Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ಒಂದಲ್ಲ ಎರಡಲ್ಲ, ನೂರಾರು ಸತ್ಯ...

ಒಂದಲ್ಲ ಎರಡಲ್ಲ, ನೂರಾರು ಸತ್ಯ ಸಂಗತಿಗಳು!

ವಾರ್ತಾಭಾರತಿವಾರ್ತಾಭಾರತಿ26 Aug 2018 12:08 AM IST
share
ಒಂದಲ್ಲ ಎರಡಲ್ಲ, ನೂರಾರು ಸತ್ಯ ಸಂಗತಿಗಳು!

ಬಾನು ಎಂಬ ದನದ ಜೊತೆಗೆ ಸದಾ ಆಟವಾಡುತ್ತಾ ಕಾಲ ಕಳೆಯುವ ಸಮೀರ ಎಂಬ ಹುಡುಗನೊಬ್ಬ ಹುಲಿಯಂಥ ಮನುಷ್ಯರ ನಡುವೆ ಹೇಗೆ ಕಳೆದು ಹೋಗುತ್ತಾನೆ ಮತ್ತು ಹೇಗೆ ಹುಲಿಗಳನ್ನು ಕೂಡ ಹಸುಗಳಂತೆ ಬದಲಿಸಿ ಮರಳುತ್ತಾನೆ ಎನ್ನುವುದೇ ಚಿತ್ರದ ಒಂದೆಳೆ ಕತೆ. ಹಾಗೆಂದ ಮಾತ್ರಕ್ಕೆ ಇದು ಪುಣ್ಯಕೋಟಿಯ ಡ್ರಾಮಾ ಅಲ್ಲ. ಪ್ರಸ್ತುತ ಸಂದರ್ಭದ ನೈಜವಾದ ಚಿತ್ರಣ.

 ಚಿತ್ರದಲ್ಲಿ ಸಮೀರ ಮುಸ್ಲಿಂ ಸಮುದಾಯದ ಹುಡುಗ. ಆ ಕುಟುಂಬದ ಮಂದಿ ದನ ಸಾಕುವುದರಲ್ಲಿ ಎಷ್ಟೊಂದು ಆತ್ಮೀಯತೆ ಹೊಂದಿದ್ದಾರೆ ಎನ್ನುವುದನ್ನು ಚಿತ್ರ ಮನದಟ್ಟು ಮಾಡಿಸುತ್ತಾ ಹೋಗುತ್ತದೆ. ಸಮೀರನ ಕುಟುಂಬದೊಂದಿಗೆ ಆತ್ಮೀಯತೆ ಹೊಂದಿರುವ ರಾಜಣ್ಣ, ಈ ಘಟನೆಗೆ ಸ್ಪಂದಿಸುವ ರೀತಿ ಸೌಹಾರ್ದದ ಪ್ರತೀಕ. ಸಾಮಾನ್ಯವಾಗಿ ನೈಜ ಘಟನೆಯೊಂದನ್ನು ಚಿತ್ರವಾಗಿಸುವಾಗ ಅದಕ್ಕೆ ಸಾಕಷ್ಟು ಬಣ್ಣಗಳನ್ನು ಸೇರಿಸಲಾಗುತ್ತದೆ. ಆದರೆ ಒಂದೆರಡು ಘಟನೆಗಳನ್ನು ಇಟ್ಟುಕೊಂಡೇ ಸಹಜ ಮನರಂಜನಾ ಚಿತ್ರ ಮಾಡಿದ್ದಾರೆ ಸತ್ಯ ಪ್ರಕಾಶ್. ಇದು ಅವರಿಗೆ ಹೊಸತೇನೂ ಅಲ್ಲ. ಈ ಹಿಂದೆ ‘ರಾಮಾ ರಾಮಾ ರೇ’ ಚಿತ್ರದ ಮೂಲಕ ಇಂಥದೇ ಪ್ರಯೋಗ ಮಾಡಿ ಗೆದ್ದಿದ್ದರು. ಅಲ್ಲಿನಂತೆ ಇಲ್ಲಿಯೂ ಬೀದಿಗಳಲ್ಲೇ ಹೆಚ್ಚು ಕತೆಗಳು ನಡೆಯುತ್ತವೆ ಎನ್ನುವುದನ್ನು ಬಿಟ್ಟರೆ ಬೇರೆ ಯಾವುದೇ ಹೋಲಿಕೆಗಳಿಲ್ಲ.

ನ್ಯಾಯದ ಪರವಾಗಿ ಕೂಗೆತ್ತುವ ಚಿತ್ರಗಳಲ್ಲಿ ಅಪರಾಧದ ವಿಜೃಂಭಣೆ ಸಾಮಾನ್ಯ. ಆದರೆ ಅಪರಾಧದತ್ತ ಹೆಜ್ಜೆ ಹಾಕುವವರನ್ನು ಹಾಸ್ಯಾತ್ಮಕವಾಗಿ ತೋರಿಸುತ್ತಾ, ಸೆಂಟಿಮೆಂಟ್ ವಿಚಾರದಲ್ಲಿ ಅವರು ಶರಣಾಗುವ ದೃಶ್ಯಗಳನ್ನು ಆಪ್ತವಾಗುವಂತೆ ಸೆರೆ ಹಿಡಿಯುವ ಕಲೆ ನಿರ್ದೇಶಕರಿಗೆ ಸಿದ್ದಿಸಿದೆ. ಹಾಗಾಗಿಯೇ ಚಿತ್ರದಲ್ಲಿ ತೊಂಬತ್ತು ಪರ್ಸೆಂಟ್‌ನಷ್ಟು ಹೊಸಮುಖದ ಪ್ರತಿಭೆಗಳಿದ್ದರೂ ಚಿತ್ರ ಕೊನೆಯಾಗುವ ಹೊತ್ತಲ್ಲಿ ಎಲ್ಲರೂ ಮನಸ್ಸಿಗೆ ಆತ್ಮೀಯರಾಗಿ ಬಿಡುತ್ತಾರೆ.

ಸಮೀರನಾಗಿ ಮಾ.ರೋಹಿತ್ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಅನಾರೋಗ್ಯದ ಮುದುಕನಾಗಿ ಎಂ.ಕೆ. ಮಠ ಜೀವಿಸಿದ್ದಾರೆ. ಹುಲಿಯಾಗಿ ಸಾಯಿಕೃಷ್ಣ ಕುಡ್ಲ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ವಾಸುಕಿ ವೈಭವ್ ಸಂಗೀತದ ಹಾಡು ಸಿ. ಅಶ್ವಥ್ ಹಾಕಿಕೊಟ್ಟ ಮಾದರಿಯನ್ನು ನೆನಪಿಸುತ್ತದೆ. ಸಂದರ್ಭಾನುಸಾರವಾಗಿ ಸಾಗುವ ಸಹಜ ಮಾತುಗಳಲ್ಲೇ ಸೃಷ್ಟಿಯಾದಂಥ ಹಾಸ್ಯ ಸಂಭಾಷಣೆಗಳು ಪ್ರೇಕ್ಷಕರಿಗೆ ತಾಜಾ ಲವಲವಿಕೆ ನೀಡುತ್ತವೆ.

ಥಿಯೇಟರ್‌ನಿಂದ ಹೊರಗೆ ಬಂದ ಮೇಲೆಯೂ ‘ಮೆನಿ ಮೆನಿ ರಿಟರ್ನ್ ಆಫ್ ದಿ ಡೇ’ ಎಂಬ ಸಂಭಾಷಣೆ ನೆನಪಾಗಿ ನಗು ಮೂಡಿಸುತ್ತದೆ. ಬಾನುವಿನ ಹುಡುಕಾಟ ತುಸು ಹೆಚ್ಚೇ ಅನಿಸಿದರೂ ಕೂಡ ಹುಡುಕುತ್ತಾ ನಮ್ಮದೇ ಮನದೊಳಗಿನ ಹುಡುಕಾಟಕ್ಕೆ ನಾಂದಿಯಾಗುವ ಕಾರಣ ಅದನ್ನು ಕ್ಷಮಿಸಬಹುದು. ಚಿತ್ರದಲ್ಲಿ ಹೇಳುವಂತೆ ಕಳೆದುಕೊಳ್ಳುವುದರ ನೋವು ಕಳೆದುಕೊಂಡವರಿಗಷ್ಟೇ ಗೊತ್ತು. ಹಾಗಾಗಿ ಕನ್ನಡ ಚಿತ್ರಪ್ರೇಮಿಗಳು ಇಂಥದೊಂದು ಚಿತ್ರವನ್ನು ನೋಡುವ ಅವಕಾಶ ಕಳೆದುಕೊಳ್ಳಬಾರದು.

ಕಲಾವಿದರು: ಮಾ. ರೋಹಿತ್, ನಾಗಭೂಷಣ್, ಸಾಯಿಕೃಷ್ಣ ಕುಡ್ಲ, ಎಂ.ಕೆ. ಮಠ ಮತ್ತಿತರರು
ನಿರ್ದೇಶಕ: ಸತ್ಯ ಪ್ರಕಾಶ್
ನಿರ್ಮಾಪಕಿ: ಸ್ಮಿತಾ ಉಮಾಪತಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X