Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮಗೆ ಗೊತ್ತಿರಲಿ, ಎದೆನೋವು ಎಂದಾಕ್ಷಣ...

ನಿಮಗೆ ಗೊತ್ತಿರಲಿ, ಎದೆನೋವು ಎಂದಾಕ್ಷಣ ಅದು ಹೃದಯ ಸಮಸ್ಯೆಯೇ ಆಗಿರಬೇಕಿಲ್ಲ

ವಾರ್ತಾಭಾರತಿವಾರ್ತಾಭಾರತಿ2 Sept 2018 5:14 PM IST
share
ನಿಮಗೆ ಗೊತ್ತಿರಲಿ, ಎದೆನೋವು ಎಂದಾಕ್ಷಣ ಅದು ಹೃದಯ ಸಮಸ್ಯೆಯೇ ಆಗಿರಬೇಕಿಲ್ಲ

ಎದೆನೋವು ಕಾಣಿಸಿಕೊಂಡಾಕ್ಷಣ ಜನಸಾಮಾನ್ಯರು ಕಂಗೆಡುತ್ತಾರೆ. ಹೃದಯದ ಸಮಸ್ಯೆಯೊಂದೇ ಎದೆನೋವಿಗೆ ಕಾರಣವಲ್ಲ. ಎದೆನೋವಿಗೆ ಅಜೀರ್ಣದಂತಹ ಸಾಮಾನ್ಯ ಸಮಸ್ಯೆಯಿಂದ ಹಿಡಿದು ಹೃದಯಾಘಾತದವರೆಗೆ ಗಂಭೀರ ಕಾರಣಗಳಿವೆ. ವ್ಯಕ್ತಿ ಮೊದಲ ಬಾರಿ ಎದೆನೋವು ಅನುಭವಿಸಿದಾಗ ಅದಕ್ಕೆ ಕಾರಣವನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ಕೆಲವು ನಿಮಿಷಗಳವರೆಗೆ ಎದೆನೋವು ಮುಂದುವರಿದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಹೃದಯ, ಶ್ವಾಸಕೋಶಗಳು, ಜಠರಗರುಳು, ಮೂಳೆ ಅಥವಾ ಸ್ನಾಯು ಸಂಬಂಧಿತ ಸಮಸ್ಯೆಗಳು ಮತ್ತು ಇತರ ಕಾರಣಗಳಿಂದ ಎದೆನೋವು ಉಂಟಾಗುತ್ತದೆ.

ಹೃದಯ ಸಂಬಂಧಿತ ಕಾರಣಗಳು: ಪರಿಧಮನಿ ಕಾಯಿಲೆ, ಹೃದಯಾಘಾತ, ಪರಿಧಮನಿ ಛೇದನ,ಹೃದಯದ ಸ್ನಾಯುಗಳ ಉರಿಯೂತ,ಹೃದಯದ ಸ್ನಾಯುಗಳ ಪೆಡಸಾಗುವಿಕೆ,ಕಿರೀಟ ಕವಾಟ ಜಾರುವಿಕೆ

ಶ್ವಾಸಕೋಶ ಸಂಬಂಧಿತ ಕಾರಣಗಳು: ಶ್ವಾಸನಾಳಗಳ ಒಳಪೊರೆಯ ಉರಿಯೂತ,ನ್ಯುಮೋನಿಯಾ,ರಕ್ತ ಹೆಪ್ಪುಗಟ್ಟುವಿಕೆ,ಶ್ವಾಸಕೋಶ ವ್ಯಾಧಿ, ಶ್ವಾಸನಾಳಗಳ ಸಂಕುಚನ ಇತ್ಯಾದಿ.

ಜಠರಗರುಳು: ಅನ್ನನಾಳ ಸಂಬಂಧಿತ ಸಮಸ್ಯೆಗಳು,ಎದೆಯುರಿ ಅಥವಾ ಆ್ಯಸಿಡಿಟಿ,ಮೇದೋಜ್ಜೀರಕ ಗ್ರಂಥಿ ಅಥವಾ ಪಿತ್ತಕೋಶದ ಉರಿಯೂತ, ಪಿತ್ತಗಲ್ಲುಗಳು.

ಮೂಳೆ ಅಥವಾ ಸ್ನಾಯು ಸಂಬಂಧಿತ ಕಾರಣಗಳು: ಕುಗ್ಗುವಿಕೆಯಿಂದ ಮೂಳೆಮುರಿತ,ಪಕ್ಕೆಲಬುಗಳಿಗೆ ಗಾಯ ಅಥವಾ ಮುರಿತ, ದೀರ್ಘಕಾಲೀನ ಪರಿಶ್ರಮದಿಂದ ಸ್ನಾಯುಸಮಸ್ಯೆ

ಇತರ ಕಾರಣಗಳು: ಆತಂಕ, ನೋವಿನಿಂದ ಕೂಡಿದ ದದ್ದುಗಳು, ಭಾವನಾತ್ಮಕ ಒತ್ತಡ, ಹೃದಯದ ರಕ್ತನಾಳಗಳಲ್ಲಿ ತಡೆ, ಪಕ್ಕೆಲವನ್ನು ಎದೆಯ ಮೂಳೆಯೊಂದಿಗೆ ಜೋಡಿಸುವ ಮೃದ್ವಸ್ಥಿಯಲ್ಲಿ ಉರಿಯೂತ, ಶ್ವಾಸಕೋಶದ ರಕ್ತನಾಳಗಳಲ್ಲಿ ಅಡಚಣೆ ಇತ್ಯಾದಿ.

►ಎದೆನೋವಿಗೆ ಪ್ರಥಮ ಚಿಕಿತ್ಸೆ

ಹೃದಯಾಘಾತ: ಹೃದಯಾಘಾತವಾದಾಗ ಉಸಿರಾಟದ ವೇಳೆ ನೋವು, ದವಡೆ,ತೋಳು ಅಥವಾ ಬೆನ್ನಿನಲ್ಲಿ ನೋವು,ಎದೆಯಲ್ಲಿ ಬಿಗಿತ ಮತ್ತು ಒತ್ತಡ,ತಲೆಸುತ್ತುವಿಕೆ,ದಣಿವು,ಹೊಟ್ಟೆನೋವು,ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತವೆ. ಹೃದಯಾಘಾತದ ಸಂದರ್ಭದಲ್ಲಿ ಸ್ಥಳದಲ್ಲಿಯೇ ವೈದ್ಯಕೀಯ ನೆರವು ದೊರೆಯುವಂತೆ ನೋಡಿಕೊಳ್ಳಬೇಕು,ಅದು ಸಾಧ್ಯವಿಲ್ಲದಿದ್ದರೆ ಸುಸಜ್ಜಿತ ಆ್ಯಂಬುಲನ್ಸ್‌ನಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಬೇಕು.

ಆ್ಯಂಜಿನಾ: ಎದೆನೋವಿನೊಂದಿಗೆ ದವಡೆ,ತೋಳು,ಬೆನ್ನು ಅಥವಾ ಕುತ್ತಿಗೆಯಲ್ಲಿ ನೋವು,ದಣಿವು,ವಾಕರಿಕೆ,ಬೆವರುವಿಕೆ,ತಲೆಸುತ್ತುವಿಕೆ ಮತ್ತು ಉಸಿರಾಟದ ತೊಂದರೆ ಇವು ಆ್ಯಂಜಿನಾದ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ನೈಟ್ರೋಗ್ಲಿಸರಿನ್ ಮಾತ್ರೆಯನ್ನು ರೋಗಿಯ ನಾಲಿಗೆಯ ಬುಡದಲ್ಲಿರಿಸಬೇಕು ಅಥವಾ ನೈಟ್ರೋಗ್ಲಿಸರಿನ್ ಸ್ಪ್ರೇ ಮಾಡಬೇಕು.ಐದು ನಿಮಿಷಗಳಲ್ಲಿ ರೋಗಿಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆಯಾಗದಿದ್ದರೆ ತಕ್ಷಣವೇ ಆಸ್ಪತ್ರೆಗೆ ಸಾಗಿಸುವುದು ಅಗತ್ಯವಾಗುತ್ತದೆ.

ಆಮ್ಲದ ಹಿಮ್ಮುಖ ಹರಿವು: ವ್ಯಕ್ತಿಯಲ್ಲಿ ಉಸಿರಾಟದ ತೊಂದರೆ,ವಾಕರಿಕೆ,ದವಡೆ ಅಥವಾ ತೋಳಿನಲ್ಲಿ ನೋವು ಇತ್ಯಾದಿ ಲಕ್ಷಣಗಳಿದ್ದರೆ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಏಕೆಂದರೆ ಹಲವು ಬಾರಿ ಆ್ಯಸಿಡಿಟಿಯಿಂದ ಕಾಣಿಸಿಕೊಳ್ಳುವ ಎದೆನೋವನ್ನು ಹೃದಯಾಘಾತವೆಂದು ತಪ್ಪಾಗಿ ಗ್ರಹಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಆ್ಯಂಟಾಸಿಡ್ ನೀಡಿದರೆ ಸುಧಾರಣೆ ಕಂಡು ಬರುತ್ತದೆ. ವೈದ್ಯರು ತಪಾಸಣೆಯ ಬಳಿಕ ಅದು ಆ್ಯಸಿಡಿಟಿಯಿಂದ ಅಥವಾ ಹೃದಯಾಘಾತದಿಂದ ಉಂಟಾದ ನೋವೇ ಎನ್ನುವುದನ್ನು ನಿರ್ಧರಿಸುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X