ಸರ್ದಾರ್ ಸಿಂಗ್ ಸಾಧನೆ ಶ್ಲಾಘಿಸಿದ ಹಾಕಿ ಇಂಡಿಯಾ
ಹೊಸದಿಲ್ಲಿ, ಸೆ.14: ಬುಧವಾರ ತನ್ನ 12 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದ ಭಾರತದ ಮಾಜಿ ನಾಯಕ ಸರ್ದಾರ್ ಸಿಂಗ್ ‘‘ಹಾಕಿಯ ನಿಜವಾದ ರಾಯಭಾರಿಯಾಗಿದ್ದರು’’ ಎಂದು ಹಾಕಿ ಇಂಡಿಯಾ ಶ್ಲಾಘಿಸಿದೆ.
‘‘ಉತ್ತಮ ಹಾಗೂ ಕೆಟ್ಟ ಸಮಯದಲ್ಲಿ ಸರ್ದಾರ್ ಸಿಂಗ್ ಬದ್ಧತೆ ಪ್ರದರ್ಶಿಸಿದ್ದರು. ಅವರ ಸಮರ್ಪಣಾಭಾವ ಅವರನ್ನು ಹಾಕಿಯ ನೈಜ ರಾಯಭಾರಿಯನ್ನಾಗಿಸಿದೆ. ತನ್ನ ಪ್ರದರ್ಶನ ಹಾಗೂ ನಾಯಕತ್ವದ ಮೂಲಕ ಅವರು ಯುವ ಹಾಕಿ ಆಟಗಾರರಿಗೆ ಸ್ಫೂರ್ತಿಯಾಗಿದ್ದಾರೆ. ಸರ್ದಾರ್ ಸಾಧನೆಗೆ ಹಾಕಿ ಇಂಡಿಯಾ ಅಭಿನಂದನೆ ಸಲ್ಲಿಸಲು ಬಯಸುತ್ತಿದೆ. ಅವರ ಭವಿಷ್ಯ ಉಜ್ವಲವಾಗಿರಲಿ’’ ಎಂದು ಹಾಕಿ ಇಂಡಿಯ ಅಧ್ಯಕ್ಷ ರಾಜಿಂದರ್ ಸಿಂಗ್ ಹೇಳಿದ್ದಾರೆ. ಬುಧವಾರ ಚಂಡೀಗಡದಲ್ಲಿ ಸುದ್ದಿಗೋಷ್ಠಿ ನಡೆಸಿದ ಸರ್ದಾರ್ ಅಧಿಕೃತವಾಗಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು.
Next Story