Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಕೃತಿ ಪರಿಚಯ
  4. ದಲಿತ ಬಹುಜನರ ಅಜ್ಞಾತ ಕೊಡುಗೆಗಳನ್ನು...

ದಲಿತ ಬಹುಜನರ ಅಜ್ಞಾತ ಕೊಡುಗೆಗಳನ್ನು ತೆರೆದಿಡುವ ‘ಹಿಂದೂ ಧರ್ಮೋತ್ತರ ಭಾರತ’

ಈ ಹೊತ್ತಿನ ಹೊತ್ತಿಗೆ

-ಕಾರುಣ್ಯಾ-ಕಾರುಣ್ಯಾ4 Sept 2018 12:00 AM IST
share
ದಲಿತ ಬಹುಜನರ ಅಜ್ಞಾತ ಕೊಡುಗೆಗಳನ್ನು ತೆರೆದಿಡುವ ‘ಹಿಂದೂ ಧರ್ಮೋತ್ತರ ಭಾರತ’

ದಲಿತ ಬಹುಜನರು ಸಾಮಾಜಿಕ, ಧಾರ್ಮಿಕ ಮತ್ತು ವೈಜ್ಞಾನಿಕ ಕ್ಷೇತ್ರಗಳಲ್ಲಿ ಮಾಡಿರುವ ಕ್ರಾಂತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಕಾಂಚ ಐಲಯ್ಯ ಅವರು ಬರೆದ ಕೃತಿ ‘ಹಿಂದೂ ಧರ್ಮೋತ್ತರ ಭಾರತ’. ಡಾ. ಜಾಜಿ ದೇವೇಂದ್ರಪ್ಪ ಅವರು ಇದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿ ಆಂಧ್ರ ಪ್ರದೇಶದ ದಲಿತ ಬಹುಜನರನ್ನು ಕೇಂದ್ರವಾಗಿಟ್ಟುಕೊಂಡು ರಚಿಸಲ್ಪಟ್ಟಿದೆ. ಇಲ್ಲಿನ ದುಡಿಯುವ ವರ್ಗಗಳಲ್ಲಿ ಹುಟ್ಟಿದ, ಬೆಳೆದ ವಿಜ್ಞಾನ, ತಂತ್ರಜ್ಞಾನ, ಆರ್ಥಿಕ, ಸಾಮಾಜಿಕ, ತತ್ವಶಾಸ್ತ್ರ, ಧಾರ್ಮಿಕ ಸಂಸ್ಕೃತಿಯನ್ನು ಆಧಾರವಾಗಿಟ್ಟುಕೊಂಡು ಈ ಕೃತಿಯನ್ನು ರಚಿಸಲಾಗಿದೆ. ಗ್ರಾಮೀಣ ಪ್ರಕ್ರಿಯೆಯಲ್ಲಿರುವ ವೈಜ್ಞಾನಿಕ, ತಾಂತ್ರಿಕ, ತಾತ್ವಿಕ ಅಂಶಗಳ ಮೇಲೆ ಸುದೀರ್ಘ ಸಂಶೋಧನೆಯ ಅನಂತರ ಹಿಂದೂಯಿಸಂ ಈ ದೇಶದಲ್ಲಿ ವಿಜ್ಞಾನ ಅಭಿವೃದ್ಧಿಯಾಗಲು ಒಡ್ಡಿದ ಅಡ್ಡ ಗೋಡೆಗಳನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
 ‘‘ಪ್ರತಿಯೊಂದು ಸಂಸ್ಕೃತಿ, ನಾಗರಿಕತೆಗಳಿಗೆ ಆಯಾ ಕಾಲಘಟ್ಟಗಳಲ್ಲಿ ಹೆಜ್ಜೆ ಗುರುತುಗಳು, ತಲ್ಲಣಗಳಿರುತ್ತವೆ. ಅದರಲ್ಲಿಯೂ ವೈದಿಕರ ಸಾಂಸ್ಕೃತಿಕ ಚಹರೆಯು ಉಳಿದ ಕುಲಗಳಿಂದಲೇ ರೂಪು ಪಡೆದಿವೆಯೆಂಬುದು ಮುಖ್ಯ. ಈ ವೈದಿಕರ ಸಾಂಸ್ಕೃತಿಕತೆಯು ಉತ್ಪಾದನಾ, ಶ್ರಮಮೂಲ ವರ್ಗಗಳನ್ನು ಅವಲಂಬಿಸಿದೆೆ. ಮನುಷ್ಯ ಸಮಾಜದ ಮೂಲಕ ಸಂಸ್ಕೃತಿಯನ್ನು, ನಾಗರಿಕತೆಗಳನ್ನು ಶೋಷಕ ಜಾತಿಗಳು ಹಿಮ್ಮೆಟ್ಟಿಸಿವೆ. ಇತರ ಕುಲಗಳ ಸಂಸ್ಕೃತಿಯನ್ನು ಅವರ ಮೂಲಚಹರೆಯನ್ನು ಬ್ರಾಹ್ಮಣ ಸಂಸ್ಕೃತಿಯು ಸರ್ವನಾಶ ಮಾಡಿದೆ. ಬ್ರಾಹ್ಮಣ ಸಂಸ್ಕೃತಿ, ನಾಗರಿಕತೆಯೇ ಶ್ರೇಷ್ಠವೆಂಬ ಭ್ರಮೆಯನ್ನು ಬಿತ್ತಲಾಯಿತು. ಅಲ್ಲದೆ ಉತ್ಪಾದನೆಯ ಹರಿಕಾರರಾದ ದುಡಿಯುವ ವರ್ಗವು ಇದನ್ನು ನಂಬುವಂತೆ ಮಾಡಲಾಯಿತು. ಇಂತಹ ಆಕ್ರಮಣಕಾರಿ ನೀತಿಯಿಂದಾಗಿ ಮಾನವೀಯ ಸೃಜನಶೀಲತೆಯ ಮೂಲಗಳು ಬೆಳಕಿಗೆ ಬಾರದೇ ಹೋಯಿತು. ಇವೆಲ್ಲವೂ ಉದ್ದೇಶಪೂರ್ವಕವಾಗಿಯೇ ನಡೆಯಿತು. ಆದರೆ ಆದಿವಾಸಿ ಸಮುದಾಯಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಾನವೀಯ ಸೃಜನಾತ್ಮಕ ನೆಲೆಗಳು ಇರುವುದು ಇಂದಿಗೂ ಸ್ಪಷ್ಟವಾಗಿ ಗೋಚರವಾಗುತ್ತದೆ’’ ಎನ್ನುವ ಅಂಶವನ್ನು ಈ ಕೃತಿ ಹೇಳುತ್ತದೆ.
ಉಚಿತ ಶಿಕ್ಷಕರು ಅಧ್ಯಾಯದಲ್ಲಿ, ಹೇಗೆ ಆದಿವಾಸಿ ಜ್ಞಾನವ್ಯವಸ್ಥೆ ನೆಲದಲ್ಲಿ ಹರಡಿಕೊಂಡಿತು ಎನ್ನುವುದನ್ನು ವಿವರಿಸುತ್ತಾ, ಅವರು ತಮ್ಮ ಜ್ಞಾನವು ಮಾರಾಟದ ಸರಕಾಗಿ ಮಾಡಲಿಲ್ಲ. ಅದು ಅವರಿಗೆ ಸಾಮಾಜಿಕ ಅರಿವಿನ ಭಾಗವಾಗಿದೆ. ಅವರ ಮಾನವೀಯ ಸಂಬಂಧಗಳು ವೌಲಿಕವಾದುದೆಂದು ಚರಿತ್ರೆಯೇ ತಿಳಿಸುತ್ತದೆ. ಅದಕ್ಕಾಗಿಯೇ ಆದಿವಾಸಿಗಳು ನಮ್ಮ ಮೊದಲ ಉಪಾಧ್ಯಾಯರು ಎಂದು ಲೇಖಕರು ಹೇಳುತ್ತಾರೆ. ಒಂದು ರೀತಿಯಲ್ಲಿ, ಇವರು ಉಚಿತ ಶಿಕ್ಷಕರು. ಇದೇ ರೀತಿಯಲ್ಲಿ ಅವರು ಸಮಾಜದ ಬೇರೇ ಬೇರೆ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ದುಡಿಯುತ್ತಾ ಉಚಿತ ಶಾಸ್ತ್ರಜ್ಞರಾಗಿ, ಉತ್ಪತ್ತಿ ಸೈನಿಕರಾಗಿ, ಸಾಮಾಜಿಕ ವೈದ್ಯರಾಗಿ, ಅಜ್ಞಾತ ಇಂಜಿನಿಯರ್‌ಗಳಾಗಿ, ಆಹಾರ ಉತ್ಪಾದಕರಾಗಿ ಭಾರತೀಯ ಸಮಾಜವನ್ನು ಕಟ್ಟಿದರು ಎನ್ನುವುದನ್ನು ಸವಿವರವಾಗಿ ಕೃತಿ ಕಟ್ಟಿಕೊಡುತ್ತದೆ. ಭಾರತ ದೇಶದಲ್ಲಿ ಹಿಂದೂ ಜಾತಿ ಆಧಿಪತ್ಯ, ಉತ್ಪಾದನಾ ವಿರೋಧಿ ಬ್ರಾಹ್ಮಣ, ವೈಶ್ಯ ಜಾತಿಗಳೆಂದು ಯಾವುದೇ ಬದಲಾವಣೆಯಾಗದೇ ಸಾಗುತ್ತಿರುವುದರ ಬಗ್ಗೆ ಲೇಖಕರು ಆತಂಕ ವ್ಯಕ್ತಪಡಿಸುತ್ತಾರೆ. ಲಡಾಯಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 280. ಮುಖಬೆಲೆ 180 ರೂಪಾಯಿ.

share
-ಕಾರುಣ್ಯಾ
-ಕಾರುಣ್ಯಾ
Next Story
X