Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. "ನನ್ನೂರ ಜನರ ಮೃತದೇಹಗಳನ್ನು ನನ್ನ...

"ನನ್ನೂರ ಜನರ ಮೃತದೇಹಗಳನ್ನು ನನ್ನ ಕೈಯ್ಯಾರೆ ಮಣ್ಣಿನಿಂದ ಹೊರತೆಗೆಯುವಂತಾಯಿತು"

ಮೃತದೇಹಗಳ ಹುಡುಕಾಟದಲ್ಲಿ ಕಣ್ಣೀರಾದ ಸುಬೇದಾರ್ ಮೇಜರ್ ಕುಟ್ಟಂಡ ಬೋಪಣ್ಣ

ವಾರ್ತಾಭಾರತಿವಾರ್ತಾಭಾರತಿ29 Aug 2018 7:53 PM IST
share
ನನ್ನೂರ ಜನರ ಮೃತದೇಹಗಳನ್ನು ನನ್ನ ಕೈಯ್ಯಾರೆ ಮಣ್ಣಿನಿಂದ ಹೊರತೆಗೆಯುವಂತಾಯಿತು

ಮಡಿಕೇರಿ, ಆ.28 : ಕಾವೇರಿ ನದಿಯ ತವರೂರು ಕೊಡಗು ಇಂದು ಜಲಸ್ಫೋಟದಿಂದ ನಲುಗಿ ಹೋಗಿದೆ. ನದಿ ನೀರಿನಿಂದ ಗ್ರಾಮಸ್ಥರ ಬದುಕು ಅಷ್ಟೊಂದು ನರಕವಾಗದಿದ್ದರೂ ಕಾವೇರಿಗೆ ಅಲಂಕಾರದಂತ್ತಿದ್ದ ಬೆಟ್ಟಗುಡ್ಡಗಳಿಂದ ಇಂದು ಮರೆಯಲಾಗದ ಹಾನಿಯಾಗಿದೆ, ನೋವಾಗಿದೆ, ಸಾವಾಗಿದೆ. ನಮ್ಮೂರು, ನಮ್ಮವರು ಎಂದು ಎಲ್ಲರೊಂದಿಗೆ ನಮ್ಮವರೆಲ್ಲರೂ ಭಾಗಿಯಾಗಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದವರನ್ನು ರಕ್ಷಿಸಿ, ಪೋಷಿಸುತ್ತಿರುವುದು ಸ್ವಾಭಿಮಾನಿ ಕೊಡಗಿನ ಗುಣಕ್ಕೆ ಸಾಕ್ಷಿಯಾಗಿದೆ. ಹೀಗೆ ನಮ್ಮವರೆಂದು ಕನಿಕರ ತೋರಿ ಮತ್ತು ಕರ್ತವ್ಯ ಪ್ರಜ್ಞೆ ಮೆರೆದು ಮೂರು ಮೃತದೇಹಗಳ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದವರು ಸುಬೇದಾರ್ ಮೇಜರ್ ಕುಟ್ಟಂಡ ಬೋಪಣ್ಣ.

ಕಾಫಿ ತೋಟಗಳಿಂದ ಕಂಗೊಳಿಸುತ್ತಿದ್ದ ಮೇಘತ್ತಾಳು ಗ್ರಾಮ ಕುಸಿದು ಕಣ್ಮರೆಯಾದ ಪ್ರದೇಶದಲ್ಲಿ ಇಂದು ಸ್ಮಶಾನ ಮೌನವಿದೆ. ಮನೆಯ ಮೇಲೆ ಬೆಟ್ಟ ಕುಸಿದ ಪರಿಣಾಮ ಇಲ್ಲಿನ ನಿವಾಸಿ ಚಂದ್ರಾವತಿ (58) ಹಾಗೂ ಅವರ ಪುತ್ರ ಉಮೇಶ್ (32) ಭೂಸಮಾಧಿಯಾಗಿದ್ದರು. ಮೇಘತ್ತಾಳು ಗ್ರಾಮವೇ ದುರ್ಗಮ ಕಣಿವೆಯಾಗಿ ಪರಿವರ್ತನೆಯಾಗಿತ್ತು. ಸಾವಿರಾರು ಅಡಿ ಪ್ರಪಾತ, ಕುತ್ತಿಗೆಯವರೆಗೆ ಹೂಳುವ ಕೆಸರು, ಅಲ್ಲಿ ಮನೆಗಳು ಇತ್ತು ಎಂಬ ಬಗ್ಗೆ ಸಣ್ಣ ಕುರುಹು ಕೂಡಾ ಸಿಗದ ರೀತಿಯಲ್ಲಿ ಚಂದ್ರಾವತಿಯವರ ಮನೆ ನಿರ್ನಾಮವಾಗಿತ್ತು. 

ಇಂತಹ ಅಪಾಯಕಾರಿ ಕಂದಕಕ್ಕೆ ಒಬ್ಬರಿಗೊಬ್ಬರು ಹಗ್ಗ ಕಟ್ಟಿಕೊಂಡು ಇಳಿದ ಡೋಗ್ರಾ ರೆಜಿಮೆಂಟ್‍ನ ಯೋಧರು ಹಾಗೂ ಸುಬೇದಾರ್ ಮೇಜರ್ ಕುಟ್ಟಂಡ ಬೋಪಣ್ಣ ಮನೆ ಇತ್ತು ಎಂದು ಹೇಳಲಾದ ಪ್ರದೇಶದಿಂದ ಅಂದಾಜು 500 ಅಡಿ ದೂರದ ವರೆಗೂ ಕೆಸರಿನಲ್ಲಿ ಮೃತದೇಹಕ್ಕಾಗಿ ಜೀವದ ಹಂಗು ತೊರೆದು ಹುಡುಕಾಡಿದರು. 3 ಅಡಿ ಕೆಸರಿನಲ್ಲಿ ಹೂತಿದ್ದ ಎರಡು ಮೃತದೇಹಗಳನ್ನು ಸುಬೇದಾರ್ ಮೇಜರ್ ಬೋಪಣ್ಣ ಪತ್ತೆ ಹಚ್ಚಿ ಉಳಿದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಬಳಿಕ ಹಗ್ಗದ ಸಹಾಯದಿಂದ ತಾಯಿ, ಮಗನ ಮೃತದೇಹವನ್ನು ಅಂದಾಜು 2 ಸಾವಿರ ಅಡಿ ಪ್ರಪಾತದಿಂದ ಸೈನಿಕರು ಮತ್ತು ಸ್ಥಳೀಯರು ಹೊತ್ತು ತಂದರು. ಉದಯಗಿರಿಯಲ್ಲಿ ಭೂ ಕುಸಿತದಿಂದ ಮೃತಪಟ್ಟ ಬಾಬು (58) ಅವರ ಮೃತದೇಹವನ್ನು ಕೂಡ ಸುಬೇದಾರ್ ಮೇಜರ್ ಬೋಪಣ್ಣ ಹೊರತೆಗೆದಿದ್ದಾರೆ. 1.05 ಕಿ.ಮೀ. ದೂರ ಕೊಚ್ಚಿಹೋಗಿದ್ದ 10 ಅಡಿ ಆಳದಲ್ಲಿ ಸಿಲುಕಿದ್ದ ಮೃತದೇಹವನ್ನು ಬೋಪಣ್ಣ ಹಾಗೂ ಸ್ಥಳೀಯ ಯುವಕರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.

ಹಿಂದೆಂದೂ ಕಂಡು ಕೇಳರಿಯದ ಮಹಾಮಳೆಯಿಂದ ಭೂ ಕುಸಿದು ಹಲವು ಮಂದಿ ಭೂ ಸಮಾಧಿಯಾಗಿದ್ದು, ನಾಪತ್ತೆಯಾದ ಮೃತದೇಹಗಳಿಗೆ ಇಂದಿಗೂ ಶೋಧ ಕಾರ್ಯ ಮುಂದುವರೆದಿದೆ.

ಪ್ರಕೃತಿ ವಿಕೋಪದಿಂದ ಸೈನಿಕರ ನಾಡು, ಕಾವೇರಿ ತವರು ತತ್ತರಿಸಿದ ಸಂದರ್ಭ ರಕ್ಷಣಾ ಪಡೆಗಳು ಜಿಲ್ಲೆಯ ಜನರ ರಕ್ಷಣೆಗೆ ಧಾವಿಸಿ ಬಂದವು. ಬೆಟ್ಟಗುಡ್ಡಗಳಲ್ಲಿ ಸಿಲುಕಿದ್ದ ನೂರಾರು ಮಂದಿಯ ಜೀವವನ್ನು ರಕ್ಷಿಸಿದರು. ಹೀಗೆ ಜಿಲ್ಲೆಯ ಜನರ ರಕ್ಷಣೆಗೆ ಬಂದವರಲ್ಲಿ ಸುಬೇದಾರ್ ಮೇಜರ್ ಕುಟ್ಟಂಡ ಬೋಪಣ್ಣ ಕೂಡಾ ಒಬ್ಬರು. ಆ.24ಕ್ಕೆ ಭಾರತೀಯ ಸೇನೆಯಲ್ಲಿ ಅವರು ಸಲ್ಲಿಸುತ್ತಿರುವ ಸೇವೆಗೆ ಬರೋಬ್ಬರಿ 28 ವರ್ಷ ಸಲ್ಲುತ್ತದೆ. 'ತನ್ನ 28 ವರ್ಷ ಸರ್ವಿಸ್‍ನಲ್ಲಿ ಅದೆಷ್ಟೋ ಕಡೆಗಳಲ್ಲಿ ಪ್ರವಾಹ, ಭೂಕುಸಿತ ಸೇರಿದಂತೆ ಪ್ರಕೃತಿ ವಿಕೋಪದಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಿದ್ದೆ. ಮಣ್ಣಿನಡಿ ಸಿಲುಕಿ ಮೃತಪಟ್ಟವರ ದೇಹಗಳನ್ನು ಹೊರತೆಗೆದಿದ್ದೇನೆ. ಆದರೆ ನನ್ನೂರಿಗೆ ಇಂತಹ ದುರ್ಗತಿ ಬರುತ್ತದೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ನನ್ನೂರ ಜನರ ಮೃತದೇಹಗಳನ್ನೇ ನನ್ನ ಕೈಯಾರೆ ಹೊರತೆಗೆಯುವಂತಾಯಿತು ಎಂದು ಕುಟ್ಟಂಡ ಬೋಪಣ್ಣ ಕಂಬನಿ ಮಿಡಿಯುತ್ತಾ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡರು.

ಮಾದಾಪುರ ಸಮೀಪದ ಹಾಡಗೇರಿ ಗ್ರಾಮದ ಕುಟ್ಟಂಡ ಬೋಪಣ್ಣ 1990 ರಲ್ಲಿ ಮಂಗಳೂರಿನಲ್ಲಿ ಸೇನಾಭರ್ತಿಯ ರ್ಯಾಲಿಯ ಮೂಲಕ ಆರ್ಟಿಲರಿ ರೆಜಿಮೆಂಟ್‍ಗೆ ಸೇರ್ಪಡೆಯಾದರು. ಆ ಬಳಿಕ 80 ಫೀಲ್ಡ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಿದರು. ತದನಂತರ 136 ರೆಜಿಮೆಂಟ್‍ನಲ್ಲಿ ಸೇವೆಗೆ ನಿಯುಕ್ತಿಯಾದರು. ಸಿಕ್ಕಿಂ, ಗುಜರಾತ್ ಭೂಕಂಪ, ಉತ್ತರಾಖಂಡ್, ರಾಜಾಸ್ಥಾನ ಭಾರಿ ಪ್ರವಾಹ, ಸಿಯಾಚಿನ್ ಗ್ಲೇಷಿಯರ್ ಹಿಮಪಾತ, ಭೂ ಕುಸಿತ, ಜಮ್ಮುಕಾಶ್ಮೀರ ಪ್ರವಾಹ ಹೀಗೆ ತಮ್ಮ ಸರ್ವಿಸ್‍ನಲ್ಲಿ ಹಲವು ಕಡೆಗಳಲ್ಲಿ ಪ್ರಕೃತಿ ವಿಕೋಪದ ರಕ್ಷಣಾ ಕಾರ್ಯದಲ್ಲಿ ಹಗಲಿರುಳು ತೊಡಗಿಸಿಕೊಂಡಿದ್ದೆ ಎಂದು ತಮ್ಮ ಸೇನಾ ಅನುಭವ ಹಂಚಿಕೊಂಡರು.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ಅನಾಹುತದಿಂದ ಜನರನ್ನು ರಕ್ಷಿಸಲು ರಕ್ಷಣಾ ಪಡೆಗಳ ಯೋಧರು ಜಿಲ್ಲೆಗೆ ಕಾಲಿಟ್ಟರು. ತನ್ನ ಊರ ಜನರ ರಕ್ಷಣೆಗಾಗಿ ಕುಟ್ಟಂಡ ಬೋಪಣ್ಣ ಅವರು ಕೂಡ ರಜೆ ಹಾಕಿ ಹಟ್ಟಿಹೊಳೆಗೆ ಬಂದಿಳಿದರು. ಮಳೆಯ ತೀವ್ರತೆ ಇಳಿಮುಖವಾದ ನಂತರ ಮಣ್ಣಿನಡಿ ಸಿಲುಕಿದ್ದವರ ಮೃತದೇಹವನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು.

ಮೇಜರ್ ವಿಶ್ವಾಸ್ ನೇತೃತ್ವದಲ್ಲಿ 15ನೇ ಡೋಗ್ರಾ ರೆಜಿಮೆಂಟ್‍ನ ಯೋಧರ ಒಂದು ತಂಡ ಮೇಘತ್ತಾಳು, ಹೆಮ್ಮೆತ್ತಾಳು ಭಾಗದಲ್ಲಿ ಶೋಧ ಕಾರ್ಯ ಆರಂಭಿಸಿತು. ಕುಟ್ಟಂಡ ಬೋಪಣ್ಣ ಕೂಡ ಡೋಗ್ರಾ ರೆಜಿಮೆಂಟ್‍ನ ಯೋಧರೊಂದಿಗೆ ಮೃತದೇಹಗಳಿಗೆ ಹುಡುಕಾಟ ನಡೆಸಿದರು. ಪ್ರವಾಹ, ಭೂ ಕುಸಿತ, ಮೇಘ ಸ್ಫೋಟ ಸಂದರ್ಭ ಸೇನಾ ಅನುಭವವನ್ನು ಆಧರಿಸಿ ಡೋಗ್ರಾ ರೆಜಿಮೆಂಟ್‍ನ ಸೈನಿಕರಿಗೆ ಮಾರ್ಗದರ್ಶನ ನೀಡುವಲ್ಲಿಯೂ ಸುಬೇದಾರ್ ಮೇಜರ್ ಬೋಪಣ್ಣ ಮಹತ್ವದ ಪಾತ್ರ ವಹಿಸಿದರು. ಇವರ ಸೇವೆ ಬಗ್ಗೆ ಗ್ರಾಮಸ್ಥರೂ ಮೆಚ್ಚುಗೆ ವ್ಯಕ್ತಪಡಿಸಿದರು. ನಮ್ಮೂರಿನವರಿಗಾಗಿ ನಾನು ಸಲ್ಲಿಸಿದ ಸೇವೆ ಬಗ್ಗೆ ನನಗೆ ತೃಪ್ತಿ ಇದೆ, ಆದರೆ ನಮ್ಮವರನ್ನು ಕಳೆದುಕೊಂಡ ದು:ಖ ನನ್ನನ್ನು ಕಾಡುತ್ತಿದೆ ಎಂದು ಬೋಪಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X