ರೈತರಿಗೆ ಕಿರುಕುಳ ನೀಡದಿರಲು ಸಿಎಂ ಸೂಚನೆ
ಬೆಂಗಳೂರು, ಸೆ. 19: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಸೂಚನೆಯ ಮೇರೆಗೆ ಭೂಮಿ ಮೇಲ್ವಿಚಾರಣಾ ಕೋಶ ಸಿದ್ಧಪಡಿಸಿರುವ ಸಾಲಮನ್ನಾ ತಂತ್ರಾಂಶಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಕುರಿತ ದತ್ತಾಂಶವನ್ನು ನೀಡುವಂತೆ ತಿಳಿಸಿ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಬ್ಯಾಂಕುಗಳಿಗೆ ಪತ್ರ ಬರೆದಿದ್ದಾರೆ.
ಬ್ಯಾಂಕುಗಳಿಂದ ಮಾಹಿತಿ ಪಡೆದ ಕೂಡಲೇ, ಸಾಲಮನ್ನಾ ಹಣವನ್ನು ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಸಾಲ ಮರುಪಾವತಿಸುವಂತೆ ರೈತರಿಗೆ ಕಿರುಕುಳ ನೀಡಬಾರದು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Next Story