ಬಿಲ್ಲವ ಜವನೇರ್ ಮಸ್ಕತ್ನಿಂದ ರಕ್ತದಾನ ಶಿಬಿರ
ಮಂಗಳೂರು, ಸೆ.10: ಕೊಲ್ಲಿ ರಾಷ್ಟ್ರ ಒಮನ್ ಮಸ್ಕತ್ತಿನಲ್ಲಿ ಬಿಲ್ಲವ ಜವನೇರ್ (ಬಿಜೆ ಮಸ್ಕತ್) ಆಶ್ರಯದಲ್ಲಿ ಭಾರತ ಸ್ವಾತಂತ್ರೋತ್ಸವ ಮತ್ತು ಒಮನ್ ದೇಶದ ನವೋದಯ ದಿನ ಸಲುವಾಗಿ ದ್ವೀತಿಯ ವರ್ಷದ ರಕ್ತದಾನ ಶಿಬಿರವು ಇತ್ತೀಚೆಗೆ ಬೌಶಾರ ಬ್ಲಡ್ ಬ್ಯಾಂಕ್ನಲ್ಲಿ ನಡೆಯಿತು.
ರಕ್ತದಾನ ಶಿಬಿರದಲ್ಲಿ ಸುಮಾರು 160ಕ್ಕೂ ಹೆಚ್ಚು ಭಾಗವಹಿಸಿ ಜೀವ ಉಳಿಸುವ ಮಹತ್ತರ ಕಾರ್ಯದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಸಹೋದರತ್ವದ ಬಾಂಧವ್ಯ ಸಾರುವ ರಕ್ಷಾ ಬಂಧನ ಕಾರ್ಯಕ್ರಮ, ಆರೋಗ್ಯ ಮಾಹಿತಿ ನೀಡುವ ಕರಪತ್ರಗಳನ್ನು ವಿತರಿಸಲಾಯಿತು.
Next Story