Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಿಮ್ಮ ಬೆರಳುಗಳು ನಿರಿಗೆಗಟ್ಟುತ್ತಿವೆಯೇ...

ನಿಮ್ಮ ಬೆರಳುಗಳು ನಿರಿಗೆಗಟ್ಟುತ್ತಿವೆಯೇ ? ಕಾರಣಗಳಿಲ್ಲಿವೆ.....

ವಾರ್ತಾಭಾರತಿವಾರ್ತಾಭಾರತಿ26 Aug 2018 4:51 PM IST
share
ನಿಮ್ಮ ಬೆರಳುಗಳು ನಿರಿಗೆಗಟ್ಟುತ್ತಿವೆಯೇ ? ಕಾರಣಗಳಿಲ್ಲಿವೆ.....

ಪಾತ್ರೆಗಳನ್ನು ತೊಳೆಯುವಾಗ,ಬಟ್ಟೆಗಳನ್ನು ಒಗೆಯುತ್ತಿದ್ದಾಗ ಅಥವಾ ಸ್ನಾನ ಮಾಡುತ್ತಿದ್ದಾಗ ಕೈಗಳು ನಿರಂತರವಾಗಿ ನೀರಿಗೆ ತೆರೆದುಕೊಂಡಿದ್ದರೆ ಬೆರಳುಗಳ ತುದಿಗಳು ನಿರಿಗೆಗಟ್ಟಿರುವುದನ್ನು ನೀವು ಗಮನಿಸಿರಬಹುದು. ನೆನೆದ ವಸ್ತುಗಳನ್ನು ಅಥವಾ ನೀರಿನಲ್ಲಿ ವಸ್ತುಗಳನ್ನು ಹಿಡಿದುಕೊಳ್ಳಲು ನಿರಿಗೆಗಟ್ಟಿದ ಬೆರಳುಗಳು ನೆರವಾಗಬಹುದು. ಕೈಗಳು ಮತ್ತು ಕಾಲುಗಳ ಬೆರಳುಗಳು ಸುದೀರ್ಘ ಸಮಯ ನೀರಿನ ಸಂಪರ್ಕದಲ್ಲಿದ್ದರೆ ಅವುಗಳ ತುದಿಗಳು ನಿರಿಗೆಗಟ್ಟುತ್ತವೆ. ಇದನ್ನು ‘ಪ್ರುನಿ ಫಿಂಗರ್ಸ್’ ಎಂದು ಕರೆಯಲಾಗುತ್ತದೆ. ಆದರೆ ಬೆರಳುಗಳು ನೀರಿನಲ್ಲಿ ಮುಳುಗಿರದಿದ್ದಾಲೂ ನಿರಿಗೆಗಟ್ಟಿದ್ದರೆ ಅದು ಅನಾರೋಗ್ಯದ ಲಕ್ಷಣವಾಗಿರಬಹುದು.

ನರಮಂಡಲ ವ್ಯವಸ್ಥೆಯು ಸಂಕುಚಿತಗೊಳ್ಳುವಂತೆ ರಕ್ತನಾಳಗಳಿಗೆ ಸಂದೇಶವನ್ನು ರವಾನಿಸಿದಾಗ ಬೆರಳುಗಳ ತುದಿಗಳು ನಿರಿಗೆಗಟ್ಟುತ್ತವೆ. ಸಂಕುಚಿತ ರಕ್ತನಾಳಗಳು ಬೆರಳತುದಿಗಳ ಗಾತ್ರವನ್ನು ಸ್ವಲ್ಪ ಕುಗ್ಗಿಸುತ್ತವೆ,ಇದರಿಂದಾಗಿ ಚರ್ಮವು ಮಡಿಕೆಗೊಂಡು ನಿರಿಗೆಗಳು ಉಂಟಾಗುತ್ತವೆ. ಬೆರಳ ತುದಿಗಳು ನಿರಿಗೆಗಟ್ಟಲು ವೈದ್ಯಕೀಯ ಕಾರಣಗಳಿಲ್ಲಿವೆ...

►ನಿರ್ಜಲೀಕರಣ

ನಾವು ಸಾಕಷ್ಟು ನೀರನ್ನು ಕುಡಿಯದಿದ್ದಾಗ ಚರ್ಮವು ಸ್ವಲ್ಪ ಪ್ರಮಾಣದಲ್ಲಿ ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ಕಳೆದುಕೊಳ್ಳುತ್ತದೆ ಮತ್ತು ನಿರಿಗೆಗಳು ಮೂಡುತ್ತವೆ. ನಿರ್ಜಲೀಕರಣದಿಂದಾಗಿ ಚರ್ಮವು ಒಣಗಿರುವಂತೆ ಕಂಡುಬರುತ್ತದೆ.

►ಮಧುಮೇಹ

ಮಧುಮೇಹವು ರಕ್ತದಲ್ಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಶರೀರದ ಕಾರ್ಯ ನಿರ್ವಹಣೆಗೆ ತೊಡಕನ್ನುಂಟು ಮಾಡುತ್ತದೆ. ಯಾವುದೇ ವಿಧದ ಮಧುಮೇಹದಲ್ಲಿ ರಕ್ತದಲ್ಲಿ ಸಕ್ಕರೆಯ ಮಟ್ಟವು ಅಧಿಕವಾದಾಗ ಅದು ಬೆರಳುಗಳು ನಿರಿಗೆಗಟ್ಟಲು ಕಾರಣವಾಗುತ್ತದೆ. ಅದು ಬೆವರು ಗ್ರಂಥಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಬೆವರಿನ ಕೊರತೆಯು ಚರ್ಮದ ಒಣಗುವಿಕೆಗೆ ಕಾರಣವಾಗುತ್ತದೆ.

►ಕಜ್ಜಿ

ಕಜ್ಜಿಯು ಚರ್ಮದ ಸಮಸ್ಯೆಯಾಗಿದ್ದು,ಚರ್ಮದ ಉರಿಯೂತ, ತುರಿಕೆ, ಕೆಂಪಾಗುವಿಕೆ ಮತ್ತು ದದ್ದುಗಳಿಗೆ ಕಾರಣವಾಗುತ್ತದೆ. ಈ ರೋಗವು ಚರ್ಮವನ್ನು ಒಣಗಿಸಿ,ಅದು ನಿರಿಗೆಗಟ್ಟುವಂತೆ ಮಾಡುತ್ತದೆ.

►ರೇನಾಡ್ಸ್ ಕಾಯಿಲೆ

ಇದು ಕೈಬೆರಳು ಮತ್ತು ಕಾಲ್ಬೆರಳುಗಳು ಸೇರಿದಂತೆ ಶರೀರದ ಅತ್ಯಂತ ಚಿಕ್ಕ ಭಾಗಗಳಿಗೆ ರಕ್ತವನ್ನು ಪೂರೈಸುವ ಸಣ್ಣ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುವ ರೋಗವಾಗಿದೆ. ನಾವು ಅತ್ಯಂತ ಹೆಚ್ಚಿನ ಚಳಿಗೆ ಒಡ್ಡಿಕೊಂಡಾಗ ಈ ರೋಗವು ಕಾಣಿಸಿಕೊಳ್ಳುತ್ತದೆ. ಬೆರಳುಗಳು ಬಿಳಿ ಅಥವಾ ನೀಲಿ ಬಣ್ಣಕ್ಕೆ ತಿರುಗುವುದು, ಮರಗಟ್ಟುವಿಕೆ ಮತ್ತು ಜುಮುಗುಡುವಿಕೆ ಇದರ ಲಕ್ಷಣಗಳಾಗಿವೆ.

►ಥೈರಾಯ್ಡ ಕಾಯಿಲೆ

 ಥೈರಾಯ್ಡ ಕಾಯಿಲೆಯಿರುವವರಲ್ಲಿ ನಿರಿಗೆಗಟ್ಟಿದ ಬೆರಳುಗಳು ಮತ್ತು ಚರ್ಮದಲ್ಲಿ ದದ್ದುಗಳು ಉಂಟಾಗಬಹುದು. ಹೈಪೊಥೈರಾಯ್ಡಿಸಂ ಚಯಾಪಚಯವನ್ನು ನಿಧಾನಗೊಳಿಸಿ ಶರೀರದ ಉಷ್ಣತೆಯನ್ನು ತಗ್ಗಿಸುವುದರಿಂದ ಬೆರಳುಗಳನ್ನು ನಿರಿಗೆಗಟ್ಟಿಸುವ ಹೆಚ್ಚಿನ ಸಾಧ್ಯತೆಯಿರುತ್ತದೆ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯವಾಗಿದೆ. ಶರೀರದ ಉಷ್ಣತೆ ಕಡಿಮೆಯಾದಾಗ ಬೆರಳುಗಳಲ್ಲಿಯ ರಕ್ತನಾಳಗಳು ಉಷ್ಣತೆಯ ನಷ್ಟವನ್ನು ತಡೆಯಲು ಸಂಕುಚಿತಗೊಳ್ಳುತ್ತವೆ ಮತ್ತು ಚರ್ಮವು ನಿರಿಗೆಗಟ್ಟುತ್ತದೆ.

►ಲಿಂಫೆಡೆಮಾ

 ತೋಳುಗಳು ಮತ್ತು ಕಾಲುಗಳಲ್ಲು ಊತವುಂಟಾದಾಗ ಲಿಂಫೆಡೆಮಾ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್‌ಗೆ ಚಿಕಿತ್ಸೆ ಸಂದರ್ಭದಲ್ಲಿ ದುಗ್ಧಗ್ರಂಥಿಗಳಿಗೆ ಹಾನಿಯಾಗಿದ್ದರೆ ಅಥವಾ ಅವುಗಳನ್ನು ತೆಗೆದುಹಾಕಿದ್ದರೆ ದುಗ್ಧರಸ ವ್ಯವಸ್ಥೆಗೆ ತಡೆಯುಂಟಾದಾಗ ಈ ಊತ ಉಂಟಾಗುತ್ತದೆ. ದುಗ್ಧರಸವು ಸರಿಯಾಗಿ ಹರಿದು ಹೋಗದೆ ಶೇಖರಗೊಳ್ಳುವುದು ಊತಕ್ಕೆ ಕಾರಣವಾಗುತ್ತದೆ. ಇದು ಬೆರಳುಗಳ ಮೇಲೆ ಪರಿಣಾಮ ಬೀರಿ ನಿರಿಗೆಗಳನ್ನುಂಟು ಮಾಡುತ್ತದೆ.

►ವೈದ್ಯರನ್ನು ಯಾವಾಗ ಕಾಣಬೇಕು?

ನೀರಿನ ಸಂಪರ್ಕದಿಂದ ಬೆರಳುಗಳು ನಿರಿಗೆಗಟ್ಟಿದ್ದರೆ ಚಿಂತಿಸಬೇಕಿಲ್ಲ,ಏಕೆಂದರೆ ಸ್ವಲ್ಪ ಸಮಯದ ಬಳಿಕ ಒಣಗಿದ ನಂತರ ಚರ್ಮವು ಮೊದಲಿನ ಸ್ಥಿತಿಗೆ ಮರಳುತ್ತದೆ. ಆದರೆ ನೀರಿನ ಸಂಪರ್ಕವಿಲ್ಲದೆ ಬೆರಳು ನಿರಿಗೆಗಟ್ಟಿದ್ದರೆ ಅದಕ್ಕೆ ಮೇಲಿನ ಕಾಯಿಲೆಗಳು ಕಾರಣವಾಗಿರಬಹುದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X