Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಗೋವು ಮೊದಲು ಚತುಃಪಾದಿ ಜೀವಂಗಳು

ಗೋವು ಮೊದಲು ಚತುಃಪಾದಿ ಜೀವಂಗಳು

ವಾರ್ತಾಭಾರತಿವಾರ್ತಾಭಾರತಿ28 Aug 2018 12:01 AM IST
share
ಗೋವು ಮೊದಲು ಚತುಃಪಾದಿ ಜೀವಂಗಳು

ಗೋವು ಮೊದಲು ಚತುಃಪಾದಿ ಜೀವಂಗಳು

ತಾವು ಬಂದ ಹಾದಿಯ ಮೂಸಿ ನೋಡಿ ತಮ್ಮಯ
ಬೀಡಿಂಗೆ ಹೋಹಂತೆ,
ಆ ಪರಿ ನಿನಗಿಲ್ಲ, ಪಶುವಿನ ಮತಿಯಷ್ಟು ಗತಿಯಿಲ್ಲ.
ಬಂದುದ ಮರೆದ ಬಂಧಜೀವಿಗ ನಾನಾಗಿ
ಜೀವಕಾಯದ ಸಂದ ಬಿಡಿಸು.
ಬಿಂದು ನಿಲುವ ಅಂದವ ಹೇಳು,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

                                      -ಕೋಲ ಶಾಂತಯ್ಯ

ವೇತ್ರಧರ ಎಂದರೆ ವೇತ್ರ (ಬೆತ್ತ)ದ ಕೋಲನ್ನು ಹಿಡಿದಿರುವ ದ್ವಾರಪಾಲಕ. ಈ ಕಾಯಕದವನಿಗೆ ಕಟ್ಟಿಗೆಕಾರ ಮತ್ತು ದಂಡಧರ ಎಂದೂ ಕರೆಯುತ್ತಾರೆ. ಕಲ್ಯಾಣದ ಪ್ರಧಾನಿ ಬಸವಣ್ಣನವರ ಸಭೆ, ಸಮಾರಂಭ ಮುಂತಾದ ಕಡೆಗಳಲ್ಲಿ ಜನರನ್ನು ನಿಯಂತ್ರಿಸುತ್ತ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಈತನ ಕಾಯಕ. ಕೋಲ ಶಾಂತಯ್ಯ ಈ ಕಾಯಕದ ಶರಣನಾಗಿದ್ದ. ಅಲ್ಲದೆ ಮೂಲತಃ ಪಶುಪಾಲನೆಯ ಅನುಭವವನ್ನೂ ಹೊಂದಿದ್ದ. ಅಂತೆಯೆ ಪ್ರಾಣಿಗಳು ಮತ್ತು ಜನರ ಮಧ್ಯದ ಅಂತರವನ್ನು ಸೂಕ್ಷ್ಮವಾಗಿ ಅರಿಯುವಲ್ಲಿ ಆತ ಸಫಲನಾಗಿದ್ದಾನೆ.
ಆಕಳು ಮೊದಲಾದ ಪ್ರಾಣಿಗಳು ತಮ್ಮ ಕೊಟ್ಟಿಗೆಯಿಂದ ಅಡವಿಗೆ ಮೇಯಲು ಹೋಗುತ್ತವೆ. ಗುಡ್ಡ ಬೆಟ್ಟ ಸುತ್ತುತ್ತವೆ. ‘ಮಲೆನಾಡುಗಿಡ್ಡ’ ಎಂಬ ತಳಿಯ ಕುಳ್ಳಹಸುಗಳು ದುರ್ಗಮ ಬೆಟ್ಟದ ತುದಿಯಲ್ಲೂ ಮೇಯಲು ಹೋಗುತ್ತವೆ. ಆದರೆ ಗೋಧೂಳಿ ಸಮಯದಲ್ಲಿ ಮನೆಯ ಹಾದಿ ಹಿಡಿಯುತ್ತವೆ. ಆ ಬೆಟ್ಟ ಗುಡ್ಡಗಳಿಂದ ಕೂಡಿದ ಅರಣ್ಯ ಪ್ರದೇಶದಲ್ಲಿ ಕಳೆದುಕೊಳ್ಳದೆ ತಮ್ಮ ಕೊಟ್ಟಿಗೆಯಲ್ಲಿ ಬಂದು ನಿಲ್ಲುತ್ತವೆ. ಹೀಗೆ ಬರಲಿಕ್ಕೆ ಅವುಗಳಿಗೆ ಸಾಧ್ಯ ಹೇಗಾಗುವುದೆಂದರೆ, ಅವು ಹೋಗುವಾಗಲೇ ತಮ್ಮ ದಾರಿಯನ್ನು ಮೂಸಿ ನೋಡುತ್ತ ಗುರುತಿಸಿಕೊಂಡಿರುತ್ತವೆ. ಮರಳಿ ಬರುವಾಗ ಆ ಅರಿವಿನಿಂದಲೇ ಸರಿಯಾಗಿ ಬಂದು ಮನೆ ಸೇರುತ್ತವೆ. ಮಾನವರಿಗೆ ಈ ಪರಿಜ್ಞಾನವಿಲ್ಲ. ಪಶುವಿಗೆ ಇರುವಷ್ಟು ಕೂಡ ಬುದ್ಧಿಯ ಆಧಾರ ಅವರಿಗಿಲ್ಲ. ನಾವು ಈ ಭೂಮಿಗೆ ಬಂದ ದಾರಿಯನ್ನು ಮರೆತಿದ್ದೇವೆ. ವಸ್ತುಮೋಹದಿಂದ ಕೂಡಿದ ಇಹದ ಬಂಧನಕ್ಕೊಳಗಾದ ಜೀವಿಗಳಾಗಿದ್ದೇವೆ. ಮಾನವರು ಈ ಗೊಂದಲದಿಂದ ಪಾರಾಗಲೇ ಬೇಕಾಗಿದೆ. ಆದ್ದರಿಂದ ದೇವರೇ ಈ ಜೀವ ಮತ್ತು ದೇಹದ ತೊಡಕನ್ನು ಬಿಡಿಸು. ಈ ಸೃಷ್ಟಿಕ್ರಿಯೆಯ ರೀತಿಯನ್ನು ತಿಳಿಸು ಎಂದು ದೇವರಲ್ಲಿ ಕೋಲ ಶಾಂತಯ್ಯ ಬೇಡಿಕೊಳ್ಳುತ್ತಾನೆ.
 ಕೋಲ ಶಾಂತಯ್ಯನಂಥ ಜನಸಾಮಾನ್ಯರು ಬಸವಣ್ಣನವರ ಪರಿಸರದಲ್ಲಿ ಅನುಭಾವಿಗಳಾಗಿ ಬೆಳೆದು ವಚನ ರಚನೆ ಮಾಡಿದ್ದು ಅನುಪಮ ಘಟನೆಯಾಗಿದೆ. ಬಸವಣ್ಣನವರು ಎಲ್ಲ ಮಾನವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರಿಸಿದರು. ಪ್ರತಿಯೊಬ್ಬರಲ್ಲಿ ಆಶಾವಾದ ಪಲ್ಲವಿಸುವಂತೆ ಮಾಡಿದರು. ತಮ್ಮ ಅನುಭವದ ಮೂಲಕವೇ ಬದುಕನ್ನು ಅರ್ಥೈಸಿಕೊಳ್ಳುವುದನ್ನು ಕಲಿಸಿದರು. ಜೀವಕಾರುಣ್ಯದಿಂದ ಕೂಡಿದ ಸ್ವಾಭಿಮಾನವನ್ನು ಬೆಳೆಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X