ನಿನ್ನ ಕಾಲು ಮುರಿಯುತ್ತೇನೆ: ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಧಮಕಿ !
ಅಸನ್ಸೋಲ್, ಸೆ. 19: ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಮಂಗಳವಾರ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ತಾಳ್ಮೆ ಕಳೆದುಕೊಂಡು, "ನಿನ್ನ ಕಾಲು ಮರಿಯುತ್ತೇನೆ" ಎಂದು ಧಮಕಿ ಹಾಕಿದ ಪ್ರಕರಣ ಬೆಳಕಿಗೆ ಬಂದಿದೆ.
ಅಂಗವಿಕಲರಿಗೆ ಗಾಲಿಕುರ್ಚಿ ಮತ್ತು ಇತರ ಪರಿಕರ ವಿತರಿಸುವ "ಸಾಮಾಜಿಕ ಅಧಿಕಾರಿತಾ ಶಿವಾರ್" ಸಮಾರಂಭಕ್ಕೆ ಸುಪ್ರಿಯೊ ಅವರನ್ನು ಆಹ್ವಾನಿಸಲಾ ಗಿತ್ತು. ಸಾರ್ವಜನಿಕರ ಪೈಕಿ ಓರ್ವ ಸಭೆಯಲ್ಲಿ ಓಡಾಡುತ್ತಿದ್ದುದನ್ನು ಕಂಡ ಸಚಿವರು, ಸಿಡಿಮಿಡಿಗೊಂಡು "ಏಕೆ ಓಡಾಡುತ್ತಿದ್ದಿ ? ಕುಳಿತುಕೊ" ಎಂದು ಹೇಳಿದರು. ಆದರೂ ಆತ ಅತ್ತಿಂದಿತ್ತ ಓಡುತ್ತಿದ್ದುದು ಸಚಿವರ ತಾಳ್ಮೆಗೆಡಿಸಿತು. ಸಚಿವರು ಸಿಟ್ಟಿನಿಂದ, "ನಿನಗೇನಾಗಿದೆ ? ಸಮಸ್ಯೆ ಇದೆಯೇ ?
ನಾನು ನಿನ್ನ ಕಾಲು ಮುರಿದು, ಊರುಗೋಲು ಕೊಡಬಲ್ಲೆ" ಎಂದು ಅಬ್ಬರಿಸಿದರು. ಬಳಿಕ ಭದ್ರತಾ ಸಿಬ್ಬಂದಿಯನ್ನು ಕುರಿತು, "ಇನ್ನು ಆತ ತನ್ನ ಜಾಗದಿಂದ ಎದ್ದು ಓಡಾಡಿದರೆ ಆತನ ಕಾಲು ಮುರಿದು ಊರುಗೋಲು ಕೊಡಿ" ಎಂದು ಆದೇಶಿಸಿದರು.
ಸಚಿವರು ಇಂಥ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಮಾರ್ಚ್ನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆದ ಕೋಮುಗಲಭೆ ವೇಳೆ ಅಸನ್ಸೋಲ್ಗೆ ಭೇಟಿ ನೀಡಿದ್ದ ಸುಪ್ರಿಯೊ, ಪ್ರತಿಭಟನಕಾರರನ್ನು ಕುರಿತು, ನಿಮ್ಮ ಚರ್ಮ ಸುಲಿಯುತ್ತೇನೆ ಎಂದು ಅಬ್ಬರಿಸಿದ್ದರು.
What happened to you? Any problem? I can break one of your legs: Union Minister Babul Supriyo to a man during a program for differently abled people at Nazrul Manch in Asansol #WestBengal pic.twitter.com/cFxpF7K6Pn
— ANI (@ANI) September 18, 2018