Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. ಇರಾನ್: ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ...

ಇರಾನ್: ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಕನಿಷ್ಠ 24 ಜನರ ಮೃತ್ಯು

ವಾರ್ತಾಭಾರತಿವಾರ್ತಾಭಾರತಿ22 Sept 2018 9:20 PM IST
share
ಇರಾನ್: ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳಿಂದ ದಾಳಿ

ಟೆಹರಾನ್,ಸೆ.22: 1980ರ ದಶಕದಲ್ಲಿ ಇರಾಕ್ ವಿರುದ್ಧ ಇರಾನ್‌ನ ಸುದೀರ್ಘ ಯುದ್ಧದ ಸ್ಮರಣಾರ್ಥ ಶನಿವಾರ ತೈಲಸಮೃದ್ಧ ಖುಝೆಸ್ತಾನ್ ಪ್ರಾಂತ್ಯದ ರಾಜಧಾನಿ ಅಹ್ವಾಝ್‌ನಲ್ಲಿ ನಡೆಯುತ್ತಿದ್ದ ವಾರ್ಷಿಕ ಮಿಲಿಟರಿ ಪರೇಡ್‌ನ ಮೇಲೆ ಬಂದೂಕುಧಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 24 ಜನರು ಸಾವನ್ನಪ್ಪಿದ್ದು,ಇತರ 53 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಪಥ ಸಂಚಲನದಲ್ಲಿ ತೊಡಗಿದ್ದ ಸೈನಿಕರು,ವೀಕ್ಷಕರು ಮತ್ತು ಸಮೀಪದ ವೇದಿಕೆಯಲ್ಲಿದ್ದ ಸರಕಾರಿ ಅಧಿಕಾರಿಗಳ ಮೇಲೆ ಗುಂಡುಗಳ ಸುರಿಮಳೆಯಾಗಿದ್ದು, ಯಾವುದೇ ಗುಂಪು ತಕ್ಷಣಕ್ಕೆ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.

 ಆದರೆ ಕಳೆದ ವರ್ಷ ಜೂ.7ರಂದು ಐಸಿಸ್ ಇರಾನ್‌ನ ಸಂಸತ್ತು ಮತ್ತು ಆಯತುಲ್ಲಾ ಅವರ ಸಮಾಧಿ ಸ್ಥಳದ ಮೇಲೆ ಭೀಕರ ದಾಳಿ ನಡೆಸಿದ್ದು,ಕನಿಷ್ಠ 18 ಜನರು ಸಾವನ್ನಪ್ಪಿದ್ದರು ಮತ್ತು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಪ್ರದೇಶದಲ್ಲಿನ ಅರಬ್ ಪ್ರತ್ಯೇಕತಾವಾದಿಗಳು ಈ ಹಿಂದೆ ತೈಲ ಕೋಳವೆ ಮಾರ್ಗಗಳ ಮೆಲೆ ದಾಳಿಗಳನ್ನು ನಡೆಸಿದ್ದರು.

ಬೈಕ್‌ನಲ್ಲಿದ್ದ ಖಾಕಿ ಸಮವಸ್ತ್ರ ಧರಿಸಿದ್ದ ಇಬ್ಬರು ಬಂದೂಕುಧಾರಿಗಳು ದಾಳಿಯನ್ನು ನಡೆಸಿದ್ದರು ಎಂದು ಫಾರ್ಸ್ ನ್ಯೂಸ್ ಏಜೆನ್ಸಿಯು ವರದಿ ಮಾಡಿದ್ದರೆ,ಇಬ್ಬರು ದಾಳಿಕೋರರನ್ನು ಕೊಲ್ಲಲಾಗಿದೆ ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ ಎಂದು ಖುಝೆಸ್ತಾನ್ ರಾಜ್ಯಪಾಲ ಘೋಲಮ್‌ರೆಝಾ ಶರಿಯಾತಿ ಅವರು ಸುದ್ದಿಗಾರರಿಗೆ ತಿಳಿಸಿದರು. ದಾಳಿಯ ಹಿಂದೆ ಪ್ರಾದೇಶಿಕ ರಾಷ್ಟ್ರಗಳು ಮತ್ತು ಅವುಗಳ ‘ಅಮೆರಿಕನ್ ಒಡೆಯರ’ ಕೈವಾಡವಿದೆಯೆಂದು ಇರಾನ್‌ನ ವಿದೇಶಾಂಗ ಸಚಿವ ಮುಹಮ್ಮದ್ ಜಾವೇದ್ ಶರೀಫ್ ಅವರು ಆರೋಪಿಸಿದ್ದಾರೆ. ಒಪ್ಪಂದದಿಂದ ಅಮೆರಿಕಾ ಹಿಂದೆ ಸರಿದ ಬಳಿಕ ವಿಶ್ವದ ಪ್ರಬಲ ರಾಷ್ಟ್ರಗಳೊಡನೆ ಇರಾನ್‌ನ ಪರಮಾಣು ಒಪ್ಪಂದ ಬಿಕ್ಕಟ್ಟಿಗೆ ಸಿಲುಕಿರುವುದರಿಂದ ಶರೀಫ್ ಅವರ ಈ ಆರೋಪವು ಪ್ರಾದೇಶಿಕ ಉದ್ವಿಗ್ನತೆಯನ್ನು ಇನ್ನಷ್ಟು ಹೆಚ್ಚಿಸಿದೆ.

ತನ್ನ ಜನರ ರಕ್ಷಣೆಗಾಗಿ ಇರಾನ್ ಚುರುಕಾಗಿ ಮತ್ತು ದೃಢನಿರ್ಧಾರದೊಂದಿಗೆ ಪ್ರತಿಕ್ರಿಯಿಸಲಿದೆ ಎಂದೂ ಶರೀಫ್ ಟ್ವೀಟಿಸಿದ್ದಾರೆ.

 ಭಯೋತ್ಪಾದಕರನ್ನು ವಿದೇಶಿ ಆಡಳಿತವು ಭರ್ತಿ ಮಾಡಿಕೊಂಡು ತರಬೇತುಗೊಳಿಸಿದೆ. ಅವರಿಗೆ ಶಸ್ತ್ರಾಸ್ತ್ರಗಳನ್ನು ಮತ್ತು ಹಣವನ್ನು ಒದಗಿಸಿದೆ ಎಂದು ಶರೀಫ್ ಟ್ವೀಟಿಸಿದ್ದಾರೆ.

ಇರಾನಿನ ಶಿಟ್ಟೆ ಧಾರ್ಮಿಕ ನಾಯಕತ್ವವು ಸುನ್ನಿ ಅರಬ್ ಪ್ರಜೆಗಳ ವಿರುದ್ಧ ತಾರತಮ್ಯಗಳನ್ನೆಸಗುತ್ತಿದೆ ಎಂದು ಅರಬ್ ಪ್ರತ್ಯೇಕತಾವಾದಿಗಳು ಆರೋಪಿಸುತ್ತಿದ್ದರೆ,ಅವರ ಚಟುವಟಿಕೆಗಳಿಗೆ ತನ್ನ ಬದ್ಧವೈರಿಯಾಗಿರುವ ಸೌದಿ ಅರೇಬಿಯಾ ಆರ್ಥಿಕ ನೆರವನ್ನು ಒದಗಿಸುತ್ತಿದೆ ಎಂದು ಇರಾನ್ ದೂರಿದೆ.

ದಾಳಿ ಹೇಗೆ ಆರಂಭಗೊಂಡಿತ್ತು ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಮಿಲಿಟರಿ ಕಮಾಂಡರ್‌ಗಳು ಮತ್ತು ಹಿರಿಯ ಸರಕಾರಿ ಅಧಿಕಾರಿಗಳು ಕುಳಿತಿದ್ದ ವೇದಿಕೆಯ ಹಿಂಬದಿಯಲ್ಲಿರುವ ಉದ್ಯಾನವನದಿಂದ ಗುಂಡಿನ ದಾಳಿ ಆರಂಭಗೊಂಡಿತ್ತು ಎಂದು ಸರಕಾರಿ ಟಿವಿ ವರದಿಗಾರನೋರ್ವ ತಿಳಿಸಿದ.

ತನ್ಮಧ್ಯೆ,ದಾಳಿಕೋರರು ಐಸಿಸ್ ಉಗ್ರರಾಗಿದ್ದರು ಎಂದು ಸರಕಾರಿ ಟಿವಿಯು ಹೇಳಿದೆ.

ದಾಳಿಗೆ ಗುರಿಯಾದ ಸೈನಿಕರು ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ್ದು,ಅರೆ ಮಿಲಿಟರಿ ಪಡೆಯಾಗಿರುವ ಇದು ದೇಶದ ಸರ್ವೋಚ್ಚ ನಾಯಕ ಆಯತುಲ್ಲಾ ಅವರ ನೇರ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಅರಬ ಪ್ರತ್ಯೇಕತಾವಾದಿ ಗುಂಪೊಂದು ಈ ದಾಳಿಯನ್ನು ನಡೆಸಿದೆ ಎಂದು ಗಾರ್ಡ್ ವಕ್ತಾರ ಜ.ರಮಝಾನ್ ಶರೀಫ್ ಅವರು ಹೇಳಿದರಾದರೂ ಹೆಚ್ಚಿನ ವಿವರಗಳನ್ನು ನೀಡಲಿಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X