್ಥಕತೆ ಇದೆ. ಕಾಲಾತೀತ ಮತ್ತು ಕರ್ಮಾತೀತವಾದ ಇಷ್ಟಲಿಂಗದಲ್ಲಿ ಆಶ್ರಯ ಪಡೆದವನು ಈ ರೀತಿ ಬದುಕುವ ಕಲೆಯನ್ನು ಕಲಿತಿರುತ್ತಾನೆ ಎಂದು ಕೀಲಾರದ ಭೀಮಣ್ಣ ಹೇಳುತ್ತಾನೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X