Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 26 ವರ್ಷಗಳಿಂದ ಈ ದೇಗುಲ ಸಂರಕ್ಷಣೆ...

26 ವರ್ಷಗಳಿಂದ ಈ ದೇಗುಲ ಸಂರಕ್ಷಣೆ ಮಾಡಿದ್ದು ಮುಸ್ಲಿಮರು!

ವಾರ್ತಾಭಾರತಿವಾರ್ತಾಭಾರತಿ17 Sept 2018 9:19 AM IST
share
26 ವರ್ಷಗಳಿಂದ ಈ ದೇಗುಲ ಸಂರಕ್ಷಣೆ ಮಾಡಿದ್ದು ಮುಸ್ಲಿಮರು!

ಮುಝಾಫರ್‌ ನಗರ, ಸೆ.17: ನಗರದ ಲದ್ದೇವಾಲ ರಸ್ತೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ, ಪುಟ್ಟ ಕೊಳಕು ಫಲಕವೊಂದು ಈ ಪ್ರದೇಶಕ್ಕೆ ಸ್ವಾಗತಿಸುತ್ತದೆ. ಇಲ್ಲಿ ಕಾಂಕ್ರಿಟ್ ಮನೆಗಳ ಸಾಲಿನ ನಡುವಿನ ಓಣಿಗಳು ಎಷ್ಟು ಇಕ್ಕಟ್ಟು ಎಂದರೆ ಕೇವಲ ನಾಲ್ಕು ಅಡಿ ಅಗಲ. ಇಂಥ ವಾತಾವರಣದಲ್ಲಿ ಹಿಂದೂ ಕುಟುಂಬಗಳು 1990ರ ದಶಕದಲ್ಲಿ ಬಿಟ್ಟುಹೋದ ಪುಟ್ಟ ದೇಗುಲವಿದೆ.

26 ವರ್ಷಗಳಿಂದ ಈ ದೇಗುಲದ ಸಂರಕ್ಷಣೆ ಹೊಣೆ ಇಲ್ಲಿನ ಮುಸ್ಲಿಂ ನಿವಾಸಿಗಳದ್ದು. ಪ್ರತಿ ದಿನ ದೇವಾಲಯ ಸ್ವಚ್ಛಗೊಳಿಸಿ, ಪ್ರತಿ ದೀಪಾವಳಿಗೆ ಸುಣ್ಣ ಬಳಿಯುತ್ತಾರೆ. ಆಕ್ರಮಣಕಾರರು ಹಾಗೂ ಬೀದಿ ಪ್ರಾಣಿಗಳಿಂದ ರಕ್ಷಿಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯದ ಲದ್ದೇವಾಲಾ ಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸದ ಬಳಿಕ ನಡೆದ ಕೋಮುಗಲಭೆಯಲ್ಲಿ ಹಿಂದೂ ಕುಟುಂಬಗಳು ಊರು ಬಿಟ್ಟು ಹೋದದ್ದನ್ನು ಮೆಹರ್‌ಬಾನ್ ಅಲಿ (60) ನೆನಪಿಸಿಕೊಳ್ಳುತ್ತಾರೆ.

"ಜಿತೇಂದ್ರ ಕುಮಾರ್ ನನ್ನ ಆತ್ಮೀಯ ಸ್ನೇಹಿತ. ಉದ್ವಿಗ್ನತೆಯ ಹೊರತಾಗಿಯೂ ಊರು ಬಿಡದಂತೆ ಆತನನ್ನು ತಡೆಯುವ ಎಲ್ಲ ಪ್ರಯತ್ನ ಮಾಡಿದೆ. ಆದರೆ ಹಲವು ಹಿಂದೂ ಕುಟುಂಬಗಳ ಜತೆ ಅವರೂ ಊರು ಬಿಟ್ಟರು. ಕೆಲ ದಿನಗಳಲ್ಲಿ ವಾಪಸ್ಸಾಗುವುದಾಗಿ ಹೇಳಿ ಹೋದರು. ಆ ಬಳಿಕ ಇದುವರೆಗೂ ಇಲ್ಲಿನ ನಿವಾಸಿಗಳೇ ದೇವಾಲಯ ರಕ್ಷಿಸಿಕೊಂಡು ಬಂದಿದ್ದೇವೆ" ಎಂದು ವಿವರಿಸುತ್ತಾರೆ.

35 ಕುಟುಂಬಗಳು ವಾಸಿಸುವ ಇಲ್ಲಿ ಅಲಿಯಂಥ ಹಲವು ಮಂದಿ ಹಿಂದೂ ಬಾಂಧವರು ವಾಪಾಸಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ದೇವಾಲಯ 1970ರಲ್ಲಿ ನಿರ್ಮಾಣವಾಗಿದ್ದು, ಆಗ ಸುಮಾರು 20 ಹಿಂದೂ ಕುಟುಂಬಗಳು ಇಲ್ಲಿ ವಾಸವಿದ್ದವು ಎಂದು ಸ್ಥಳೀಯರು ಹೇಳುತ್ತಾರೆ. "ದೇವಾಲಯವನ್ನು ಅಚ್ಚುಕಟ್ಟಾಗಿ ನೋಡಿಕೊಂಡು ಬಂದಿದ್ದೇವೆ. ಹಿಂದೂಗಳು ವಾಪಸ್ಸಾಗಿ ದೇವಾಲಯವನ್ನು ತಮ್ಮ ನಿಯಂತ್ರಣಕ್ಕೆ ಪಡೆಯಬೇಕು ಎಂಬುದು ನಮ್ಮ ಬಯಕೆ" ಎಂದು ಝಹೀರ್ ಅಹ್ಮದ್ ಹೇಳುತ್ತಾರೆ.

"ಪ್ರತಿ ದೀಪಾವಳಿಗೆ ದೇವಾಲಯಕ್ಕೆ ಬಣ್ಣ ಹಚ್ಚಲು ಸ್ಥಳೀಯರು ಹಣ ಸಂಗ್ರಹಿಸುತ್ತಾರೆ. ಪ್ರತಿದಿನವೂ ಸ್ವಚ್ಛಗೊಳಿಸುತ್ತಾರೆ. ಆದರೆ ದೇವಾಲಯದಲ್ಲಿ ಮೂರ್ತಿ ಇಲ್ಲ. 1992ರವರೆಗೂ ಇದ್ದ ಮೂರ್ತಿಯನ್ನು ಹಿಂದೂ ಕುಟುಂಬಗಳು ಊರು ಬಿಡುವ ವೇಳೆ ತಮ್ಮೊಂದಿಗೆ ಒಯ್ದಿದ್ದಾರೆ" ಎಂದು ದೇವಾಲಯದ ಪಕ್ಕದ ನಿವಾಸಿ ಅಹ್ಮದ್ ಹೇಳುತ್ತಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X