ಯುನಿವೆಫ್ ನಿಂದ ಎಂ.ಅಹ್ಮದ್ ಬಾವರಿಗೆ 'ಶೇಕ್ ಅಹ್ಮದ್ ಸರ್ ಹಿಂದಿ' ಪ್ರಶಸ್ತಿ ಪ್ರದಾನ
ಮಂಗಳೂರು, ಸೆ.1: ಯುನಿವೆಫ್ ಕರ್ನಾಟಕ ವತಿಯಿಂದ ನೀಡಲಾಗುವ 2018ರ ಸಾಲಿನ ಶೇಕ್ ಅಹ್ಮದ್ ಸರ್ಹಿಂದಿ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಕೋಮು ಸೌಹಾರ್ದ ಶಾಂತಿ ಸಮಿತಿಯ ಸದಸ್ಯ, ಬ್ಯಾರಿ ಅಧ್ಯಯನ ಪೀಠದ ಸದಸ್ಯ ಹಾಗೂ ಸಮಾಜ ಸೇವಕ ಎಂ.ಅಹ್ಮದ್ ಬಾವರಿಗೆ ಮುಖ್ಯ ಅತಿಥಿಯಾಗಿದ್ದ ಹಿದಾಯ ಫೌಂಡೇಶನ್ನ ಸ್ಥಾಪಕ ಅಧ್ಯಕ್ಷ ಖಾಸಿಂ ರಿಯಾದ್ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಿದರು.
ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಸಂಚಾಲಕ ಅಬ್ದುಲ್ಲಾ ಪಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಝುಲ್ಫಿಕರ್ ಖಾಸಿಂ ಕಿರಾಅತ್ ಪಠಿಸಿದರು. ಅಬ್ದುರ್ರಹ್ಮಾನ್ ಪಿ.ಟಿ. ಕಾರ್ಯಕ್ರಮ ನಿರೂಪಿಸಿದರು. ಯುನಿವೆಫ್ ಜಿಲ್ಲಾಧ್ಯಕ್ಷ ಸೈಫುದ್ದೀನ್ ವಂದಿಸಿದರು.
Next Story