Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಸಿರಿಯ ಕರಾವಳಿಯಲ್ಲಿ ಅನಿರೀಕ್ಷಿತವಾಗಿ...

ಸಿರಿಯ ಕರಾವಳಿಯಲ್ಲಿ ಅನಿರೀಕ್ಷಿತವಾಗಿ ರಶ್ಯದ ಯುದ್ಧವಿಮಾನ ನಾಪತ್ತೆ

ವಾರ್ತಾಭಾರತಿವಾರ್ತಾಭಾರತಿ18 Sept 2018 9:26 PM IST
share
ಸಿರಿಯ ಕರಾವಳಿಯಲ್ಲಿ ಅನಿರೀಕ್ಷಿತವಾಗಿ ರಶ್ಯದ ಯುದ್ಧವಿಮಾನ ನಾಪತ್ತೆ

ಮಾಸ್ಕೊ, ಸೆ. 18: ಸಿರಿಯದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವಂತೆಯೇ, 14 ಸೈನಿಕರನ್ನು ಒಯ್ಯುತ್ತಿದ್ದ ನಮ್ಮ ಯುದ್ಧವಿಮಾನವೊಂದು ಸೋಮವಾರ ರಾತ್ರಿ ಮೆಡಿಟರೇನಿಯನ್ ಸಮುದ್ರದ ಆಕಾಶದಲ್ಲಿ ರಾಡಾರ್‌ನಿಂದ ನಾಪತ್ತೆಯಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಹೇಳಿದೆ.

‘‘ಸಿರಿಯ ಕರಾವಳಿಯಿಂದ 35 ಕಿಲೋಮೀಟರ್ ದೂರದಲ್ಲಿ ಮೆಡಿಟರೇನಿಯನ್ ಸಮುದ್ರದ ಆಕಾಶದಲ್ಲಿ ರಶ್ಯದ ಐಎಲ್-20 ವಿಮಾನವೊಂದರ ಸಿಬ್ಬಂದಿ ಜೊತೆಗಿನ ಸಂಪರ್ಕ ಕಡಿದುಹೋಗಿದೆ. ಆಗ ವಿಮಾನವು ಹಮೀಮಿಮ್ ವಾಯುನೆಲೆಗೆ ಹಿಂದಿರುಗುತ್ತಿತ್ತು’’ ಎಂದು ರಶ್ಯ ರಕ್ಷಣಾ ಸಚಿವಾಲಯ ಮಂಗಳವಾರ ಬೆಳಗ್ಗೆ ತಿಳಿಸಿದೆ.

ವಿಮಾನದಲ್ಲಿದ್ದ ಸೈನಿಕರ ಸ್ಥಿತಿ ಏನಾಗಿದೆ ಎನ್ನುವುದು ತಿಳಿದಿಲ್ಲ ಎಂದು ಹೇಳಿಕೆಯೊಂದರಲ್ಲಿ ಸಚಿವಾಲಯ ತಿಳಿಸಿದೆ.

ವಿಮಾನಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಮೆಡಿಟರೇನಿಯನ್ ಸಮುದ್ರಕ್ಕೆ ಅಪ್ಪಳಿಸಿತೆ?

ಆಕಾಶದಲ್ಲಿ ನಡೆದ ‘ಅನಿರೀಕ್ಷಿತ ಗಂಭೀರ ಘಟನೆ’ಯೊಂದರ ಪರಿಣಾಮವಾಗಿ ರಶ್ಯದ ಯುದ್ಧ ವಿಮಾನವು ಮೆಡಿಟರೇನಿಯನ್ ಸಮುದ್ರಕ್ಕೆ ಅಪ್ಪಳಿಸಿರಬಹುದು ಎಂದು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ತಂಡದ ಮೂಲವೊಂದು ‘ಇಂಟರ್‌ಫ್ಯಾಕ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದೆ.

ಸೋಮವಾರ ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಇಸ್ರೇಲ್‌ನ 4 ಎಫ್-16 ಯುದ್ಧ ವಿಮಾನಗಳು ಸಿರಿಯದ ಲಟಕಿಯ ಪ್ರಾಂತದ ಆಕಾಶದಲ್ಲಿ ನಡೆಸಿದ ದಾಳಿಯ ವೇಳೆ ರಶ್ಯ ವಿಮಾನ ರಾಡಾರ್‌ನಿಂದ ಮರೆಯಾಗಿದೆ ಎಂದು ರಶ್ಯ ರಕ್ಷಣಾ ಸಚಿವಾಲಯ ಹೇಳಿದೆ.

ಜಗತ್ತಿನ ಪ್ರಥಮ ಜಲಜನಕ ಚಾಲಿತ ರೈಲಿಗೆ ಚಾಲನೆ

ಜಗತ್ತಿನ ಪ್ರಥಮ ಜಲಜನಕ ಚಾಲಿತ ರೈಲಿಗೆ ಜರ್ಮನಿಯಲ್ಲಿ ಸೋಮವಾರ ಚಾಲನೆ ನೀಡಲಾಗಿದೆ.

ಇದು ಮಾಲಿನ್ಯಕಾರಕ ಡೀಸೆಲ್ ಚಾಲಿತ ರೈಲುಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುವ ಮೊದಲ ಹಂತದ ಪ್ರಯತ್ನವಾಗಿದೆ. ಜಲಜನಕ ಚಾಲಿತ ರೈಲು ಪರಿಸರಸ್ನೇಹಿಯಾದರೂ, ಡೀಸೆಲ್ ರೈಲಿಗೆ ಹೋಲಿಸಿದರೆ ದುಬಾರಿಯಾಗಿರುತ್ತದೆ.

ಫ್ರಾನ್ಸ್‌ನ ‘ಅಲ್‌ಸ್ಟಾಮ್’ ಸಂಸ್ಥೆ ನಿರ್ಮಿಸಿರುವ ಎರಡು ನೀಲಿ ಬಣ್ಣದ ‘ಕೊರಾಡಿಯ ಇಲಿಂಟ್’ ರೈಲುಗಳು ಉತ್ತರ ಜರ್ಮನಿಯ ಕಕ್ಸ್‌ಹ್ಯಾವನ್, ಬ್ರೆಮರ್‌ಹ್ಯಾವನ್, ಬ್ರೆಮರ್‌ವೋರ್ಡ್ ಮತ್ತು ಬಕ್ಸ್‌ಟೆಹೂಡ್ ನಗರಗಳ ನಡುವಿನ 100 ಕಿ.ಮೀ. ಮಾರ್ಗದಲ್ಲಿ ಓಡಾಟವನ್ನು ಆರಂಭಿಸಿವೆ.

 ‘‘ಜಗತ್ತಿನ ಮೊದಲ ಜಲಜನಕ ಚಾಲಿತ ರೈಲುಗಳು ವಾಣಿಜ್ಯ ಸೇವೆಯನ್ನು ಆರಂಭಿಸಿವೆ ಹಾಗೂ ಅವುಗಳ ಸಾಮೂಹಿಕ ಉತ್ಪಾದನೆಗೆ ರಂಗ ಸಜ್ಜುಗೊಂಡಿದೆ’’ ಎಂದು ಬ್ರೆಮರ್‌ವೋರ್ಡ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಲ್‌ಸ್ಟಾಮ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆನ್ರಿ ಪೋಪರ್ಟ್-ಲ್ಯಾಫರ್ಜ್ ಹೇಳಿದರು.

ಜಲಜನಕ ರೈಲುಗಳಲ್ಲಿ ಒದಗಿಸಲಾಗಿರುವ ಇಂಧನ ಕೋಶ (ಫುಯೆಲ್ ಸೆಲ್)ಗಳು ಜಲಜನಕ ಮತ್ತು ಆಮ್ಲಜನಕಗಳ ಸಂಯೋಜನೆ ಮೂಲಕ ವಿದ್ಯುತ್ ಉತ್ಪಾದಿಸುತ್ತವೆ. ಈ ಪ್ರಕ್ರಿಯೆಯಲ್ಲಿ ಹೊರಹೊಮ್ಮುವುದು ನೀರು ಮತ್ತು ಆವಿ ಮಾತ್ರ.

ಹೆಚ್ಚುವರಿ ಇಂಧನವು ರೈಲಿನಲ್ಲಿರುವ ಅಯಾನ್ ಲಿತಿಯಮ್ ಬ್ಯಾಟರಿಗಳಲ್ಲಿ ಶೇಖರಣೆಗೊಳ್ಳುವುದು.

ಕೊರಾಡಿಯ ಇಲಿಂಟ್ ರೈಲುಗಳು ಒಂದು ಟ್ಯಾಂಕ್ ಜಲಜನಕದಿಂದ ಸುಮಾರು 1,000 ಕಿ.ಮೀ. ಓಡುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X