Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ವಾರ್ತಾಭಾರತಿವಾರ್ತಾಭಾರತಿ3 Sept 2018 12:02 AM IST
share
ಓ ಮೆಣಸೇ...

   ರಾಜ್ಯದಲ್ಲಿ ಮೈತ್ರಿ ಒಡೆದು ಸರಕಾರ ಉರಳಲು ಅದೇನು ಮಡಕೆಯಲ್ಲ - ಡಿ.ಕೆ.ಶಿವಕುಮಾರ್, ಸಚಿವ

 ಅದು ಕಾಗೆ ಗೂಡಿನಲ್ಲಿಟ್ಟ ಕೋಗಿಲೆಯ ಮೊಟ್ಟೆ ಎನ್ನುವ ಆರೋಪ ಇದೆ.

 ---------------------

ಸರಕಾರ ಉರುಳಿಸಬೇಕೆಂದು ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ -ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

ಆಮಿಷಕ್ಕೆ ಬಲಿಯಾಗದಿದ್ದರಾಯಿತು. ಚಿಂತೆ ಯಾಕೆ?

---------------------

ಯುವಕರಿಗೆ ಮಾರ್ಗದರ್ಶನ ಮಾಡುವವರ ಕೊರತೆ ಇದೆ -ನಳಿನ್‌ಕುಮಾರ್ ಕಟೀಲು, ಸಂಸದ

ನಿಮ್ಮಂತಹ ನಾಯಕರಿದ್ದರೆ ಕೊರತೆ ಇರುವುದು ಸಹಜವೇ ಆಗಿದೆ.

 ---------------------

   ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರ ಪಡೆಯುವುದು ನಿಶ್ಚಿತ -ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ

ಮೊದಲು ಮೈತ್ರಿ ಕೂಟ ಎಲ್ಲಿದೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಿ.

 ---------------------

ದೋಣಿಯಲ್ಲಿ ಸಾಗುತ್ತಿರುವ ಸರಕಾರವನ್ನು ಮುಳುಗಿಸಲು ಕೆಲವರು ಕಾಯುತ್ತಿದ್ದಾರೆ -ಎಚ್.ಡಿ.ರೇವಣ್ಣ, ಸಚಿವ

ಎರಡು ದೋಣಿಯಲ್ಲಿ ಕಾಲಿಟ್ಟು ಸಾಗುತ್ತಿರುವ ಸರಕಾರ ಎಂದರೆ ಚೆನ್ನಾಗಿತ್ತು.

---------------------

ನನಗೆ ಯಾರೂ ಗೌರವ ನೀಡುತ್ತಿಲ್ಲ - ಮುಲಾಯಂ ಸಿಂಗ್ ಯಾದವ್, ಎಸ್ಪಿ ಮುಖಂಡ

ಗೌರವ ಕೊಡುವ ರೀತಿಯಲ್ಲಿ ವರ್ತಿಸಿದರೆ ಗೌರವ ಸಿಕ್ಕೀತು.

---------------------

ಬಿಜೆಪಿ ಮಣಿಸಲು ಪ್ರತಿಪಕ್ಷಗಳ ಮೈತ್ರಿ ಅಗತ್ಯ -ಪಿ.ಚಿದಂಬರಂ, ಮಾಜಿ ಕೇಂದ್ರ ಸಚಿವ

ಮೊದಲು ಪ್ರತಿಪಕ್ಷಗಳು ಎಲ್ಲಿವೆ ಎನ್ನುವುದು ಹುಡುಕಿ.

---------------------

ನಾಯಕ ಹೇಗಿರುತ್ತಾನೋ, ಅವನಂತೆಯೇ ಅವನ ತಂಡದವರು ಇರುತ್ತಾರೆ -ಪ್ರಹ್ಲಾದ್ ಜೋಷಿ, ಸಂಸದ

ಹದಗೆಟ್ಟ ಬಿಜೆಪಿ ತಂಡವನ್ನು ನೋಡಿದಾಗಲೇ ಅದು ಮನವರಿಕೆಯಾಗುತ್ತದೆ.

---------------------

ನಾನು ಯಾರ ಕಾಲನ್ನು ಎಳೆದಿಲ್ಲ, ಎಳೆಯುವುದೂ ಇಲ್ಲ - ಡಿ.ಕೆ.ಶಿವಕುಮಾರ್, ಸಚಿವ

ಮತ್ತೇನನ್ನು ಎಳೆದಿದ್ದೀರಿ ಎನ್ನುವುದನ್ನಾದರೂ ತಿಳಿಸಿ.

---------------------

ಅಟಲ್ ಬಿಹಾರಿ ವಾಜಪೇಯಿ ಶತ್ರುವನ್ನು ಗೌರವಿಸಿದ ನಾಯಕ -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ

ಶಿರೂರು ಸ್ವಾಮೀಜಿಯ ವಿಷಯದಲ್ಲಿ ಅಟಲ್ ನಿಮಗೆ ಆದರ್ಶವಾಗಬೇಕಾಗಿತ್ತು.

---------------------

ಸ್ವತಂತ್ರ ಭಾರತದಲ್ಲಿ ಒಂದು ಗೋಸ್ವರ್ಗ ನಿರ್ಮಾಣ ಮಾಡಲು 72 ವರ್ಷ ಬೇಕಾಯಿತು -ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮಚಂದ್ರಾಪುರ ಮಠ

ಜನರ ಬದುಕನ್ನು ನರಕವಾಗಿಸಿ ಗೋವುಗಳಿಗೆ ಸ್ವರ್ಗವೇ?

---------------------

ಭಯೋತ್ಪಾದನೆಯೇ ಜಗತ್ತಿನ ಪ್ರಧಾನ ಶತ್ರು -ಎಂ.ಜೆ.ಅಕ್ಬರ್, ಕೇಂದ್ರ ಸಚಿವ

ಭಾರತದ ಪಾಲಿಗೆ ಮಾತ್ರ ಮಿತ್ರ ಎಂದು ಹೇಳಿದರಂತೆ, ಸನಾತನ ಸಂಸ್ಥೆಯ ಜೊತೆಗೆ ಅನೈತಿಕ ಸಂಬಂಧ ಹೊಂದಿದ ರಾಜಕೀಯ ನಾಯಕರು.

---------------------

   ಕೊಡಗು ಈಗ ಒಂದು ದೃಷ್ಟಿಯಿಂದ ಅನಾಥ ಸ್ಥಿತಿಯಲ್ಲಿದೆ -ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತ

ಅಲ್ಲಿರುವ ಬುಡಕಟ್ಟು, ಆದಿವಾಸಿ ಜನರು ಹಲವು ದಶಕಗಳಿಂದ ಅನಾಥರಾಗಿಯೇ ಬದುಕುತ್ತಾ ಬಂದಿದ್ದಾರೆ.

---------------------

ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಆರೋಗ್ಯಕರ ಪ್ರಜಾಪ್ರಭುತ್ವದ ಸಂಕೇತ - ನರೇಂದ್ರ ಮೋದಿ, ಪ್ರಧಾನಿ

ಪ್ರಜಾಪ್ರಭುತ್ವ ಆರೋಗ್ಯಕರವಾಗಿದ್ದರೆ, ನಿಮ್ಮ ಪಾಡೇನು?

---------------------

ಸಮನ್ವಯ ಸಮಿತಿಯಲ್ಲಿ ಎರಡೂ ಪಕ್ಷಗಳ ಅಧ್ಯಕ್ಷರು ಇರಬೇಕು - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ

   ಸಮನ್ವಯ ಇಲ್ಲದಿದ್ದರೂ ಪರವಾಗಿಲ್ಲ ಅಲ್ಲವೇ?

---------------------

ಹೆಚ್ಚು ಸ್ಥಾನ ಪಡೆದ ಪಕ್ಷಕ್ಕೆ ಪ್ರಧಾನಿ ಪಟ್ಟ ನೀಡಬೇಕು -ಶರದ್‌ಪವಾರ್, ಎನ್‌ಸಿಪಿ ವರಿಷ್ಠ

ಮೊದಲು ಹೆಚ್ಚು ಸ್ಥಾನ ಪಡೆಯುವ ಕುರಿತಂತೆ ಯೋಚನೆ ಮಾಡಿ.

---------------------

ಸಮ್ಮಿಶ್ರ ಸರಕಾರಕ್ಕೆ ಬಾಲಗ್ರಹ ಪೀಡೆ - ಅನಂತಕುಮಾರ್, ಕೇಂದ್ರ ಸಚಿವ

ಬಾಲ ಕತ್ತರಿಸಿದರೆ ಆಯಿತು.

---------------------

ರಫೇಲ್ ವ್ಯವಹಾರ ಶತಮಾನದ ದೊಡ್ಡ ಹಗರಣ - ವೀರಪ್ಪ ಮೊಯ್ಲಿ, ಸಂಸದ

ಅದರ ಕುರಿತಂತೆಯೇ ಮಹಾಕಾವ್ಯ ಬರೆಯುವ ಯೋಜನೆಯಿದೆಯೇ?

---------------------

ಕನ್ನಡಕಕ್ಕಿಂತಲೂ ಕಣ್ಣು ಮುಖ್ಯ -ವೆಂಕಯ್ಯನಾಯ್ಡು, ಉಪರಾಷ್ಟ್ರಪತಿ

ಕನ್ನಡಕ್ಕಿಂತಲೂ ಹಿಂದಿ ಮುಖ್ಯ ಎನ್ನುವವರಿಗೆ ಈ ಗಾದೆ ಅನ್ವಯವಾಗುತ್ತದೆ.

---------------------

   ಬಿಜೆಪಿಗೆ ವೋಟು ಹಾಕುವವರು ಮುಸ್ಲಿಂ ಆಗಿರಲು ಸಾಧ್ಯವಿಲ್ಲ -ಝಮೀರ್ ಅಹ್ಮದ್ ಖಾನ್, ಸಚಿವ

ಕಾಂಗ್ರೆಸ್‌ಗೆ ಓಟು ಹಾಕಿದವರಷ್ಟೇ ಮುಸ್ಲಿಮರು ಎಂದು ಹೇಳಲಿಲ್ಲ, ಪುಣ್ಯ.

 ---------------------

ಪ್ರತಿಯೊಂದು ಬಯಕೆಯ ಹಿಂದೆಯೂ ಪ್ರೇಮವಿದೆ - ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ

   ಅಕ್ರಮ ಭೂಮಿಯ ಮೇಲಿರುವ ಪ್ರೇಮಕ್ಕೂ ಇದು ಅನ್ವಯಿಸುತ್ತದೆಯೇ?

---------------------

ರಾಜ್ಯ ಸರಕಾರ ಕುಸಿದು ಬಿದ್ದರೆ ಬಿಜೆಪಿ ಹೊಣೆಯಲ್ಲ -ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

 ಕೊಡಗಿನಲ್ಲಿ ಸುರಿದ ಮಳೆಯೇ ಕುಸಿತಕ್ಕೆ ಕಾರಣ ಎಂದರಾಯಿತು.

---------------------

ಬಾತುಕೋಳಿ ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ತನ್ನಿಂದ ತಾನೇ ವೃದ್ಧಿಯಾಗುತ್ತದೆ -ಬಿಪ್ಲವ್‌ಕುಮಾರ್ ದೇಬ್, ತ್ರಿಪುರ ಮುಖ್ಯಮಂತ್ರಿ

ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಲಿಂಡರ್ ಬದಲಿಗೆ, ಬಾತುಕೋಳಿಗಳನ್ನು ಸಾಕಲು ಸಲಹೆಯೇ?

---------------------

ಬಿಜೆಪಿಯವರು ಕ್ಯಾನ್ಸರ್ ಇದ್ದಂತೆ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

ಕ್ಯಾನ್ಸರ್ ಶ್ವಾಸಕೋಶವನ್ನು ಆವರಿಸಿ ಆಗಿದೆ.

---------------------

ಸಚಿವೆ ಜಯಮಾಲಾ ನಮಗಿಂತ ಹೆಚ್ಚು ಗ್ಲಾಮರಸ್ ಆಗಿದ್ದಾರೆ -ಪ್ರಮೋದ್ ಮಧ್ವರಾಜ್, ಮಾಜಿ ಸಚಿವ

ಹೊಸ ಪಿಕ್ಚರ್ ತೆಗೆಯುವ ಉದ್ದೇಶವೇನಾದರೂ ಇದೆಯೇ?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X